ಪ್ರಸಕ್ತ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ಕೆಎಂಎಸ್) 94.15 ಲಕ್ಷ ರೈತರಿಂದ ಇದುವರೆಗೆ 1.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಭತ್ತದ ಖರೀದಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಹಿಂದಿನ ವರ್ಷಗಳಲ್ಲಿ ಮಾಡಿದಂತೆ ರೈತರಿಂದ ಎಮ್ಎಸ್ಪಿ ನಲ್ಲಿ 2021-22 ಖಾರಿಫ್ ಬೆಳೆಗೆ ಹೋಲಿಸಿದರೆ ಭತ್ತ ಸಂಗ್ರಹಣೆಯು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 94.15 ಲಕ್ಷ ರೈತರು 1,36,350,74 ಕೋಟಿ ರೂಪಾಯಿಗಳ ಎಮ್ಎಸ್ಪಿ ಮೌಲ್ಯದೊಂದಿಗೆ ಲಾಭ ಪಡೆದಿದೆ ಎಂದು ಅಧಿಕೃತ ದಾಖಲೆ ತಿಳಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ ಕೆಎಮ್ಎಸ್ 2021-22 ರಲ್ಲಿ ಫೆಬ್ರವರಿ 20-2022 ರವರೆಗೆ 695.67 ಎಲ್ಎಮ್ಟಿ ( ಲಕ್ಷ ಮೆಟ್ರಿಕ್ ಟನ್ ) ಭತ್ತವನ್ನು ಖರೀದಿಸಲಾಗಿದೆ. ಮಾತ್ರವಲ್ಲ ಪಂಜಾಬ್ನಿಂದ ಅತ್ಯಧಿಕ ಪ್ರಮಾಣದ ಖರೀದಿ ಮಾಡಲಾಗಿದ್ದು, 1,86,85,532 ಮೆಟ್ರಿಕ್ ಟನ್ ಭತ್ತವನ್ನು 36,623.64 ಕೋಟಿ ರೂ ಗೆ ಸಂಗ್ರಹಿಸಲಾಗಿದ್ದು, 9,24.299 ರೈತರಿಗೆ ಲಾಭವಾಗಿದೆ. ಛತ್ತಿಸ್ಗಢ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿದೆ.
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…
ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…