News Summary
| ಪುತ್ತೂರು ನಗರದ ಶೌಚಾಲಯ ದುರಸ್ತಿಗೆ ಎಎಪಿ ಮನವಿ | ಮೂಲಭೂತ ಸಮಸ್ಯೆಗಳ ಪರಿಹಾರದ ಒತ್ತಾಯಕ್ಕೆ ಎಎಪಿ ಹೆಜ್ಜೆ |
ಪುತ್ತೂರು ನಗರದ ಬೊಳ್ವಾರು ಅಟೋರಿಕ್ಷಾ ನಿಲ್ದಾಣ ಬಳಿಯ ಶೌಚಾಲಯ ದುಸ್ಥಿತಿ ಸರಿಪಡಿಸಲು ಪುತ್ತೂರು ನಗರಸಭೆ ಆಯುಕ್ತರಿಗೆ ಆಮ್ ಆದ್ಮಿ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮುಖಂಡರಾದ ಜಯಂತ್ ಪೂಜಾರಿ ವಿಟ್ಲ, ಜನಾರ್ಧನ್ ಬಂಗೇರಾ ಅಲಂಕಾರು, ಹಾಗೂ ಆನಂದ ಗೌಡ ರಾಮಕುಂಜ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಇತರ ಸದಸ್ಯರು ಉಪಸ್ಥಿತರಿದ್ದರು. ಇದೇ ವೇಳೆ ಪುತ್ತೂರು ನಗರದ ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿ ಆಗಾಗ ಟ್ರಾಫಿಕ್ ಜಾಂ ಸಮಸ್ಯೆ ಬಗ್ಗೆಯೂ ಗಮನ ಸೆಳೆಯಲಾಯಿತು. ಈ ಬಗ್ಗೆ ಉಪ್ಪಿನಂಗಡಿ ಗ್ರಾ ಪಂಗೆ ಮನವಿ ನೀಡಲು ನಿರ್ಧರಿಸಲಾಯಿತು. ಪುತ್ತೂರು ನಗರದ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆಯೂ ಮುಂದಿನ ದಿನಗಳಲ್ಲಿ ಸಮಗ್ರ ಮಾಹಿತಿ ಪಡೆದು ಹೋರಾಟ ನಡೆಸಲು ನಿರ್ಧರಿಸಲಾಯಿತು ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel