ಬತ್ತಿದ ನದಿಗೆ ನೀರು ಹರಿಸಿದ ಕರುಣಾಮಯಿ ಕೃಷಿಕ | ವನ್ಯಜೀವಿಗಳ ದಾಹ ನೀಗಿಸಲು ಶಿವಮೊಗ್ಗದ ರೈತನ ಹೊಸ ಪ್ರಯತ್ನ

March 23, 2024
11:46 PM

 ನದಿ ಪಾತ್ರದಲ್ಲಿ ವಾಸಿಸುವ ಅನೇಕ ಕೃಷಿಕರು(Farmer) ನದಿ ನೀರನ್ನು(Watre) ಅವಲಂಬಿಸಿ ಕೃಷಿ ಚಟುವಟಿಕೆ(Agriculture) ಮಾಡುತ್ತಾರೆ. ಹಾಗೆ ಬೇಸಗೆಯಲ್ಲಿ(summer) ಬೋರ್‌ ವೆಲ್‌(Bore well), ಬಾವಿ(Well), ಕೆರೆ(Lake) ಬತ್ತಿದಾಗ ಅನೇಕರು ಮೊರೆ ಹೋಗೋದು ನದಿ ನೀರನ್ನು(River water). ಆದರೆ ನದಿ ನೀರೆ ಬತ್ತಿ ಹೋದರೆ ಏನು ಮಾಡೋದು. ಮನುಷ್ಯರಾದ ನಾವು ಹೇಗೋ ಬೇರೆಡೆ ಹೋಗಿ ನೀರು ತರಬಹುದು. ಆದರೆ ಪ್ರಾಣಿ ಪಕ್ಷಿಗಳು(Animal-Birds) ಏನು ಮಾಡೋದು. ಆದರೆ ಇಲ್ಲೋಬ್ಬ ರೈತ ಕೇವಲ ಪ್ರಾಣಿ ಪಕ್ಷಿಗಳಿಗಾಗಿ ನದಿಗೇ ತನ್ನ ಕೊಳವೇ ಬಾವಿಯಿಂದ ನೀರನ್ನು ಹರಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರೈತನೊಬ್ಬ ನದಿಗೆ (River) ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ : ಹೌದು, ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸುಡೂರಿನ ಮಂಜುನಾಥ ಭಟ್‌ ಎಂಬ ರೈತರು ಈ ರೀತಿಯಾಗಿ ನದಿಗೆ ನೀರು ಹರಿಸುವ ಕಾಯಕ ಮಾಡುತ್ತಾ ಬಂದಿರುವುದಾಗಿ ‘ಉದಯವಾಣಿ’ ವರದಿ ಮಾಡಿದೆ. ಇವರ ಕೃಷಿ ಜಮೀನಿಗೆ ಪಕ್ಕದಲ್ಲೇ ಕುಮುದ್ವತಿ ನದಿ ಹರಿಯುತ್ತದೆ. ಆದರೆ, ಈ ಬಾರಿಯ ಸುಡು ಬಿಸಿಲಿನಿಂದ ನದಿಯೂ ಬತ್ತಿ ಹೋಗಿದೆ.

ಪ್ರತಿ ಬೇಸಿಗೆಯಲ್ಲೂ ಈ ಕುಮುದ್ವತಿ ನದಿಯನ್ನೇ ಪ್ರಾಣಿ, ಪಕ್ಷಿಗಳು ಅವಲಂಬಿಸಿಕೊಂಡು ಬಂದಿದೆ. ಈ ಸಲ ನದಿಯಲ್ಲೇ ನೀರು ಇಲ್ಲದ್ದಾಗಿದ್ದು ಪ್ರಾಣಿ, ಪಕ್ಷಿಗಳ ದಾಹಕ್ಕೆ ಮಂಜುನಾಥ ಭಟ್‌ ಅವರು ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿದಿನ ತಮ್ಮ ಕೃಷಿಗೆ ಬಳಸುವ ಕೊಳವೆಬಾವಿಯ ನೀರನ್ನು ಪೈಪ್‌ ಬಳಸಿ ನದಿಗೆ ಜೋಡಿಸಿ ನೀರು ಹರಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ಕರೆಂಟ್‌ ಇಲ್ಲದೇ ಹೋದಲ್ಲಿ ಡೀಸೆಲ್‌ ಎಂಜಿನ್‌ ಮೋಟಾರ್‌ ಬಳಸಿ ನೀರು ಹರಿಸುತ್ತಾ ಬಂದಿದ್ದಾರೆ. ಇದರಿಂದಾಗಿ ವನ್ಯಜೀವಿಗಳು ನೀರು ಕುಡಿದು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ
ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ
August 2, 2026
7:14 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ
August 2, 2026
6:58 AM
by: ದ ರೂರಲ್ ಮಿರರ್.ಕಾಂ
ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ
August 2, 2026
6:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror