ಪ್ರಸಕ್ತ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ಕೆಎಂಎಸ್) 94.15 ಲಕ್ಷ ರೈತರಿಂದ ಇದುವರೆಗೆ 1.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಭತ್ತದ ಖರೀದಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಹಿಂದಿನ ವರ್ಷಗಳಲ್ಲಿ ಮಾಡಿದಂತೆ ರೈತರಿಂದ ಎಮ್ಎಸ್ಪಿ ನಲ್ಲಿ 2021-22 ಖಾರಿಫ್ ಬೆಳೆಗೆ ಹೋಲಿಸಿದರೆ ಭತ್ತ ಸಂಗ್ರಹಣೆಯು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 94.15 ಲಕ್ಷ ರೈತರು 1,36,350,74 ಕೋಟಿ ರೂಪಾಯಿಗಳ ಎಮ್ಎಸ್ಪಿ ಮೌಲ್ಯದೊಂದಿಗೆ ಲಾಭ ಪಡೆದಿದೆ ಎಂದು ಅಧಿಕೃತ ದಾಖಲೆ ತಿಳಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ ಕೆಎಮ್ಎಸ್ 2021-22 ರಲ್ಲಿ ಫೆಬ್ರವರಿ 20-2022 ರವರೆಗೆ 695.67 ಎಲ್ಎಮ್ಟಿ ( ಲಕ್ಷ ಮೆಟ್ರಿಕ್ ಟನ್ ) ಭತ್ತವನ್ನು ಖರೀದಿಸಲಾಗಿದೆ. ಮಾತ್ರವಲ್ಲ ಪಂಜಾಬ್ನಿಂದ ಅತ್ಯಧಿಕ ಪ್ರಮಾಣದ ಖರೀದಿ ಮಾಡಲಾಗಿದ್ದು, 1,86,85,532 ಮೆಟ್ರಿಕ್ ಟನ್ ಭತ್ತವನ್ನು 36,623.64 ಕೋಟಿ ರೂ ಗೆ ಸಂಗ್ರಹಿಸಲಾಗಿದ್ದು, 9,24.299 ರೈತರಿಗೆ ಲಾಭವಾಗಿದೆ. ಛತ್ತಿಸ್ಗಢ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…