20 ಶತಮಾನಗಳಲ್ಲಿ 77 ಜಾತಿಯ ಮೃಗಗಳು ಕಣ್ಮರೆ | ಪ್ರಕೃತಿಯ ವಿರುದ್ಧ ನಿಂತ ಮನುಷ್ಯ

February 14, 2024
6:23 PM
ಡಾ.ಎಂ.ಪಿ ಮಂಜಪ್ಪ ಶೆಟ್ಟಿ ಅವರ 'ಮಲೆನಾಡಿನ ಶಿಕಾರಿ' ಪುಸ್ತಕದ ಮುನ್ನುಡಿಯಲ್ಲಿನ ಬರಹವೊಂದು ಇಲ್ಲಿದೆ. ಹಾ ಮಾ ನಾಯಕ ಅವರ ಬರಹ

ಕಳೆದ ಸುಮಾರು ಇಪ್ಪತ್ತು ಶತಮಾನಗಳಲ್ಲಿ ಎಪ್ಪತ್ತೇಳು ಜಾತಿಯ(species) ಮೃಗಗಳು(animal) ಕಣ್ಮರೆಯಾಗಿವೆಯೆಂದು(disappear) ತಜ್ಞರೊಬ್ಬರು(Expert) ಹೇಳುತ್ತಾರೆ. ಇವುಗಳಲ್ಲಿ ನಲವತ್ತೇಳು ಜಾತಿ ನಿಸರ್ಗದ(Natural) ಕಾರಣದಿಂದ ಕಳೆದಿವೆಯಂತೆ. ಮಿಕ್ಕ ಮೂವತ್ತು ಜಾತಿ ಮನುಷ್ಯನ(Human) ಕ್ರೌರ್ಯದಿಂದ ಕಾಣೆಯಾಗಿವೆಯಂತೆ! “ಪ್ರಕೃತಿಯ ವಿರುದ್ಧ ನಿಂತ ಮನುಷ್ಯ ನಿಜಕ್ಕೂ ತನ್ನ ಅವನತಿಯನ್ನು ತಾನೇ ಕಂಡುಕೊಳ್ಳುತ್ತಾನೆ” ಎನ್ನುತ್ತಾರೆ ಅವರು.

Advertisement

“ತಾಜಮಹಲಿನಂತಹ ಒಂದು ದಿವ್ಯ ಕಟ್ಟಡ ನಾಶವಾದರೆ, ಅದನ್ನು ಮರಳಿ ಕಟ್ಟಬಹುದು. ದಿಲ್ಲಿಯ ಕೆಂಪುಕೋಟೆಯೇ ನೆಲಸಮವಾದರೂ ಮತ್ತೆ ಅಂತಹ ಕೋಟೆಗಳನ್ನು ಹತ್ತು ಪಟ್ಟು ಬೃಹತ್ತಾಗಿ ಕಟ್ಟಿಸಬಹುದು. ಆದರೆ ಸಿಂಹದಂತಹ, ಹುಲಿಯಂತಹ ಒಂದು ಜೀವಿ ನಿರ್ನಾಮವಾದರೆ ಯಾರಿಂದಲೂ ಅವುಗಳ ಸಂತತಿಯನ್ನು ಬೆಳೆಸಲಾಗುವುದಿಲ್ಲ.” ಗೊಮ್ಮಟನನ್ನು ನಾವು ಕೆತ್ತಬಹುದು, ಆದರೆ ಅಳಿಯುವ ಗುಬ್ಬಿಯ ಸಂತತಿಯನ್ನು ಬೆಳೆಸುವುದು ಸಾಧ್ಯವಾಗುವುದಿಲ್ಲ ಎಂಬುದನ್ನು ಸದಾ ನಾವು ನೆನಪಿನಲ್ಲಿಟ್ಟುಕೊಂಡು ವರ್ತಿಸಬೇಕು.

ಮನುಷ್ಯನನ್ನೇ ಕೊಲ್ಲುವ, ಅದರಿಂದ ಸಂತೋಷಪಡುವ ಮನುಷ್ಯನಿಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದರಲ್ಲಿ ದುಃಖವಿರಲಾರದು ! ತನ್ನ ಆಹಾರಕ್ಕಾಗಿ ಮನುಷ್ಯ ಹಂದಿಶಿಕಾರಿ ಮಾಡಬಹುದು ; ಆದರೆ ಹಂದಿಗಳು ತಮ್ಮ ಆಹಾರಕ್ಕಾಗಿ ಮನುಷ್ಯನ ಬೆಳೆಗಳನ್ನು ತಿನ್ನಬಾರದು ! ತನ್ನ ರಕ್ಷಣೆಗೆಂದು ಮನುಷ್ಯ ಹುಲಿಶಿಕಾರಿ ಮಾಡಬಹುದು ; ಆದರೆ ತನ್ನ ರಕ್ಷಣೆಗೆಂದು ಹುಲಿ ಮನುಷ್ಯನ ಮೇಲೆ ಬೀಳಬಾರದು ! ಇದು ಮನುಷ್ಯ ನ್ಯಾಯ ; ಮನುಷ್ಯನೇ ನಿರ್ಮಿಸಿಕೊಂಡ ಅರಣ್ಯ ನಿಯಮ ! ಈ ಭೂಮಿ ಮನುಷ್ಯನೊಬ್ಬನಿಗಾಗಿ ಸೃಷ್ಟಿಗೊಂಡಿದ್ದೆ ? ಅವನೊಬ್ಬನಿಗೇ ಬದುಕುವ ಹಕ್ಕಿರುವುದೆ ? ಮಿಕ್ಕ ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಜೀವಿಸುವಂತಿಲ್ಲವೆ ?- ಇಂಥ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುವುದಿಲ್ಲ ! ಇನ್ನು ಉತ್ತರ ಹೇಳುವ ಪ್ರಮೇಯವೆಲ್ಲಿದೆ ?

– ಹಾ.ಮಾ.ನಾಯಕ {ಡಾ.ಎಂ.ಪಿ ಮಂಜಪ್ಪ ಶೆಟ್ಟಿ ಅವರ ‘ಮಲೆನಾಡಿನ ಶಿಕಾರಿ’ ಪುಸ್ತಕದ ಮುನ್ನುಡಿ}

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 17-06-2025 | ಮಳೆ ತೀವ್ರತೆ ಕಡಿಮೆ ನಿರೀಕ್ಷೆ | ಜೂ.18 ರಿಂದ ಸಾಮಾನ್ಯ ಮಳೆ ಸಾಧ್ಯತೆ
June 17, 2025
11:58 AM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಇದುವರೆಗಿನ ಹಾನಿ ಎಷ್ಟು..?
June 17, 2025
11:24 AM
by: The Rural Mirror ಸುದ್ದಿಜಾಲ
ಮುಂದುವರಿದ ಮಳೆ | ಕೊಡಗು ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ | ಇಂದೂ ಹಲವು ಕಡೆ ರೆಡ್ ಅಲರ್ಟ್ |
June 17, 2025
6:53 AM
by: ದ ರೂರಲ್ ಮಿರರ್.ಕಾಂ
ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ
June 16, 2025
11:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group