Advertisement
ಅನುಕ್ರಮ

ಕೃಷಿ ಅಂದರೆ ಒಂದು ಅದ್ಭುತ ಲೋಕ ಏಕೆಂದರೆ….. ? | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ…. |

Share

ಕೃಷಿ ಅಂದರೆ ಒಂದು ಅದ್ಭುತ ಲೋಕ. ತಾಳ್ಮೆ,ಜಾಣ್ಮೆ,ನಿರೀಕ್ಷೆ, ತಿತೀಕ್ಷೆಗಳನ್ನು ಬಯಸುವ ಸುಂದರ ಲೋಕ.ನಾವು ಪ್ರೀತಿಸಿದಷ್ಟು ಹತ್ತಿರ ಬಂದು ಒಲಿವ ಲೋಕ. ವಿಚಾರ ಏನೂಂದ್ರೇ……

ಮಳೆಗಾಲದ ಈ ಮೊದಲ ದಿನಗಳಲ್ಲಿ ಗಾಳಿಗೋ, ಭಾರಕ್ಕೋ, ಮಣ್ಣು ಮೆತ್ತಗಾದ ಕಾರಣಕ್ಕೋ ಕಾಳುಮೆಣಸಿನ ಬಳ್ಳಿಗಳಿರುವ ಅಡಿಕೆ ಮರ ಧರಾಶಾಹಿಯಾಗಿರುವ ಸಮಯ. ಇಂತಹ ಸಂಧರ್ಭದಲ್ಲಿ ಈ ಬಿದ್ದ ಬಳ್ಳಿಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸರಿಯಾದ ಸಮಯವಿದು. ಸಾಂಪ್ರದಾಯಿಕವಾಗಿ ಈಗ ಆರ್ಧಾ ನಕ್ಷತ್ರದ ದಿನಗಳು, ಕಾಳುಮೆಣಸಿನ ಬಳ್ಳಿಗಳನ್ನು ನೆಡಲು ಸರಿಯಾದ ಸಮಯ. ಅಂತೆಯೇ ಬಿದ್ದ ಬಳ್ಳಿಗಳನ್ನು ಅಡಿಕೆ ಮರಕ್ಕೆ ಪುನಃ ಎತ್ತಿ ಕಟ್ಟಲೂ ಸರಿಯಾದ ಸಮಯ. ಆದರೆ ಅತೀ ಉದ್ದದ ಬಳ್ಳಿಗಳನ್ನು ಎತ್ತಿ ಕಟ್ಟುವುದು ಸುಲಭವಲ್ಲ. ಅದಕ್ಕಾಗಿ ಉದ್ದ ಬಳ್ಳಿಗಳ ತುದಿಯನ್ನು ತುಂಡರಿಸಿ ಹತ್ತು ಹದಿನೈದು ಫೀಟ್ ಗಳಷ್ಟು ಉದ್ದದ ಮೂಲ ಬಳ್ಳಿಯನ್ನು ಪುನಃ ಅಡಿಕೆ ಮರಕ್ಕೆ ಕಟ್ಟಿ , ತುಂಡರಿಸಿದ ತುದಿಯ ಬಳ್ಳಿಗಳನ್ನು ನಾಲ್ಕೈದು ಪೀಟ್ ಗಳಷ್ಟು ಉದ್ದಕ್ಕೆ ತುಂಡರಿಸಿ ಅಡಿಕೆ ಮರಕ್ಕೋ,ತೆಂಗಿನ ಮರಕ್ಕೋ, ಮನೆಯ ಪರಿಸರದ ಬರೆಗಳಿಗೋ ನೆಟ್ಟಾಗ , ಬಿದ್ದ ಒಂದು ಬಳ್ಳಿಗೆ ಪ್ರತಿಯಾಗಿ ಹತ್ತು ಬಳ್ಳಿಗಳನ್ನು ಅಭಿವೃದ್ಧಿ ಮಾಡಿದಂತಹ ಸಂತೃಪ್ತಿ ಮತ್ತು ಬಳ್ಳಿಗಳು ಒಂದೆರಡು ವರ್ಷದಲ್ಲೇ ಫಸಲೂ ಕೊಟ್ಟಾಗ ಮಾಡಿದ ಕೆಲಸಕ್ಕೊಂದು ಪ್ರತಿಫಲವೂ ಲಭಿಸೀತಲ್ಲವೇ.

ಪ್ರಕೃತಿಯ ನಿಯಮವೂ ಅದುವೇ…”ಏಕೋಹಂ ಬಹುಸ್ಯಾಮಹ” ಅಂದರೆ ಒಬ್ಬನಿರುವವ ಬಹುವಾಗಿ ಪ್ರಕಟನಾಗುವುದೇ ಪ್ರಕ್ರೃತಿ ಧರ್ಮವಂತೆ.

ಬರಹ :
# ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

15 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago