Advertisement
The Rural Mirror ಕಾಳಜಿ

ವಿದ್ಯುತ್‌ ಬಾರದ ಪ್ರದೇಶದಲ್ಲಿ ಸೋಲಾರ್‌ ಪಂಪ್‌ | ಕೃಷಿಯಲ್ಲಿ ಯಶಸ್ಸು ಕಂಡ ಕೃಷಿಕ |

Share

ಇಂದು ಕೃಷಿ ಬೆಳವಣಿಗೆಗೆ ವಿದ್ಯುತ್‌ ಕೂಡಾ ಅನಿವಾರ್ಯವಾಗಿದೆ. ಕೃಷಿಗೆ ಸರಿಯಾಗಿ ನೀರುಣಿಸಲು ಪಂಪ್‌ ಅಗತ್ಯ, ಪಂಪ್‌ ಚಾಲೂ ಆಗಲು ಸಾಮಾನ್ಯವಾಗಿ ವಿದ್ಯುತ್‌ ಅಗತ್ಯ. ಆದರೆ ವಿದ್ಯುತ್‌ ತಂತಿ ಅಳವಡಿಕೆ ಮಾಡಲಾಗದ ಪ್ರದೇಶದಲ್ಲಿ ಕೃಷಿ ಬೆಳವಣಿಗೆ ಹೇಗೆ ? ಸೋಲಾರ್‌ ಪಂಪ್‌ ಅಳವಡಿಕೆ ಮೂಲಕ ಒರಿಸ್ಸಾದ ಹಳ್ಳಿ ಪ್ರದೇಶದ ಕೃಷಿಕರೊಬ್ಬರು ಯಶಸ್ಸು ಕಂಡಿದ್ದಾರೆ. …..ಮುಂದೆ ಓದಿ….

ದೇಶದಲ್ಲಿ ಕಾಡು ಪ್ರದೇಶಗಳ ನಡುವೆಯೇ ಅಥವಾ ತೀರಾ ಗ್ರಾಮೀಣ ಭಾಗದಲ್ಲಿಯೂ ಕೃಷಿ ಚಟುವಟಿಕೆ ನಡೆಯುತ್ತದೆ, ಅನೇಕರು ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ.ಅಂತಹ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದೇ ಸಾಹಸದ ಕೆಲಸ. ಇಂತಹ ಸಂದರ್ಭದಲ್ಲಿ ಸರ್ಕಾರವು ಸೋಲಾರ್‌ ಯಂತ್ರಗಳುಗಳಿಗೆ ಆದ್ಯತೆ ನೀಡಿ ಮೂಲಭೂತ ಸೇವೆ ಒದಗಿಸುವ ಕೆಲಸ ಮಾಡುತ್ತದೆ. ಅದೇ ರೀತಿ ಒಡಿಸ್ಸಾದ ನುವಾಪದ ಜಿಲ್ಲೆಯ ಸುಣಬೇಡ ಅಭಯಾರಣ್ಯದ ನಡುವಿನ ಹಳ್ಳಿಯಲ್ಲಿ ವಾಸಿಸುವ  ವಿಜಯ್ ಝಂಕರ್ ಅವರು ಸೋಲಾರ್‌ ಪಂಪ್‌ ಮೂಲಕ ತನ್ನ ಕೃಷಿಯನ್ನು ಯಶಸ್ಸುಗೊಳಿಸಿದ್ದಾರೆ.…..ಮುಂದೆ ಓದಿ….

 

ಒರಿಸ್ಸಾದ ಸುನಬೇಡ ಪಂಚಾಯತ್‌ನ ಸುನಬಹಲಿ ಗ್ರಾಮದ ವ್ಯಾಪ್ತಿಯ ಹಳ್ಳಿಗಾಡಿನಲ್ಲಿರುವ ವಿಜಯ್ ಝಂಕರ್ ಅವರು ಭತ್ತ ಸೇರಿದಂತೆ ಇತರ ಕೃಷಿ ಮಾಡುತ್ತಾರೆ. ಸಾಕಷ್ಟು ನೀರಿದ್ದರೂ ಕೃಷಿಗೆ ನೀರುಣಿಸಲು ಕಷ್ಟವಾಗುತ್ತಿತ್ತು. ಇದಕ್ಕೆ ವಿದ್ಯುತ್‌ ಪಂಪ್‌ ಅಳವಡಿಕೆ ಮಾಡಲು ಲೈನ್‌ ಬರುವುದೇ ಕಷ್ಟದ ಕೆಲಸ. ಅರಣ್ಯ ನಡುವಿನ ದಾರಿಯಲ್ಲಿ ಬರಬೇಕಾದ್ದರಿಂದ ವಿದ್ಯುತ್‌ ತಂತಿ ಬರುವುದೇ ಅಸಾಧ್ಯವಾಗಿತ್ತು. ಇದಕ್ಕಾಗಿ ಸೋಲಾರ್‌ ಪಂಪ್‌ ಅಳವಡಿಕೆ ಸ್ಥಳೀಯ ಪಂಚಾಯತ್‌ ಹಾಗೂ ಆಡಳಿತವು ನೆರವು ನೀಡಿದೆ. ಇದೀಗ ಸೋಲಾರ್‌ ಪಂಪ್‌ ಮೂಲಕ ನೀರು ಹಾಯಿಸಿ ಕೃಷಿ ಮಾಡುತ್ತಿದ್ದಾರೆ. ಈಗ ಮಾದರಿ ಕೃಷಿಯ ಮೂಲಕ ಗಮನ ಸೆಳೆದಿದ್ದಾರೆ.

ದೇಶದಲ್ಲಿ ಹಲವು ಗ್ರಾಮೀಣ ಪ್ರದೇಶಗಳು ಇವೆ. ಮೂಲಭೂತ ವ್ಯವಸ್ಥೆಗೆ ಅದರಲ್ಲೂ ವಿದ್ಯುತ್‌ ಸೇರಿದಂತೆ ಇತರ ಸೌಲಭ್ಯಗಳಿಗೆ ಸರ್ಕಾರದ ನೆರವಿನಿಂದ ಸೋಲಾರ್‌ ಪಂಪ್‌ ಅಥವಾ ವಿದ್ಯುತ್‌ ಅಳವಡಿಕೆ ಕಡೆಗೆ ಗ್ರಾಮೀಣ ಆಡಳಿತ, ಸ್ಥಳೀಯಾಡಳಿತ ಯೋಚಿಸಬಹುದಾಗಿದೆ.…..ಮುಂದೆ ಓದಿ….

Electricity is crucial for the growth of agriculture today. Proper irrigation is essential for agricultural success, and this usually requires the use of a pump, which in turn requires electricity to operate. However, what can be done in areas where installing traditional electricity infrastructure is not feasible? A farmer in a village in Orissa has found success by implementing a solar pump system.

ಕೃಪೆ : ಡಿ ಡಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

3 hours ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

9 hours ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

9 hours ago

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…

20 hours ago

ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

20 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

2 days ago