ಮೌನ ಮಾತಾದಾಗ

ಕೃಷಿ ಏಕೆ ಸೋಲುವುದಿಲ್ಲ….?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮೊಳೆತೇಳುವ ಖುಷಿ ಬೀಜದ ಮಡಿಲಿಗೆ
ಹನಿಹನಿಸುತಲಿರೆ ಹಸಿರುಸಿರು
ಕುಲನೆಲವೆನ್ನದೆ ದಾಹವ ನೀಗುವ
ನದಿಯೊಲವಿಗೆ ಏತಕೆ ಹೆಸರೂ….”
ಹೌದಲ್ಲಾ, ಈ ಕವನದ ಸಾಲುಗಳೇ ಕೃಷಿಯೊಳಗಣ ಸಂತಸದ ಬದುಕನ್ನು ತೆರೆದು ತೋರುತ್ತಿಲ್ಲವೇ…
ಖಂಡಿತಾ ಕೃಷಿ ಸೋಲದು. ಕೃಷಿಯೆಂಬುದು ಪ್ರಕೃತಿಯೊಳಗೊಂದಾಗುವ ಕ್ರಿಯೆ. ತಾಯ ಅಪ್ಪುಗೆಯಲ್ಲಿ ಸೋಲಿದೆಯೇ.. ಖಂಡಿತಾ ಇಲ್ಲ. ಅದನ್ನು ಕಾಣುವ,ಅನುಭವಿಸುವ ಒಳ ದೃಷ್ಟಿ ಬೇಕಷ್ಟೆ….ಅಂದರೆ ತಾಯ ಮೇಲಿನ ಶ್ರದ್ಧೆ, ಪ್ರೀತಿಗೆ ಹೇಗೆ ಮಿತಿಯಿಲ್ಲವೋ ಅದೇ ರೀತಿಯ ಶ್ರದ್ಧೆ, ಪ್ರೀತಿ  ಕೃಷಿ, ಭೂಮಿ,ಪ್ರಕೃತಿಯ ಮೇಲೂ ಇದ್ದಾಗ ಸೋಲೇ ಇರದು.
ಕೃಷಿಯೆಂದರೆ ಪ್ರಕೃತಿಯ ನಡೆಯನ್ನು ಗಮನಿಸುತ್ತಾ ಪಡೆಯಬಹುದಾದ್ದನ್ನು ಪಡೆಯುವುದು,ಅಷ್ಟೇ,ಅಂದರೆ ಯಾವ ರೀತಿ ತಾಯ ಎದೆಹಾಲ ಕುಡಿಯುತ್ತಾ ಕುಡಿಯುತ್ತಾ ಮತ್ತಷ್ಟು ಎದೆಹಾಲಿನ ವೃದ್ದಿಗೆ ಪ್ರಚೋದನೆ ಆಗುವುದೋ ಅದೇ ರೀತಿಯಾಗಿ ಮುದ್ದುಗಾಲ ತುಳಿತ ಬೇಕಷ್ಟೇ ಹೊರತು ಘಾತಾನುಘಾತವಲ್ಲ. ಘರ್ಷಣೆ ಇಲ್ಲದಾಗ ಸೋಲಿದೆಯೇ….
ಕೃಷಿ ಎಂಬುದೊಂದು ಸಹಜ ಜೀವನ ಕಲೆ, ಅತಿಯಾದ ಆಸೆ ಆಕಾಂಕ್ಷೆಗಳು ಇರದ ಸ್ಥಿತಿ. ಹುಟ್ಟಿಸಿದ ದೇವರು ಹುಲ್ಲ ಮೇಯಿಸಲಾರನೇ ಅಂದರೆ ಇಷ್ಟೇ ಅಲ್ಲವೇ.ನಿನಗೇನು ಬೇಕೋ ಅಷ್ಟೇ ಹೊರತು ತಲೆತಲೆಮಾರುಗಳಿಗೆ ಕೂಡಿ ಹಾಕುವ ದಂಧೆಯಲ್ಲವಲ್ಲಾ….ಹಾಗಿದ್ದಾಗ ಸೋಲೆಲ್ಲಿದೆ.ಇಡೀ ಪ್ರಕೃತಿಯೇ ಒಂದು ಸರಣಿ ಸರಪಳಿ ಸೂತ್ರ. ಒಂದಕ್ಕೊಂದು ಪೂರಕ,ಒಂದು ಕೊಂಡಿ ಕಳಚಿದರೂ ಸೂತ್ರ ಹರಿದ ಗಾಳಿಪಟ.ನಿಜ ಕೃಷಿ ಅಂದರೆ ಸೂತ್ರದೊಳಗಿನ ಸಾರದ ಅನುಸರಣೆಯಲ್ಲವೇ….ಹಾಗಿದ್ದಾಗ ಸೋಲಿದೆಯೇ… ಈ ದಿನಗಳ ಅತೀ ಕಠಿಣ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಂತ ಕ್ಷೇತ್ರ ಕೃಷಿ ಕ್ಷೇತ್ರವಲ್ಲವೇ….ಕಾರಣ ನಿರಾವಲಂಬನೆ… ತಾಯ ಅಪ್ಪುಗೆಯ ರಕ್ಷಣೆ. ಎಲ್ಲಾರು ಮಾಡುವುದು ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ  ಎಂಬುದರ ನಿಜಾರ್ಥ ಅರಿತು ಹಸಿವಿನ, ತೀರದ ದಾಹದ ಮಿತಿಯರಿತು ವರ್ತಿಸಿದಾಗ ಸೋಲ ಮುಖ ಕೃಷಿ ಲೋಕ ಕಂಡೀತೇ.
ಅದಕ್ಕೇ ಕೃಷಿ ಋಷಿ ಅನ್ನುವುದು… ಋಷಿಯಾದಾತ ಖಂಡಿತಾ ಶೋಷಿಸಲಾರ,ಅತಿ ಬಯಕೆಯ ದಾಹದ ದಾಸನಾಗಲಾರ,ತನ್ನ ಪಾಲಿಗೆ ಬಂದ ತುತ್ತನು ವರಪ್ರಸಾದವಾಗಿ ಸ್ವೀಕರಿಸಬಲ್ಲ. ಇಂತಹ ಪರಿಶುದ್ಧ ಮನದ ಬದುಕಿಗೆ ಸೋಲುಂಟೇ….ಇರಲಾರದು. ಅಂತಹ ಕೃಷಿ ಬದುಕಿನ ಅನುಭವದ ದಾಸನಾಗಲು ತಾಯ ಮಡಿಲಲ್ಲಿ ವಿನೀತನಾಗಿ “ಧಿಯೋ ಯೋ ನಃ ಪ್ರಚೋದಯಾತ್” ಎಂದು ಬೇಡಿಕೊಳ್ಳಬೇಕಷ್ಟೆ.ಶರಣರಿಗೆ ಸೋಲಿಲ್ಲ…
ಇದು ಸಹಸ್ರ ಸಹಸ್ರ ವರ್ಷಗಳ ಸತ್ಯ…..ಅದೇ ನಿಜ ಕೃಷಿ…ಇದನರಿತೊಡೆ ಕೃಷಿಗೆ ಸೋಲಿಲ್ಲ. ಸೋಲು ಗೆಲುವಿನ ಆಯ್ಕೆ ನಮ್ಮದು,ಅಷ್ಟೇ….
#ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ.
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ  ಧಾರಾಕಾರ…

10 hours ago

ಈ 3 ಗಣೇಶ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ…?

ಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

1 day ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

1 day ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

1 day ago