ಜಲಸಂರಕ್ಷಣೆಯತ್ತ ಗಟ್ಟಿ ಹೆಜ್ಜೆ : ಸುಳ್ಯ ತಾಲೂಕಿನಲ್ಲಿ ಭರವಸೆ ಮೂಡಿಸಿದ ಇಂಗುಗುಂಡಿ ಅಭಿಯಾನ

July 27, 2019
8:00 AM

ಸುಳ್ಯದಲ್ಲಿ  ನಡೆಯುತ್ತಿರುವ ಜಲಾಂದೋಲನ ಭವಿಷ್ಯದ ದೃಷ್ಠಿಯಿಂದ, ಸಮಾಜದ ದೃಷ್ಠಿಯಿಂದಲೂ, ಸಾಮಾಜಿಕ ಕಳಕಳಿಯಿಂದಲೂ ಈ ಅಭಿಯಾನ ಭರವಸೆ ಮೂಡಿಸಿದೆ. ಶಾಲೆಗಳಲ್ಲಿ  ನಡೆಸುತ್ತಿರುವ ಇಂಗುಗುಂಡಿ ಅಭಿಯಾನದ ಮೂಲಕ ಮಕ್ಕಳು ಮನೆಮನೆಯಲ್ಲಿ  ಸಣ್ಣ ಸಣ್ಣ ಇಂಗುಗುಂಡಿ ಮಾಡುತ್ತಿದ್ದಾರೆ. ಯಾವುದೇ ಖರ್ಚಿಲ್ಲದೆ ಮಾಡಬಹುದಾದ ಈ ಕಾರ್ಯದ ಮೇಲೆ ಇಂದಿನ ಬೆಳಕು..

Advertisement
Advertisement

ಸುಳ್ಯ:  ಧನ್ಯವಾದ……

ನಿಹಾರಿಕಾ, 5 ನೇ ತರಗತಿ ಕುಮಾರಸ್ವಾಮಿ ಶಾಲೆ…

ಶುಭಾಶಯ ಇಂಚರ ಶೆಟ್ಟಿ , 7 ನೇ ತರಗತಿ ಕುಮಾರಸ್ವಾಮಿ ಶಾಲೆ…..

ಕಂಗ್ರಾಟ್ಸ್ ರಮೀಜ್..!  9 ನೇ ತರಗತಿ ತೆಕ್ಕಿಲ್ ಶಾಲೆ..

Advertisement

ಇಷ್ಟೇ ಅಲ್ಲ, ಇನ್ನಷ್ಟು ಹೆಸರುಗಳ ಪಟ್ಟಿ ಇದೆ. ಇವರೆಲ್ಲಾ ಮನೆಯಲ್ಲಿ  ಇಂಗುಗುಂಡಿ ನಿರ್ಮಾಣ ಮಾಡಿರುವ ವಿದ್ಯಾರ್ಥಿಗಳು.

 

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಜಲಸಂರಕ್ಷಣೆಗಾಗಿ ಮನೆಮನೆ‌ಇಂಗುಗುಂಡಿ ಅಭಿಯಾನ ನಡೆಯುತ್ತಿದೆ. ಜಲಾಮೃತ ಎಂಬ ಹೆಸರಿನಲ್ಲಿ  ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯೂ ಸಹಕಾರ ನೀಡಿದೆ.

ತಾಲೂಕಿನ ಬಹುಪಾಲು ಶಾಲೆಗಳಲ್ಲಿ  ಈಗಾಗಲೇ ಈ ಅಭಿಯಾನ ನಡೆದಿದೆ.ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇಂಗುಗುಂಡಿ ರಚನೆ ಹಾಗೂ ಜಲಸಂರಕ್ಷಣೆಯ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಲಾಗಿದೆ.  ಇದರ ಫಲವಾಗಿ ಇಂದು ವಿದ್ಯಾರ್ಥಿಗಳು ಮನೆಮನೆಗಳಲ್ಲಿ  ಇಂಗುಗುಂಡಿ ಮಾಡಿ ಶಾಲೆಯ ಅಧ್ಯಾಪಕರಿಗೆ ಮಾಹಿತಿ ನೀಡುತ್ತಿದ್ದಾರೆ. ಒಂದು ಇಂಗುಗುಂಡಿ ಮೂಲಕ ಸಣ್ಣ ಪ್ರಮಾಣದಲ್ಲಿ ಜಲ ಮರುಪುರಣವಾಗುತ್ತದೆ. ಭವಿಷ್ಯದಲ್ಲಿ ಇದರ ಪ್ರಯೋಜನ ಸಾಕಷ್ಟು ಮಂದಿಗೆ ಅರಿವಿಗೆ ಬರುತ್ತದೆ. ಹೀಗಾಗಿ ಸ್ನೇಹ ಶಾಲೆಯ ಈ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಸಮಾಜಕ್ಕೆ ಕೊಡುಗೆಯನ್ನು  ನೀಡಿದೆ.

Advertisement

 

 

ಇನ್ನಷ್ಟು ಶಾಲೆಗಳಲ್ಲಿ  ಇಂಗುಗುಂಡಿ ರಚನೆಗೆ ಪ್ರೇರೇಪಣೆ ದೊರೆಯಬೇಕಿದೆ. ಶಾಲೆಗಳಲ್ಲಿ  ಒಂದು ಅವಧಿಯಲ್ಲಿ ಜಲಸಂರಕ್ಷಣೆಯ ಮಹತ್ವವನ್ನೇ ತಿಳಿಸುವ ಕೆಲಸ ಆಗಬೇಕಿದೆ.

ಮನೆಮನೆ  ಇಂಗುಗುಂಡಿ ಅಭಿಯಾನದ ಸಂದರ್ಭ ಮರ್ಕಂಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲ ಅವರ ಅನುಭವವನ್ನು ಡಾ.ಚಂದ್ರಶೇಖರ ದಾಮ್ಲೆ ಹೀಗೆ ಹಂಚಿಕೊಂಡಿದ್ದಾರೆ,  ಮರ್ಕಂಜ ಸರಕಾರಿ ಶಾಲೆಯ ಬಾವಿಯಲ್ಲಿ ಈ ವರ್ಷ ನೀರು ಆರಿತ್ತು. ಅಲ್ಲಿಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾಬಲರು ಕಳೆದವಾರ ಬಾವಿಯಿಂದ  ಆರು ಅಡಿ ದೂರದಲ್ಲಿ  ಎರಡು ಬದಿಗಳಲ್ಲಿ ಒಂದೊಂದು ಇಂಗು ಗುಂಡಿಗಳನ್ನು ಮಾಡಿದರು. ಅಂಗಳದ ಮಳೆನೀರನ್ನು ಆ ಇಂಗು ಗುಂಡಿಗಳಿಗೆ ಹೋಗುವಂತೆ ಮಾಡಿದರು. ಒಂದೇ ದಿನದಲ್ಲಿ ಪರಿಣಾಮ ಕಾಣಿಸಿತು. ಈಗ ಬಾವಿಯಲ್ಲಿ ನೀರು ತುಂಬಿದೆ. ಇದನ್ನು ಶಾಲಾ ಮುಖ್ಯೋಪಾಧ್ಯಾಯ  ರಾಜೀವ್ ಹಾಗೂ ಶಿಕ್ಷಕ ಬಳಗದವರು ಸಂತಸದಿಂದ ಈ ಸುದ್ದಿ  ಹೇಳುತ್ತಾರೆ. 

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ
ಸುಳ್ಯದಲ್ಲಿ ಜೇನು ಚಾಕಲೇಟ್ ಬಿಡುಗಡೆ | ಜೇನಿನಿಂದಲೇ ಚಾಕಲೇಟ್ ಉತ್ತಮ ಬೆಳವಣಿಗೆ – ಶೋಭಾ ಕರಂದ್ಲಾಜೆ
May 23, 2025
9:54 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group