Advertisement
Opinion

ಮನೆಯಲ್ಲೊಂದು ಜಂಬೂ ನೇರಳೆ ಮರ | ಕಷ್ಟಪಟ್ಟರೆ ಫಲ ಉಂಟು

Share

ಸಾಂಪ್ರದಾಯಿಕ ಜಂಬು ನೇರಳೆಗಿಂತ(syzygium fruit) ಹಣ್ಣಾಗುವಾಗ ಕೆಂಪು ಒತ್ತು ಜಾಸ್ತಿ. ಒಳ್ಳೆಯ ಹಣ್ಣಾದರೆ ಹತ್ತಿಯಂತೆ ಮೃದು ಮತ್ತು ಬಹಳ ರುಚಿ. ಆದರೇನು ಮಾಡೋಣ? ಬೆಳೆಯುವುದು, ಹಣ್ಣಾಗುವವರೆಗೂ ಕಾದು ಕಾದು ಹಣ್ಣಾಗುವಾಗ ನಮಗೆ ಉಳಿಯುವುದು ಬಾವಲಿ(Bat) ತಿಂದದ್ದರ ಅರ್ಧ ಪಾಲು ಮಾತ್ರ. ಪ್ರಾಮಾಣಿಕವಾಗಿ ಹೇಳುವೆ ಒಂದಾದರೂ ಇಡಿಯ ಹಣ್ಣನ್ನು ಪೂರ್ಣವಾಗಿ ತಿನ್ನಲು ಸಿಕ್ಕುವುದು ಕಷ್ಟ.

ಈ ವರ್ಷ ಹಣ್ಣಿನ ಬೆಳೆ ಸಮೃದ್ಧ. ಸುಮಾರು 35 ಅಡಿ ಎತ್ತರದ ಮರದ ಗೆಲ್ಲು ಗೆಲ್ಲುಗಳಲ್ಲು ಹೂ ಬಿಟ್ಟಿತ್ತು ಕಾಯಿ ಕಚ್ಚಿತ್ತು. ಮರವನ್ನು ದಿನಕ್ಕೊಮ್ಮೆಯಾದರೂ ನೋಡುವ ಮೊಮ್ಮಕ್ಕಳು ಹಣ್ಣು ತಿನ್ನುವುದು ಯಾವಾಗ ಅಜ್ಜ ಎಂದು ಕೇಳುವಾಗ ಏನಾದರೂ ಉಪಾಯ ಮಾಡಲೇಬೇಕೆಂದು ಮನಸ್ಸು ಹೇಳಿತು. ಮರಕ್ಕೆ ಬಲೆಯನ್ನು ಹಾಕಿದರೆ ಬಾವಲಿ ಮತ್ತು ಪಕ್ಷಿ ಸಂಕುಲಗಳಿಂದ ಕಾಪಾಡಬಹುದು ಎಂಬ ಮಾಹಿತಿಯಂತೆ ಕಾಯಿ ಬೆಳೆಯುತ್ತಾ ಬಂದಂತೆ ಬಲೆಯನ್ನು ಮರಕ್ಕೇರಿಸುವ ಪ್ರಯತ್ನದತ್ತ ಹೊರಟೆ. ದೊಡ್ಡದಾದ ಬಲೆಯನ್ನು ಎತ್ತರಕ್ಕೆ ಏರಿಸುವಾಗಲೇ ಅದರ ಸಮಸ್ಯೆಯ ಪೂರ್ಣ ಅರಿವಾಗುವುದು.

ಬಲೆ ಮುದ್ದೆ ಕಟ್ಟಿಕೊಳ್ಳುವುದು, ಗಿಡದ ಗೆಲ್ಲುಗಳೆ ಬಲೆಯನ್ನು ಕಚ್ಚಿ ಹಿಡಿದುಕೊಳ್ಳುವುದು, ಅಡಿಕೆ ತೋಟದ ಬದಿಯಲ್ಲಿ ಮರ ಇರುವ ಕಾರಣ ಅಡಿಕೆ ಮರದ ಬುಡಕ್ಕೆ ಹಾಕಿದ ಕಸ ಕಡ್ಡಿಗಳೇ ಬಲೆಗೆ ಅಡ್ಡಿಯಾಗುವುದು, ಎತ್ತರಕ್ಕೆ ಕೊಂಡೊಯ್ಯಲು ಉದ್ದದ ಕೊಕ್ಕೆಯ ಸಮಸ್ಯೆ,(ಅದಕ್ಕೆ ನಾನು ಬಳಸಿದ್ದು ಕಾರ್ಬನ್ ಫೈಬರ್ ದೋಟಿ) ದೋಟಿಯ ಕ್ಲ್ಯಾಂಪ್ಗಳೇ ಬಲೆಗೆ ಸಿಕ್ಕಿಕೊಂಡು ಏರಿಸಿದ ಬಲೆ ಪುನಹ ಜಾರಿಕೊಳ್ಳುವುದು ಎಲ್ಲವೂ ಒಂದು ಅದ್ಭುತ ಅನುಭವ. ಅಂತೂ ಒಬ್ಬ ಸಹಾಯಕನ ಸಹಾಯದೊಂದಿಗೆ ಸುಮಾರು 2 ಗಂಟೆಗಳ ಹೋರಾಟದಲ್ಲಿ ಮರಕ್ಕೆ ಪೂರ್ಣವಲ್ಲದಿದ್ದರೂ, ನಮಗೆ ಧಾರಾಳ ಸಿಗುವಷ್ಟು ಪ್ರಮಾಣದ ಎತ್ತರಕ್ಕಾದರೂ ಬಲೆಯನ್ನು ಹಾಕಲು ಸಫಲನಾದೆ.

 

ಎರಡು ದಿನದ ನಂತರ ಬಲಿತ ಕಾಯಿ ಹಣ್ಣಾಗ ಹತ್ತಿತ್ತು. ಇಂದೀಗ ಸಮೃದ್ಧ ಫಸಲನ್ನು ಕೊಯ್ದು ಮೊಮ್ಮಕ್ಕಳೊಂದಿಗೆ ತಿನ್ನುವಾಗ ಮಾಡಿದ ಶ್ರಮ ಸಾರ್ಥಕ ಅಂತ ಅನಿಸಿತು. ಶ್ರಮವನ್ನು ಹಂಚಿಕೊಂಡರೆ ಸಂತೋಷವನ್ನು ಹಂಚಿಕೊಂಡಂತೆ ಮತ್ತು ಬೇರೆಯವರಿಗೂ ಶ್ರಮಪಡಲು ಪ್ರೋತ್ಸಾಹ ಎಂಬ ಭಾವದಲ್ಲಿ ಬರಹ ರೂಪಕ್ಕಿಳಿಸಿದೆ.

ಬರಹ :
ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

17 minutes ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

16 hours ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

1 day ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

3 days ago