ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ಅಭ್ಯಾಸ ವರ್ಗ ಸುಳ್ಯದಲ್ಲಿ ನಡೆಯಿತು.
ಅಭ್ಯಾಸ ವರ್ಗವನ್ನು ಸುಳ್ಯ ಎಪಿಎಂಸಿ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು ಇವರು ಉದ್ಘಾಟಿಸಿದರು .ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ ಮಜಕ್ಕಾರ್ ,ನಗರ ಕಾರ್ಯದರ್ಶಿ ಭವಿತೇಶ್ ಅವರು ಉಪಸ್ಥಿತರಿದ್ದರು .
ಅಭ್ಯಾಸ ವರ್ಗದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತರಾದ ವೆಂಕಟೇಶ್ ಮದೂರು ಅವರು ನಡೆಸಿಕೊಟ್ಟರು.ಅಭ್ಯಾಸ ವರ್ಗದ ಕ್ಯಾಂಪಸ್ ಕಾರ್ಯ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿಯಾದ ಸಂದೇಶ್ ರೈ ಮುಜಕ್ಕಾರ್ ಅವರು ನಡೆಸಿಕೊಟ್ಟರು.ಕಾರ್ಯ ಪದ್ದತಿ ಅವಧಿಯನ್ನು ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತರಾದ ಯತೀಶ್ ಅವರು ನಡೆಸಿಕೊಟ್ಟರು .

ಎ.ಬಿ.ವಿ.ಪಿ ಮಂಗಳೂರು ವಿಭಾಗದ ಪ್ರಮುಖರಾದ ಕೇಶವ ಬಂಗೇರ ಇವರು ಸಮರೋಪ ಭಾಷಣ ಮಾಡಿದರು .ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನ ರುಚಿರ್ ಅವರು ನೂತನ ನಗರ ಕಾರ್ಯದರ್ಶಿಯಾಗಿ ಆಯ್ಕೆಯಾದರು .
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel