ಆಧಾರ್ ಕಾರ್ಡ್ ಲಿಂಕ್‌ ಮಾಡಿ ಸಾಕಾಯ್ತುಅನ್ನುವವರಿಗೆ ಇದೊಂದು ಬಾಕಿ ಇದೆ…! |

March 4, 2023
7:28 PM

ಈ ಆಧಾರ ಕಾರ್ಡ್ ಎಲ್ಲಾದಕ್ಕೂ ಲಿಂಕ್ ಮಾಡಿ ಸಾಕಾಯ್ತು..! ಅನ್ನುವವರು ಇದ್ದಾರೆ. ಈಗ ಇನ್ನೊಂದು ಸುದ್ದಿ ಇದೆ,  ಇನ್ನು ನಮ್ಮ ಮನೆಯ ನಾಯಿ ಬೆಕ್ಕು ದನಗಳಿಗೂ ಆಧಾರ್‌ ಲಿಂಕ್…!.‌ ದೀಗ ಜಾನುವಾರುಗಳಿಗೂ ಆಧಾರ್ಕಾರ್ಡ್ಕಡ್ಡಾಯ ಮಾಡಲಾಗುತ್ತಿದೆ. ಹೌದು ಇದು ಹಾಸ್ಯವೆನಿಸಿದರೂ ಸತ್ಯ.  

Advertisement
Advertisement

ಫಲಾನುಭಗಳಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಹಲವು ಯೋಜನೆಗಳಲ್ಲಿ ಆಧಾರ್ಕಡ್ಡಾಯ ಮಾಡಿದೆ. ಈಚೆಗಷ್ಟೇ ಸೈಬರ್ಕ್ರೈಂನಲ್ಲಿ ಆಗುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಿಮ್ಕಾರ್ಡ್ಗೂ ಆಧಾರ್ಕಾರ್ಡ್ಕಡ್ಡಾಯ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿದೆ

ಶೀಘ್ರದಲ್ಲೇ ದೇಶದ ಜಾನುವಾರುಗಳಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದ್ದಾರೆ. ಜಾನುವಾರುಗಳು ಹಿಂದೆ ಯಾವ ರೋಗಕ್ಕೆ ತುತ್ತಾಗಿದ್ದವು, ಅದರ  ಇತಿಹಾಸದ ಸಂಪೂರ್ಣ ಮಾಹಿತಿ ಸೇರಿದಂತೆ ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಆಧಾರ್ ಕಾರ್ಡ್ ಉಪಯುಕ್ತವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ತಿಳಿಸಿದ್ದಾರೆ.

ಜಾನುವಾರುಗಳಿಗೆ ಸಂಬಂಧಿಸಿದ ಡೇಟಾದ ಮೂಲಕ ಆದಷ್ಟು ಬೇಗ ರೋಗದ ಮೂಲದ ಬಗ್ಗೆ ತಿಳಿದುಕೊಳ್ಳಬೇಕು. ನಂತರ ಲಸಿಕೆ ಮತ್ತು ತಡೆಗಟ್ಟುವ ಇತರ ಮಾರ್ಗಗಳನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆಬಯೋ ಏಷ್ಯಾ ಸಮ್ಮೇಳನದ ಅಂಗವಾಗಿ ಮೊದಲ ದಿನಒಂದು ಆರೋಗ್ಯ ವಿಧಾನ, ಸ್ಥಳೀಯ ಜ್ಞಾನ ಮತ್ತು ನೀತಿವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.

ಇದಕ್ಕೆ ಸಂಯೋಜಕರಾಗಿ ಸಿಎಂಸಿ ವೆಲ್ಲೂರು ಪ್ರಾಧ್ಯಾಪಕ ಡಾ.ಗಗನ್ ದೀಪ್ ಕಾಂಗ್ ಕಾರ್ಯನಿರ್ವಹಿಸಿದರು. ಸಂದರ್ಭದಲ್ಲಿ ಮಾತನಾಡಿದ ವಿ.ಕೆ.ಪಾಲ್, ಮನುಷ್ಯರಂತೆ ಜಾನುವಾರುಗಳಿಗೂ ಆಧಾರ್ ರಚಿಸಲಾಗಿದೆ. ಶೀಘ್ರದಲ್ಲೇ ಪ್ರತಿ ಜಾನುವಾರು ಮತ್ತು ಪ್ರಾಣಿಗಳಿಗೆ ಆಧಾರ್ ಸಂಖ್ಯೆ ನೀಡಲಾಗುವುದು ಎಂದು ಹೇಳಿದರು. ಮೂಲಕ ದೇಶದ ಜಾನುವಾರು, ಪ್ರಾಣಿಗಳ ವಿವರಗಳು ಸುಲಭವಾಗಿ ದೊರೆಯುತ್ತವೆ. ಅದರ ನಂತರ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಹೇಳಿದರು

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-06-2025 | ಜೂನ್ 10 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ | ಮುಂದಿನ 10 ದಿನಗಳವರೆಗೂ ಉತ್ತಮ ಮಳೆ ಸಾಧ್ಯತೆ|
June 9, 2025
11:23 AM
by: ಸಾಯಿಶೇಖರ್ ಕರಿಕಳ
ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ | ಬೆಂಗಳೂರಿನ ಜಿ.ಮಾಧವಿ ಲತಾ ಪ್ರಮುಖ ಪಾತ್ರ | ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ಕೊಡುಗೆ
June 9, 2025
7:27 AM
by: ದ ರೂರಲ್ ಮಿರರ್.ಕಾಂ
ಇಂದಿನಿಂದ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಮಳೆ
June 9, 2025
6:57 AM
by: ದ ರೂರಲ್ ಮಿರರ್.ಕಾಂ
ಮೃಗಶಿರ ನಕ್ಷತ್ರಕ್ಕೆ ಸೂರ್ಯನ ಪ್ರವೇಶ | ಈ ಮೂರು ರಾಶಿಗಳ ಅದೃಷ್ಟ..!
June 9, 2025
6:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group