ಪ್ರಸಕ್ತ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ಕೆಎಂಎಸ್) 94.15 ಲಕ್ಷ ರೈತರಿಂದ ಇದುವರೆಗೆ 1.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಭತ್ತದ ಖರೀದಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಹಿಂದಿನ ವರ್ಷಗಳಲ್ಲಿ ಮಾಡಿದಂತೆ ರೈತರಿಂದ ಎಮ್ಎಸ್ಪಿ ನಲ್ಲಿ 2021-22 ಖಾರಿಫ್ ಬೆಳೆಗೆ ಹೋಲಿಸಿದರೆ ಭತ್ತ ಸಂಗ್ರಹಣೆಯು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 94.15 ಲಕ್ಷ ರೈತರು 1,36,350,74 ಕೋಟಿ ರೂಪಾಯಿಗಳ ಎಮ್ಎಸ್ಪಿ ಮೌಲ್ಯದೊಂದಿಗೆ ಲಾಭ ಪಡೆದಿದೆ ಎಂದು ಅಧಿಕೃತ ದಾಖಲೆ ತಿಳಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ ಕೆಎಮ್ಎಸ್ 2021-22 ರಲ್ಲಿ ಫೆಬ್ರವರಿ 20-2022 ರವರೆಗೆ 695.67 ಎಲ್ಎಮ್ಟಿ ( ಲಕ್ಷ ಮೆಟ್ರಿಕ್ ಟನ್ ) ಭತ್ತವನ್ನು ಖರೀದಿಸಲಾಗಿದೆ. ಮಾತ್ರವಲ್ಲ ಪಂಜಾಬ್ನಿಂದ ಅತ್ಯಧಿಕ ಪ್ರಮಾಣದ ಖರೀದಿ ಮಾಡಲಾಗಿದ್ದು, 1,86,85,532 ಮೆಟ್ರಿಕ್ ಟನ್ ಭತ್ತವನ್ನು 36,623.64 ಕೋಟಿ ರೂ ಗೆ ಸಂಗ್ರಹಿಸಲಾಗಿದ್ದು, 9,24.299 ರೈತರಿಗೆ ಲಾಭವಾಗಿದೆ. ಛತ್ತಿಸ್ಗಢ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…