ಸುದ್ದಿಗಳು

ಅಡಿಕೆ ಕೃಷಿಯೊಂದೇ ಅಲ್ಲ…! | ಇದೊಂದು ಕೃಷಿಯ ಕಡೆಗೂ ಲಕ್ಷ್ಯ ವಹಿಸಬೇಕು ಕೃಷಿಕರು… |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರಾವಳಿ ಹಾಗೂ ಮಲೆನಾಡಲ್ಲಿ ಅಡಿಕೆ ಕೃಷಿಯೇ ಫೇಮಸ್ಸು. ಇದೀಗ ವಿಸ್ತರಣೆಯ ವೇಗ ಹೆಚ್ಚಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ತಲಪಿದೆ, ತಮಿಳುನಾಡು, ಆಂಧ್ರಪ್ರದೇಶಕ್ಕೂ ವ್ಯಾಪಿಸಿದೆ. ಅಡಿಕೆ ಮಾತ್ರ ಅಲ್ಲ, ಹಲವು ಕಡೆ ಒಂದೇ ಬಗೆಯ ಕೃಷಿಯನ್ನೇ ಕೃಷಿಕರು ನೆಚ್ಚಿರುತ್ತಾರೆ. ಹೊಸ ಕೃಷಿಯ ಕಡೆ ಮನಸ್ಸು ಮಾಡುವವರು ಕಡಿಮೆ.  ವಾಣಿಜ್ಯ ಬೆಳೆಯ ಹೊರತಾದ ಕೃಷಿಯ ಕಡೆಗೆ ಈಚೆಗೆ ಕೆಲವರು ಮಾತನಾಡುತ್ತಿದ್ದಾರೆ.  ದೆಹಲಿಯ ರೈತನೊಬ್ಬ ಈಗ ಹಣ್ಣು, ತರಕಾರಿ, ಔಷಧಿ ಕೃಷಿಯ ಕಡೆಗೆ ಮನಸ್ಸು ಮಾಡಿ ಯಶಸ್ಸು ಕಂಡಿದ್ದಾರೆ. 

Advertisement

ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳತ್ತಾ ವಾಲುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಯಿಂದ  ಹೆಚ್ಚೇನು ಲಾಭ ಸಿಗದ ಕಾರಣ ಅನ್ನದಾತರು ಹೆಚ್ಚಾಗಿ ತೋಟಗಾರಿಕೆಗೆ ಮುಂದಾಗಿದ್ದಾರೆ. ಹಣ್ಣುಗಳು, ತರಕಾರಿಗಳು, ಔಷಧಿ ಗಿಡಗಳ​ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಅಂತಹ ಬೆಳೆಗಳಲ್ಲಿ ನಮ್ಮ ಮನೆ ಸುತ್ತ ಬೆಳೆಯುವ ತುಳಸಿ ಬೆಳೆಯು ಒಂದು. ಈ ಕೃಷಿಯಿಂದ ಆದಾಯ ಗಳಿಸಬಹುದು. ತುಳಸಿಯನ್ನು ಬೆಳೆಸಲು ಹೆಚ್ಚಿನ ಬಂಡವಾಳವೂ ಬೇಕಾಗಿಲ್ಲ. ಇದರೊಂದಿಗೆ ಇದಕ್ಕೆ ಸಾಕಷ್ಟು ಬೇಡಿಕೆಯೂ ಇದೆ. ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ತುಳಸಿ ಗಿಡ  ಇದೆ. ಇದಲ್ಲದೇ ಔಷಧಿಗಳಲ್ಲಿ, ಪೂಜೆಯಲ್ಲಿ ಹೀಗೆ ಹಲವು ವಿಧಗಳಲ್ಲಿ ಬಳಸುತ್ತಾರೆ. ತುಳಸಿ ಕೃಷಿಯ ಮೂಲಕ ಹೇಗೆ ಆದಾಯ ಗಳಿಸಬಹುದು?.

ಆಯುರ್ವೇದ ಮತ್ತು ನೈಸರ್ಗಿಕ ಔಷಧಗಳತ್ತ ಜನರ ಒಲವು ಹೆಚ್ಚುತ್ತಿದ್ದು, ಈ ಕಾರಣದಿಂದಾಗಿ ಅವರ ಬೇಡಿಕೆಯಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರುತ್ತಿದೆ. ಈಗಿನ ಕಾಲದಲ್ಲಿ ಮಾರುಕಟ್ಟೆ ವಿಸ್ತಾರಗೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ,  ಔಷಧೀಯ ಸಸ್ಯಗಳನ್ನು ಬೆಳೆಸುವ ವ್ಯವಹಾರವನ್ನು ಪ್ರಾರಂಭಿಸಿದರೆ, ಅದು  ತುಂಬಾ ಪ್ರಯೋಜನಕಾರಿ. ಸರಿಯಾದ ಯೋಜನೆ ಹಾಗೂ ಯೋಜನೆಯನ್ನು ರೂಪಿಸಬೇಕಷ್ಟೆ.ತುಳಸಿ ಕೃಷಿ ಪ್ರಾರಂಭಿಸಲು ಬಹಳಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅಲ್ಲದೆ, ಇದಕ್ಕಾಗಿ  ದೀರ್ಘ ಮತ್ತು ವಿಶಾಲವಾದ ಕೃಷಿ ಭೂಮಿಯ ಅಗತ್ಯವೂ ಇಲ್ಲ. ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕವೂ  ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಅನೇಕ ಆಯುರ್ವೇದ ಕಂಪನಿಗಳು ತುಳಸಿಯನ್ನು ಕೊಳ್ಳುತ್ತವೆ.

ಬಾರಾಬಂಕಿ ಜಿಲ್ಲೆಯ ತೆಹಸಿಲ್ ಫತೇಪುರ್ ಪ್ರದೇಶದ ಬಂಭನಪುರ ಗ್ರಾಮದ ರೈತ ರಾಜೇಶ್ ವರ್ಮಾ, ಔಷಧೀಯ ಕೃಷಿಯ ಮೂಲಕ ಗಮನಸೆಳೆದಿದ್ದಾರೆ. ತುಳಸಿ ಬೇಸಾಯದಿಂದ ಕೇವಲ 20 ಗುಂಟೆ ಜಾಗದಲ್ಲಿ ಕೃಷಿ ಆರಂಭಿಸಿದ್ದರು. ನಂತರ ರೈತ ರಾಜೇಶ್ ವರ್ಮಾ ಅವರು ಸುಮಾರು 4  ಸಾಲುಗಳಲ್ಲಿ ತುಳಸಿ ಕೃಷಿ ಮಾಡುವ ಮೂಲಕ ಒಂದೇ ಬೆಳೆಯಲ್ಲಿ 2 ಲಕ್ಷ ರೂ.ವರೆಗೆ  ಗಳಿಸುತ್ತಿದ್ದಾರೆ. ರಾಜೇಶ್ ವರ್ಮಾ ಅವರ ಔಷಧೀಯ ಕೃಷಿ ನೋಡಿ ಗ್ರಾಮದ ಹಲವು ರೈತರು ತುಳಸಿ ಕೃಷಿಗೆ ಮುಂದಾಗಿದ್ದಾರೆ.

ಈ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಹೆಚ್ಚಿನ ಲಾಭ ಸಿಗದೇ ತೀವ್ರ ನೊಂದಿದ್ದೆವು ಎನ್ನುತ್ತಾರೆ ತುಳಸಿ ಕೃಷಿ ಮಾಡುತ್ತಿರುವ ರೈತ ರಾಜೇಶ್ ವರ್ಮಾ. ನಮಗೆ ಈ ಔಷಧೀಯ ಕೃಷಿಯ ಬಗ್ಗೆ ಎಲ್ಲಾ ಮಾಹಿತಿ ಸಿಕ್ಕಿತು, ಅಂದಿನಿಂದ ತುಳಸಿ ಬೇಸಾಯವನ್ನು ಪ್ರಾರಂಭಿಸಿದೆವು, ಒಂದು ಎರಡುವರೆ ಎಕರೆಯಲ್ಲಿ 15 ಸಾವಿರದಷ್ಟು ಖರ್ಷು ಮಾಡಿದರೆ 2.5- 3 ಲಕ್ಷ ರೂಪಾಯಿ ಸಿಗುತ್ತದೆ ಎಂದು ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…

3 hours ago

ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ

ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್‌ಎಸಿಐಎ…

4 hours ago

ಹವಾಮಾನ ವರದಿ | 26-04-2025 | ಸಂಜೆ ಗುಡುಗು ಸಹಿತ ಮಳೆ ಸಾಧ್ಯತೆ |

ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

11 hours ago

ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…

16 hours ago

ಹೊಸರುಚಿ | ಹಲಸಿನ ಕಾಯಿ ಪೂರಿ

ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…

17 hours ago

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ

ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…

1 day ago