ಪ್ರಸ್ತುತ ನೀರಿನ ಹಾಗೂ ಭೂಮಿಯ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆ | ಇಂದಿನ ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ.?

April 8, 2024
12:59 PM

ದಿನದಿಂದ ದಿನಕ್ಕೆ ನಮ್ಮ ಪರಿಸರ(Environment) ವಿನಾಶದತ್ತ ಸಾಗುತ್ತಿದೆ. ಇದರ ಪರಿಣಾಮ ಮಳೆಕೊರತೆ(Rain Crisis), ಹೆಚ್ಚಿದ ತಾಪಮಾನ(Heat wave), ಪ್ರಳಯ(Flood), ವಿವಿಧ ತೆರನಾದ ರೋಗಗಳನ್ನು(Desease) ನಾವು ಎದುರಿಸುತ್ತಿದ್ದೇವೆ. ಇದಕ್ಕೆ ಮನುಷ್ಯನ ಅತಿಯಾಸೆಯೇ ಕಾರಣ. ಈಗಾಗಲೇ ನಮ್ಮ ಪ್ರಕೃತಿ ವಿನಾಶದತ್ತ ತಲುಪಿ ಅದರ ಪ್ರಕೋಪವನ್ನು ಮನುಜನಿಗೆ ತಿರುಗಿಸಿ ಕೊಡುತ್ತಿದೆ. ಇದರಿಂದ ಪಾರಾಗಬೇಕಾದರೆ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಹಾಗಾಗಿ ಇತ್ತೀಚೆಗೆ ತುಮಕೂರಿನ ಸರ್ಕಾರಿ ಕಾಲೇಜೊಂದರಲ್ಲಿ  ಪ್ರಸ್ತುತ ನೀರಿನ ಹಾಗು ಭೂಮಿಯ ಸಮಸ್ಯೆಗಳ ಬಗೆಗಿನ ಚರ್ಚೆ ನಡೆಯಿತು. ಈ ಬಗ್ಗೆ ಬಂದಿರುವ ಸಂಕ್ಷಿಪ್ತ ವರದಿ ಇಲ್ಲಿದೆ..

1. ಇಂದಿನ ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳೇನು..?  ಬೃಹತ್ ಕಾರ್ಖಾನೆಗಳೋ.? ಮನೆ ಮುಂಗಟ್ಟಿನ ದುಂದು ವೆಚ್ಚವೋ.? ಅಥವಾ ಕಾರ್ಖಾನೆಗಳಿಂದಲೀ ,  ಕೃಷಿ ಪದ್ದತಿಯಿಂದಲೋ.?  :  ನಿಮಗೆ ಗೊತ್ತಿರಲಿ, ಶೇಕಡ 89% ನೀರು ಸುಮ್ಮನೆ ಹಾಳಾಗುತ್ತಿರುವುದು ಕಾರ್ಖಾನೆ-ಕೃಷಿಯಿಂದ..!!!

2. ಇಂದಿನ ಹವಾಮಾನ ಬಿಕ್ಕಟ್ಟಿಗೆ ಮುಖ್ಯ ಕಾರಣವೇನು..? : ಬೆಟ್ಟ ಗುಡ್ಡ ಹಾಳುಗೆಡವಿದಕ್ಕೋ.? ಜನಸಂಖ್ಯೆ ಹೆಚ್ಚಾಗಿದ್ದಕ್ಕೋ.? ಎಲ್ಲೆಲ್ಲೂ ಕಾಂಕ್ರೀಟ್ ಮಯವಾದ ಕಾರಣಕ್ಕೋ.? ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೋ.? ಕ್ಯಾಪಿಟಲಿಸ್ಟ್ ಗಳ ದಬ್ಬಾಳಿಕೆ ಹಾಗು ಹಾವಳಿಗೋ.? :  ಭೂ ಮಂಡಲದಲ್ಲಿ ಹೆಚ್ಚು ಕಡಿಮೆ ಶೇ90% ಜನ ಸರಳವಾಗಿಯೇ ಬದುಕುತ್ತಿದ್ದಾರೆ… ಕ್ಯಾಪಿಟಲಿಸ್ಟ್ / ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದ್ದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಡೆವಲಪ್ಮೆಂಟ್ ಅನ್ನೋ ಹೆಸರಿಟ್ಟುಕೊಂಡು ಲೂಟಿ ಹೊಡೆಯುತ್ತಿದ್ದಾರೆ ಮತ್ತು ಅಂಥವರಿಗೆ ನಮ್ಮ ಸರ್ಕಾರದವರು ರತ್ನಗಂಬಳಿ ಹಾಸಿ ಕರೆಯುತ್ತಿದ್ದಾರೆ.. ಇದು ಮುಖ್ಯ ಕಾರಣ..!!!

3. ಹಾಗಾದ್ರೆ, ಇಂದಿನ ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ.? ಖಂಡಿತ ಸಾಧ್ಯ. ಮನುಷ್ಯನು ಮಾಡಿಕೊಂಡ ಸಮಸ್ಯೆ, ಅವನೇ ಉತ್ತರ ಹುಡುಕಿಕೊಳ್ಳಬೇಕು ಅಷ್ಟೇ. ಲಾಪೋಡಿಯದ ಲಕ್ಷ್ಮಣ್ ಸಿಂಗ್, ಮಹಾರಾಷ್ಟ್ರದ ಪಾನಿ ಫೌಂಡೇಶನ್, ರಾಜಸ್ಥಾನದ ರಾಜೇಂದ್ರ ಸಿಂಗ್ ಅಂತಹವರು ನಮಗೆ ನಿದರ್ಶನ.. ಜನ ಚಳುವಳಿಯಿಂದ ಖಂಡಿತ ಸಾಧ್ಯವಿದೆ..!!! ಪ್ರೀತಿ, ಮಮತೆ, ಅನುಬಂಧ, ತಾಳ್ಮೆ ಹಾಗು ಸಹನೆ ಹೊಂದಿರುವ ನಾಯಕ/ನಾಯಕಿಯ ಮುಂದಾಳತ್ವದ ಅವಶ್ಯಕತೆಯಿದೆಯಷ್ಟೆ. ಕೃಷಿ ನೀತಿ, ಎಕಾನಮಿ ಹಾಗು ಡೆವಲಪ್ಮೆಂಟ್ ನ ದೃಷ್ಟಿಕೋನ, ಯುವಕರಲ್ಲಿ ನೈಸರ್ಗಿಕ ಸಮನ್ಮೂಲಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಇನ್ನ ಇಪತ್ತು-ಮೂವತ್ತು ವರ್ಷಗಳಲ್ಲಿ ಈ ಬಿಕಟ್ಟಿನಿಂದ ಹೊರಬರಲು ಖಂಡಿತ ಸಾಧ್ಯವಿದೆ..

ಇಲ್ಲದಿದ್ದರೆ ಏನಾದೀತು..? :  ಕೃಷಿಭೂಮಿ ಮರುಭೂಮಿಯಾಗುವುದು,  ಅಪೌಷ್ಠಿಕತೆ ತಾಂಡವ ವಾಡುವುದು, ನೀರಿಗಾಗಿ ಹಪಾಹಪಿತನ ಹುಟ್ಟುವುದು,  ಉಸಿರಾಡೋ ಗಾಳಿಗೂ ಅಭಾವ ಹೆಚ್ಚುವುದು,  ಮನುಷ್ಯನ ಜೀವಿತ ಅವಧಿ ಕ್ಷೀಣಿಸುವುದು, ಬಡಜನರಿಗಂತೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಗ-ರುಜಿನಗಳಿಗೆ ಸಿಕ್ಕಿ ನರಳುವಂತಾಗುತ್ತದೆ, ಇನ್ನೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಭಿಕಾರಿಗಳಾಗುವರು, ಬಹಳಷ್ಟು ಗಿಡ-ಮರಗಳು, ಜೀವ-ಜಂತುಗಳು ಮಾಯವಾಗುವವು, ಬಿಸಿಲಿನ ಆರ್ಭಟ ಹೆಚ್ಚುವುದು, ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಸಮುದ್ರದ ಪಾಲಾಗುವುದು… ಹೇಳುತ್ತಿದ್ದರೆ ಕೊನೆಯಿಲ್ಲ… ಹೀಗೆ ಭೀಕರ ಸ್ಥಿತಿಗೆ ಸಿಲುಕಿ, ನರಳಾಟದ ಬದುಕು ನಮ್ಮ ಮುಂದೆ ಈಗ ಕನ್ನಡಿ ಹಿಡಿದಂತಿದೆ..

4. ನಮ್ಮ ಮುಂದಿನ ಸ್ಥಿತಿಗತಿ ಹೀಗಿದ್ದಲ್ಲಿ, ನಾವೇನು ಮಾಡಬೇಕು.?

  • ಮೊದಲು ಈ ವಿಪರೀತ ಹಣಕ್ಕಾಗಿ ಹೋರಾಡುತ್ತಿರುವ ಬದುಕನ್ನು ಸರಳವಾಗಿಸಿಕೊಳ್ಳಬೇಕು, ವ್ಯಾಪಾರೀಕರಣದ, ಹೊಡೆದಾಟದ, ವ್ಯಾಮೋಹದ ಬದುಕನ್ನು ಬಿಡಬೇಕು.. ಪ್ರೀತಿ, ಸಹನೆ, ಸಂತೃಪ್ತಿಯ ಬದುಕನ್ನು ಕಟ್ಟಿಕೊಳ್ಳಬೇಕು.
  • ಪ್ರಕೃತಿಯನ್ನು – ಮನುಷ್ಯರನ್ನು ಹಿಂಸಿಸದ ರೀತಿಯಲ್ಲಿ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು.
  • ಎಲ್ಲಾ ಜೀವಿಗಳು ನಮ್ಮಂತೆಯೇ ಎಂದು ಭಾವಿಸುವ, ಗೌರವಿಸುವ, ಪ್ರೀತಿಸುವ ವಿಚಾರಧಾರೆಗಳನ್ನು ಮಕ್ಕಳಲ್ಲಿ ಕಾರ್ಯರೂಪಿತವಾಗಿ ತರಬೇಕು.
  • ಮನೆ, ಶಾಲೆ ಹಾಗು ಕಟ್ಟಡಗಳು ಚಿಕ್ಕದಾಗಿ, ಗಿಡ-ಮರ ಬಳ್ಳಿಯ ಸಂಯೋಜನೆಯಲ್ಲಿ ಕಟ್ಟಿಕೊಳ್ಳಬೇಕು. ಮಳೆ ನೀರಿನ ಕೊಯ್ಲು ಹಾಗು ಶೇಖರಣೆ, ಮಣ್ಣಿನ ಬಗ್ಗೆ ಮಮತೆ, ವಿಜ್ಞಾನ ಹಾಗು ಅರಿವು ಎಲ್ಲರಲ್ಲೂ ಮನೆಮಾಡಬೇಕು.
  • ಕೃಷಿ ಹಾಗು ಗುಡಿ ಕೈಗಾರಿಕೆಗಳು ಹಳ್ಳಿ-ಹಳ್ಳಿಗಳಲ್ಲೂ ಸ್ಥಾಪಿತವಾಗಬೇಕು.
  • ಬಂಡವಾಳ ಶಾಹಿಗಳು / ದೊಡ್ಡ ದೊಡ್ಡ ಕಾರ್ಖಾನೆಗಳು / ಬಹು ರಾಷ್ಟ್ರೀಯ ಕಂಪನಿಗಳು ಲಗ್ಗೆ ಇಡದಂತೆ ನೋಡಿಕೊಳ್ಳಬೇಕು.
  • ಗ್ರಾಮ ಪಂಚಾಯಿತಿ ನಮ್ಮ ಪ್ರಮುಖ ಸರ್ಕಾರವಾಗಬೇಕು.
  • ಜನರ ಸಹಭಾಗಿತ್ವದ ನೀತಿ ಜಾರಿಗೊಳಿಸಬೇಕು.
  • ಸರಳತೆ, ಶಾಂತಿ, ಪ್ರೀತಿಯ ಬದುಕು ಮಕ್ಕಳ ಪಾಠಗಳಲ್ಲಿ ಲೀನವಾಗಬೇಕು.
  • ಮಕ್ಕಳನ್ನು ಕಾಯಕಕ್ಕೆ ರೂಢಿ ಮಾಡಬೇಕು.
  • ಕಾಯಕ ಆಧಾರಿತ ಕಲಿಕೆ ಪ್ರತಿ ಹಳ್ಳಿಗಳಲ್ಲೂ ಸ್ಥಾಪಿತವಾಗಬೇಕು.

ಹೀಗೆ ಹತ್ತು ಹಲವು ಬಗೆಯ ಚಿಂತನೆ ಚರ್ಚೆಗಳೊಂದಿಗೆ..ಕಥೆಗಳ ಸ್ವರೂಪಗೊಂದಿಗೆ ಎರಡು ತಾಸು ವಿದ್ಯಾರ್ಥಿಗಳ ಜೊತೆಗಿನ ಸಂವಾದ – ಚರ್ಚೆ ನಡೆಯಿತು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |
March 17, 2025
3:33 PM
by: ಸಾಯಿಶೇಖರ್ ಕರಿಕಳ
ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror