ಬತ್ತಿದ ನದಿಗೆ ನೀರು ಹರಿಸಿದ ಕರುಣಾಮಯಿ ಕೃಷಿಕ | ವನ್ಯಜೀವಿಗಳ ದಾಹ ನೀಗಿಸಲು ಶಿವಮೊಗ್ಗದ ರೈತನ ಹೊಸ ಪ್ರಯತ್ನ

March 23, 2024
11:46 PM

 ನದಿ ಪಾತ್ರದಲ್ಲಿ ವಾಸಿಸುವ ಅನೇಕ ಕೃಷಿಕರು(Farmer) ನದಿ ನೀರನ್ನು(Watre) ಅವಲಂಬಿಸಿ ಕೃಷಿ ಚಟುವಟಿಕೆ(Agriculture) ಮಾಡುತ್ತಾರೆ. ಹಾಗೆ ಬೇಸಗೆಯಲ್ಲಿ(summer) ಬೋರ್‌ ವೆಲ್‌(Bore well), ಬಾವಿ(Well), ಕೆರೆ(Lake) ಬತ್ತಿದಾಗ ಅನೇಕರು ಮೊರೆ ಹೋಗೋದು ನದಿ ನೀರನ್ನು(River water). ಆದರೆ ನದಿ ನೀರೆ ಬತ್ತಿ ಹೋದರೆ ಏನು ಮಾಡೋದು. ಮನುಷ್ಯರಾದ ನಾವು ಹೇಗೋ ಬೇರೆಡೆ ಹೋಗಿ ನೀರು ತರಬಹುದು. ಆದರೆ ಪ್ರಾಣಿ ಪಕ್ಷಿಗಳು(Animal-Birds) ಏನು ಮಾಡೋದು. ಆದರೆ ಇಲ್ಲೋಬ್ಬ ರೈತ ಕೇವಲ ಪ್ರಾಣಿ ಪಕ್ಷಿಗಳಿಗಾಗಿ ನದಿಗೇ ತನ್ನ ಕೊಳವೇ ಬಾವಿಯಿಂದ ನೀರನ್ನು ಹರಿಸುತ್ತಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯ ರೈತನೊಬ್ಬ ನದಿಗೆ (River) ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ : ಹೌದು, ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸುಡೂರಿನ ಮಂಜುನಾಥ ಭಟ್‌ ಎಂಬ ರೈತರು ಈ ರೀತಿಯಾಗಿ ನದಿಗೆ ನೀರು ಹರಿಸುವ ಕಾಯಕ ಮಾಡುತ್ತಾ ಬಂದಿರುವುದಾಗಿ ‘ಉದಯವಾಣಿ’ ವರದಿ ಮಾಡಿದೆ. ಇವರ ಕೃಷಿ ಜಮೀನಿಗೆ ಪಕ್ಕದಲ್ಲೇ ಕುಮುದ್ವತಿ ನದಿ ಹರಿಯುತ್ತದೆ. ಆದರೆ, ಈ ಬಾರಿಯ ಸುಡು ಬಿಸಿಲಿನಿಂದ ನದಿಯೂ ಬತ್ತಿ ಹೋಗಿದೆ.

ಪ್ರತಿ ಬೇಸಿಗೆಯಲ್ಲೂ ಈ ಕುಮುದ್ವತಿ ನದಿಯನ್ನೇ ಪ್ರಾಣಿ, ಪಕ್ಷಿಗಳು ಅವಲಂಬಿಸಿಕೊಂಡು ಬಂದಿದೆ. ಈ ಸಲ ನದಿಯಲ್ಲೇ ನೀರು ಇಲ್ಲದ್ದಾಗಿದ್ದು ಪ್ರಾಣಿ, ಪಕ್ಷಿಗಳ ದಾಹಕ್ಕೆ ಮಂಜುನಾಥ ಭಟ್‌ ಅವರು ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿದಿನ ತಮ್ಮ ಕೃಷಿಗೆ ಬಳಸುವ ಕೊಳವೆಬಾವಿಯ ನೀರನ್ನು ಪೈಪ್‌ ಬಳಸಿ ನದಿಗೆ ಜೋಡಿಸಿ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಕರೆಂಟ್‌ ಇಲ್ಲದೇ ಹೋದಲ್ಲಿ ಡೀಸೆಲ್‌ ಎಂಜಿನ್‌ ಮೋಟಾರ್‌ ಬಳಸಿ ನೀರು ಹರಿಸುತ್ತಾ ಬಂದಿದ್ದಾರೆ. ಇದರಿಂದಾಗಿ ವನ್ಯಜೀವಿಗಳು ನೀರು ಕುಡಿದು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ
ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ
July 15, 2025
7:26 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ
July 14, 2025
11:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group