Advertisement
MIRROR FOCUS

ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿದ್ದರೆ ಸೋಲು ಎಂದಿಗೂ ಬಾರದು – ಡಾ.ಎ ಪಿ ಜೆ ಅಬ್ದುಲ್‌ ಕಲಾಂ

Share
ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ” ಅಬ್ದುಲ್ ಕಲಾಂ

ತಮಿಳುನಾಡಿನ ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಭಾರತದ  ʼಕ್ಷಿಪಣಿಗಳ ಜನಕ’ನಾಗಿ ಪ್ರಸಿದ್ಧರಾದರೆಂದರೆ ಸಣ್ಣ ಸಾಧನೆಯಲ್ಲ. ಈ ಪರಿಶ್ರಮದ ಹಿಂದೆ ಅಪಾರವಾದ ಜೀವನ ಪ್ರೀತಿಯಿದೆ. ಮಾತ್ರವಲ್ಲ ಸದಾ ಕ್ರಿಯಾಶೀಲತೆ, ನಿರಂತರ ಪ್ರಯತ್ನ, ಸ್ಷಷ್ಟವಾದ ಭವಿಷ್ಯದ ಬಗೆಗಿನ ಕನಸುಗಳು ಅವರ ಯಶಸ್ವಿನ ಗುಟ್ಟುಗಳು.
15 ಒಕ್ಟೋಬರ್ 1931 ರಂದು ಜೈನುಲಬ್ದೀನ್ ಹಾಗೂ ಆಶಿಮಾ ದಂಪತಿಗಳ ಪುತ್ರರಾಗಿ ಅಬ್ದುಲ್ ಕಲಾಂರವರು ಜನಿಸಿದರು. ಹೆತ್ತವರ ಬಡತನದ ಅರಿವಿದ್ದ ಕಲಾಂರು ಬೆಳಗ್ಗಿನ ತಮ್ಮ ಅಭ್ಯಾಸವನ್ನು ಮುಗಿಸಿ ಪತ್ರಿಕಾ ವಿತರಣೆಯನ್ನು ಮಾಡಿ ಶಾಲೆಗೆ ಹೋಗುತ್ತಿದ್ದರು.

Advertisement
Advertisement

Advertisement

 

ನೆಗೆಟಿವ್ ಪರಿಸ್ಥಿತಿಗಳಲ್ಲೂ ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತಿರಿ” ಎಂಬ ಮಾತುಗಳನ್ನು ಹೇಳಿದ್ದು ಮಾತ್ರವಲ್ಲ ಬಾಳಿ ತೋರಿಸಿದರು. ತಮ್ಮ ಜೀವನದ ಪ್ರತಿ ಹಂತದಲ್ಲೂ , ಎಲ್ಲಾ ನಡೆಗಳಲ್ಲೂ, ನಿರ್ಧಾರಗಳಲ್ಲೂ ಪಾಸಿಟಿವ್ ಚಿಂತನೆಗಳನ್ನೇ ಪ್ರತಿಪಾದಿಸಿದರು.

ಮೂಲತಃ ಅವರೊಬ್ಬ ವಿಜ್ಞಾನಿ. ಅಂತರಿಕ್ಷಯಾನ ವಿಜ್ಞಾನಿ. ಅವರಲ್ಲೊಬ್ಬ ಉಪನ್ಯಾಸಕನಿದ್ದ, ಗಣಿತಜ್ಞ, ತಮಿಳು ಕವಿ, ಲೇಖಕ, ವೀಣಾವಾದಕ. ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ DRDO ಹಾಗೂ ಇಸ್ರೋ ಸಂಸ್ಥೆಗಳ ಹೆಮ್ಮೆಯ ವಿಜ್ಞಾನಿ ನಮ್ಮ ಅಬ್ದುಲ್ ಕಲಾಂ. ಭಾರತದ ಮೊದಲ ಉಪಗ್ರಹ ಉಡಾವಣೆಯ ಯೋಜನಾ ನಿರ್ದೇಶಕರಾಗಿ ಯಶಸ್ವಿಯಾದವರು. ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕನೆಂದೇ ಖ್ಯಾತ ರಾದವರು. 1998 ರಲ್ಲಿ ಪೋಖ್ರಾನ್ 2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು ಕಲಾಂರವರು. 1997 ರಲ್ಲಿ ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ನಮ್ಮ ದೇಶ ಕಂಡ ಕೆಲವೇ ಕೆಲವು ಕ್ರಿಯಾಶೀಲ ರಾಷ್ಟ್ರಪತಿಗಳಲ್ಲಿ ಅಬ್ದುಲ್ ಕಲಾಂರವರು ಒಬ್ಬರು. ತಮ್ಮ ಎಂದಿನ ಸರಳತೆಯನ್ನು ರಾಷ್ಟ್ರಪತಿಯಾಗಿದ್ದಾಗಲೂ ನಿಭಾಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಭಾಷಣಗಳಿಂದ , ಉಪನ್ಯಾಸಗಳಿಂದ ಖ್ಯಾತರಾಗಿದ್ದರು. ತಮ್ಮ ಕೊನೆಯ ಉಸಿರನ್ನು ಕೂಡ ಭಾಷಣ ಮಾಡುತ್ತಿದ್ದಂತೆ ವೇಧಿಕೆಯಲ್ಲೇ ಪ್ರಾಣ ತ್ಯಾಗ ಮಾಡಿದರು.

ಮಕ್ಕಳ ಪ್ರೀತಿಯ ಕಲಾಂ ಅಜ್ಜ ಆಗಿದ್ದರು. ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟುಹಬ್ಬವನ್ನು ಮಕ್ಕಳ ಹಬ್ಬವಾಗಿ ಆಚರಿಸುವುದರಲ್ಲಿ ನಿಜವಾಗಿಯೂ ಒಂದು ಅರ್ಥವಿದೆಯಲ್ಲವೇ.?!
 

Advertisement

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ! ಕಿವಿಯ ಮೇಲೆ ಪರಿಣಾಮಗಳು…..

ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್‌ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್‌ಫೋನ್(Ear Phone)…

56 mins ago

ಹಲಸು ಮೇಳದತ್ತೊಂದು ಪಯಣ ಮಾಡೋಣವೇ? : ಪುತ್ತೂರಿನಲ್ಲಿ ಹಲಸು ಮೇಳ

ಇದೋ, ಬಂದಿದೆ ನೋಡಿ 2024ರ ಹಲಸು ಮೇಳ(Jackfruit Mela) ಪುತ್ತೂರು(Puttur). ಪ್ರತಿ ವರ್ಷದಂತೆ…

1 hour ago

ಸಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು : ನೈಸರ್ಗಿಕ ಕೃಷಿಯಲ್ಲಿ ದೇಶಿ ಗೋವಿನ ಮಹತ್ವ ಬಹಳ ಮುಖ್ಯ

ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಸುಮಾರು 108 ಪೋಷಕಾಂಶಗಳ(Nutrition) ಅವಶ್ಯಕತೆ…

2 hours ago

ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…

2 hours ago

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…

3 hours ago

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

4 hours ago