ರೈತನಿಗೆ ಬಂತು ಐಟಿ ನೋಟಿಸ್…! | 1.60 ಕೋಟಿ ರೂಪಾಯಿ ತೆರಿಗೆ ಪಾವತಿಗೆ 23 ಬಾರಿ ನೋಟೀಸ್..!‌ |

June 9, 2023
8:44 PM

ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದರೆ 23 ಬಾರಿ ಒಂದೇ ತಪ್ಪಾಗುವುದು  ಹೇಗೆ..? ಅದು ಅಚ್ಚರಿ. ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಫಲೋಡಾ ಗ್ರಾಮದ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತರಿಗೆ ತೆರಿಗೆ ಪಾವತಿ ಮಾಡುವಂತೆ 23 ಬಾರಿ ಇಲಾಖೆಯು ನೋಟೀಸ್‌ ನೀಡಿದೆ. ಇದೀಗ ಈ ಸಂಗತಿ ಬಹಿರಂಗವಾಗಿದೆ.

ಉತ್ತರ ಪ್ರದೇಶದ ಮುಜಾಫರ್  ಜಿಲ್ಲೆಯ 50 ವರ್ಷದ ಉಪದೇಶ್ ತ್ಯಾಗಿ ಎಂಬ ರೈತನೊಬ್ಬರಿಗೆ ಐಟಿ ನೋಟಿಸ್ ಬಂದಿದೆ. ಸುಮಾರು 23 ನೋಟಿಸ್‌ಗಳನ್ನು ಸ್ವೀಕರಿಸಿದ್ದು, 1.6 ಕೋಟಿ ರೂಪಾಯಿಗಳ ಬಾಕಿ ತೆರಿಗೆ ಪಾವತಿಸುವಂತೆ ಕೇಳಿದ್ದಾರೆ. ಉಪದೇಶ ತ್ಯಾಗಿ ಎಂಬ ರೈತ ಸಣ್ಣ ರೈತನಾಗಿದ್ದು, ತೆರಿಗೆ ಪಾವತಿಸಲು ಅಷ್ಟು ದೊಡ್ಡ ಮೊತ್ತದ ಹಣವಿಲ್ಲ ಎಂಬ ಕಾರಣಕ್ಕೆ ನೋಟಿಸ್‌ಗಳನ್ನು ಸ್ವೀಕರಿಸಿ ಆಘಾತಗೊಂಡಿದ್ದಾರೆ.

ನಾನು ಬಡ ರೈತ ಅಂತ ಆದಾಯ ತೆರಿಗೆ ಇಲಾಖೆಗೆ ತೆರಳಿ ಉಪದೇಶ್ ತ್ಯಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಅವರ ಮಾತು ಕೇಳದ ಅಧಿಕಾರಿಗಳು, ಆದಷ್ಟು ಬೇಗ ಹಣ ಕಟ್ಟುವಂತೆ ತಾಕೀತು ಮಾಡಿದ್ರಂತೆ!. ಆದಾಯ ತೆರಿಗೆ ಇಲಾಖೆ ನೋಟಿಸ್ ನೋಡಿದ ನಂತರ ನಾನು ನನ್ನ ಔಷಧಿ, ಆದಾಯ ತೆರಿಗೆ ಕಚೇರಿಗಳಿಗೆ ದಿನನಿತ್ಯ ಪ್ರಯಾಣ, ವಕೀಲರ ಶುಲ್ಕ, ಪತ್ರಗಳು ಮತ್ತು ಅಫಿಡವಿಟ್ಗಳನ್ನು ಪಡೆಯಲು 50,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಅಂತ ರೈತ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ
August 9, 2026
6:28 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದ 69.60 ಲಕ್ಷ ಹೆಕ್ಟೇರ್ ಭೂಮಿ ಹಾನಿ – ಕೃಷಿ ಉತ್ಪಾದಕತೆಗೆ ದೊಡ್ಡ ಸವಾಲು
August 9, 2026
6:11 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ತೆರೆ – ಮಣಿ ಸರ್ಬರ್‌ತೋ ಚಾಂಪಿಯನ್
August 8, 2026
8:40 PM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನಿಂದ ರೈಲಿನಲ್ಲಿ ಸಾಗಿಸುತ್ತಿದ್ದ 10 ಟನ್ ಅಡಿಕೆ ವಶ
August 8, 2026
7:54 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror