7ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ | 20 ಭಾಷೆಯ 100ಕ್ಕೂ ಅಧಿಕ ಸಿನಿಮಾ ಪ್ರದರ್ಶನ

October 5, 2024
8:02 PM

ಇನೋವೇಟಿವ್ ಫಿಲ್ಮಂ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿರುವ ಮೂರು ದಿನಗಳ 7ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ  ಕಾರ್ಯದರ್ಶಿ ಸಂಜಯ ಜಾಜು ಉದ್ಘಾಟಿಸಿದರು.

Advertisement
Advertisement

ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಮೂರು ದಿನಗಳ ಕಾರ್ಯಕ್ರಮದಲ್ಲಿ   20ಕ್ಕೂ ಹೆಚ್ಚು ಭಾಷೆಯ   ನೂರಕ್ಕೂ  ಅಧಿಕ ಸಿನಿಮಾ ಪ್ರದರ್ಶನ,  15ಕ್ಕೂ ಹೆಚ್ಚು ದೇಶಗಳ ಸಿನಿ ಆಸಕ್ತರು ಮತ್ತು ತಜ್ಞರಿಂದ ಪರಸ್ಪರ ಮಾಹಿತಿ ವಿನಿಮಯ ಮತ್ತು ಚರ್ಚೆ ನಡೆಯಲಿವೆ. ಬಳಿಕ  ಸಂಜಯ್ ಜಾಜು, ಸಿನಿಮಾ,  ಎಲ್ಲ ತರಹದ ಭಾವನೆಗಳನ್ನು ಒಳಗೊಂಡ ಸಂಕಲನ. ಮನೋರಂಜನೆಯ ಮುಖ್ಯ ತಾಣ ಸಿನಿಮಾ.  ಇಂದು  ಉತ್ಸಾಹಿ ಯುವಕರಿಂದ  ಉತ್ತಮ ಚಿತ್ರಗಳು   ನಿರ್ಮಾಣಗೊಳ್ಳುತ್ತಿವೆ. ಯುವ ಸಮುದಾಯಕ್ಕೆ ಸಹಕಾರ  ಲಭಿಸಿದರೆ,  ಭವಿಷ್ಯದಲ್ಲಿ  ಗುಣಮಟ್ಟದ ಚಿತ್ರಗಳು  ಹೊರಬರಲು ಸಾಧ್ಯವಾಗಲಿದೆ ಎಂದರು. ಈ ವೇಳೆ  ನಟಿ ಮಾಲಾಶ್ರೀ ಅವರಿಗೆ  ಆಕ್ಷನ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ, ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ  ಕೌಟುಂಬಿಕ ಮನರಂಜನಾ ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿಯನ್ನು ತೇಜ ಸಜ್ಜ ಪಡೆದರೆ,   ಮುರಳಿ ಶರ್ಮಾ ಬಹುಮುಖ ನಟ ಪ್ರಶಸ್ತಿಯನ್ನು ಹಾಗೂ   ಕುಟ್ಟಿ ಪದ್ಮಿನಿ ಅವರು  ಭಾರತೀಯ ಚಿತ್ರರಂಗದ ಸ್ಫೂರ್ತಿ ಪ್ರಶಸ್ತಿ  ಸ್ವೀಕರಿಸಿದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಶೋಧನಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಹೆಚ್ಚಿನ ಉತ್ತೇಜನ | ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
October 5, 2024
9:42 PM
by: ದ ರೂರಲ್ ಮಿರರ್.ಕಾಂ
ಅಡುಗೆ ಎಣ್ಣೆ ಸ್ವಾವಲಂಬನೆಯ ಗುರಿ | 10 ಸಾವಿರ ಕೋಟಿಗೂ ಅಧಿಕ ಹಣಕಾಸು ಸೌಲಭ್ಯ | ತಾಳೆ ಬೆಳೆಯತ್ತಲೂ ಚಿತ್ತ |
October 5, 2024
9:04 PM
by: ದ ರೂರಲ್ ಮಿರರ್.ಕಾಂ
ಅರಣ್ಯ ಬೆಳೆಸುವುದರ ಜೊತೆಗೆ ವನ್ಯ ಜೀವಿಗಳನ್ನು ಕಾಪಾಡಬೇಕಿದೆ | ತುಮಕೂರಿನಲ್ಲಿ 70ನೇ ವನ್ಯ ಜೀವಿ ಸಪ್ತಾಹ |
October 5, 2024
8:43 PM
by: ದ ರೂರಲ್ ಮಿರರ್.ಕಾಂ
ದೇಶದಲ್ಲಿ ಸಹಕಾರಿ ವಲಯದ ಪಾತ್ರ ಮುಂದಿನ ದಿನಗಳಲ್ಲಿ ಮಹತ್ವ ಪಡೆಯಲಿದೆ | ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವದಲ್ಲಿ ಅಮಿತ್‌ ಶಾ |
October 5, 2024
8:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror