ತರಹೇವಾರಿ ಗೆಡ್ಡೆ-ಗೆಣಸುಗಳದ್ದೇ ಲೋಕ | ಜೋಯಿಡಾದಲ್ಲಿ ನಡೆಯಿತು ಅಪರೂಪದ ವಿವಿಧ ಜಾತಿಯ ಗೆಡ್ಡೆ-ಗೆಣಸುಗಳ ಪ್ರದರ್ಶನ

January 29, 2024
1:44 PM

ಉತ್ತರ ಕನ್ನಡ ಜಿಲ್ಲೆಯ(Uttara Kannada) ಮಂದಿ ಇನ್ನು ತಮ್ಮ ಮೂಲ ಆಹಾರ ಪದ್ಧತಿ, ಕಾಡು ಮೇಡು, ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅಲ್ಲಿನ ಜನ ಇಂದಿಗೂ ತರಕಾರಿ(vegetable), ಸೊಪ್ಪು(Green vegetable), ಗೆಡ್ಡೆ ಗೆಣಸುಗಳನ್ನು(tubers-Potato) ಸಾಂಪ್ರದಾಯಿಕ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಕಂದಮೂಲ ಆಹಾರಗಳು ಮನುಷ್ಯನ ಮೊದಲ ಆಹಾರವಾಗಿದ್ದವು. ಗೆಡ್ಗೆ-ಗೆಣಸುಗಳು  ಬಹುಷಃ ಮನುಷ್ಯನ ಊಟೋಪಚಾರಕ್ಕೆ ಉಪಯೋಗವಷ್ಟು ಮತ್ಯಾವ ವಸ್ತುಗಳೂ ಬಳಸಲ್ಪಟ್ಟಿಲ್ಲ. ಉತ್ತರ ಕನ್ನಡ  ಜಿಲ್ಲೆಯ ಅಂಕೋಲಾ ಹಾಗೂ ಜೋಯಿಡಾ ಇವೆರೆಡೂ ಯಥೇಚ್ಛವಾಗಿ ಗೆಡ್ಡೆ ಗೆಣಸು ಬೆಳೆಯುವ ಸ್ಥಳ . ಜೋಯಿಡಾದ ಗುಡ್ಡಗಾಡಲ್ಲಿ ಹತ್ತಾರು ವಿಧದ ಗೆಡ್ಡೆ ಗೆಣಸುಗಳು ಈ ಕಾಲದಲ್ಲಿ ಸಿಗುತ್ತವೆ. ಅವುಗಳ ಪ್ರದರ್ಶನವನ್ನು(Exhibition) ಪ್ರತಿ ವರ್ಷ ಕಾಳಿ ಪ್ರವಾಸೋದ್ಯಮ ಇಲಾಖೆ ನಡೆಸುತ್ತದೆ.

ಗೆಡ್ಡೆ ಗೆಣಸುಗಳು ಪ್ರದರ್ಶನ : ಇಲ್ಲಿರುವ ಗೆಡ್ಡೆ ಗೆಣಸುಗಳು 1 ಕೆಜಿಯಿಂದ-50 ಕೆಜಿಯರೆಗೆ ತೂಕ ಹೊಂದಿರುತ್ತವೆ. ಪಂಜರುಗಡ್ಡೆ, ಕೆಸುವಿನ ಗೆಡ್ಡೆ, ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚೆಂಗೆಣಸು, ಚಿರಕಾಂಡೆ ಮುಂತಾದ ಗೆಣಸುಗಳ ಪ್ರದರ್ಶನ ಇಲ್ಲಿ ನಡೆಯಿತು. ಒಂದೊಂದು ಗೆಣಸಿಗೆ 500-1000ದಷ್ಟು ದರ ಇದ್ದರೂ ಜನ ಕೊಂಡೊಯ್ದರು. ಸುಮಾರು 125 ಸ್ಟಾಲ್ ಗಳು ಇದ್ದವು.

Advertisement

ಗದೆಯನ್ನು ಮೀರಿಸುವ ಸೈಜಿನ ಗೆಣಸು : ಬರೀ ಜೊಯಿಡಾ ಮಾತ್ರವಲ್ಲದೇ ಬೇರೆ ಬೇರೆ ಭಾಗದಿಂದಲೂ ಕೂಡ ಗೆಡ್ಡೆ-ಗೆಣಸು ಬೆಳೆಯುವ ಜನರು ಇಲ್ಲಿ ಪ್ರದರ್ಶನಕ್ಕೆ ಆಗಮಿಸಿದ್ದರು. ಒಂದೊಂದು ಗೆಡ್ಡೆಯಂತು ಒಂದು ಟಿಪಾಯಿಯ ಸೈಜ್, ಒಂದು ಒನಕೆಯ ಸೈಜ್, ಗದೆಯನ್ನು ಮೀರಿಸುವ ಸೈಜಿನ ಗೆಡ್ಡೆ ಗೆಣಸುಗಳು ಕಂಡುಬಂದವು. ಕೋನ್ ಗಳೆಂದು ಕರೆಯಲ್ಪಡುವ ಗೆಡ್ಡೆಗಳದ್ದೇ ಸಿಂಹಪಾಲಾಗಿತ್ತು.

– ಅಂತರ್ಜಾಲ ಮಾಹಿತಿ

Advertisement

Both Ankola and Zoida in Uttara Kannada district are the places where sweet potato is grown in abundance. Tens of varieties of tubers can be found in the hills of Joida during this season. Their exhibition is conducted by Kali Tourism Department every year.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ
June 27, 2026
11:20 PM
by: ವಿಶೇಷ ಪ್ರತಿನಿಧಿ
ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ
June 27, 2026
9:36 PM
by: ದ ರೂರಲ್ ಮಿರರ್.ಕಾಂ
34 ಟನ್ ಅಡಿಕೆ ವಂಚನೆ – ಅಸ್ಸಾಂ ವ್ಯಾಪಾರಿಗಳಿಗೆ ಹರಿಯಾಣದಲ್ಲಿ ವಂಚನೆ..!
June 27, 2026
9:07 PM
by: ಮಿರರ್‌ ಡೆಸ್ಕ್
ದೇಶದಲ್ಲಿ ಬರಗಾಲದ ಸಾಧ್ಯತೆ – ರೈತರನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
June 27, 2026
9:00 PM
by: ಮಿರರ್‌ ಡೆಸ್ಕ್‌

You cannot copy content of this page - Copyright -The Rural Mirror