Advertisement
The Rural Mirror ವಾರದ ವಿಶೇಷ

ಎಗ್ರಿಟೂರಿಸಂ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯೊಂದನ್ನು ತೆರೆದ ಕೃಷಿಕ ಸುರೇಶ್‌ ಬಲ್ನಾಡು |

Share

ಕಾಳುಮೆಣಸು ಕೃಷಿಯಲ್ಲಿ ವಿಶೇಷವಾಗಿ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ  ಬಲ್ನಾಡಿನಲ್ಲಿರುವ ಕೃಷಿಕ ಸುರೇಶ್‌ ಬಲ್ನಾಡು ಅವರು ಇದೀಗ ಕೃಷಿ ಪ್ರವಾಸೋದ್ಯಮದ  ಇನ್ನೊಂದು ಅವಕಾಶವನ್ನು ಕೃಷಿಕರಿಗೆ ಪರಿಚಯಿಸಿದ್ದಾರೆ. ಈಚೆಗೆ “ಸಮ್ಮಿಲನ” ಹೆಸರಿನಲ್ಲಿ ನಡೆದ  ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ ಕೃಷಿಕರು ಹಾಗೂ ಕೃಷಿ ಆಸಕ್ತರು ಆಗಮಿಸಿದ್ದರು. ಕೃಷಿ ಬೆಳವಣಿಗೆಗೆ, ಗ್ರಾಮೀಣಾಭಿವೃದ್ಧಿ ಬೆಳವಣಿಗೆಗೆ ಎಗ್ರಿಟೂರಿಸಂ ಕೂಡಾ ನೆರವಾಗುತ್ತದೆ. ಕೃಷಿಕರಿಗೆ ಆದಾಯವನ್ನೂ ತರಬಲ್ಲ ಎಗ್ರಿಟೂರಿಸಂ ವಿಸ್ತರಣೆಗೆ ಅವಕಾಶಗಳೂ ಇವೆ. ಇದೊಂದು ಮಾದರಿಯಾಗಿ ಪರಿಗಣಿಸಲು ಸಾಧ್ಯವಿದೆ.…..ಮುಂದೆ ಓದಿ….

Advertisement
Advertisement
Advertisement
Advertisement

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಆರ್ಥಿಕ ಅಭಿವೃದ್ಧಿಯ ಪ್ರಯತ್ನಗಳನ್ನು ಬೆಂಬಲಿಸುವ ಒಂದು ಮಾರ್ಗವೆಂದರೆ ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವುದು. ಸಾಮಾನ್ಯವಾಗಿ ಮೌಲ್ಯವರ್ಧಿತ, ಕೃಷಿ ಸಂಬಂಧಿತ, ಕೆಲಸ ಮಾಡುವ ತೋಟಗಳಲ್ಲಿ ಇದು ಸಾಧ್ಯವಿದೆ.  ಕೃಷಿ ಪ್ರವಾಸೋದ್ಯಮ ಅಥವಾ ಎಗ್ರಿ ಟೂರಿಸಂ ಸಾಮಾನ್ಯವಾಗಿ ಶೈಕ್ಷಣಿಕ, ಮನರಂಜನಾ ಅಥವಾ ಮಾಹಿತಿ ಉದ್ದೇಶಗಳಿಗಾಗಿ ಸಾರ್ವಜನಿಕರನ್ನು, ಕೃಷಿಕರನ್ನು, ಕೃಷಿ ಆಸಕ್ತರನ್ನು ಫಾರ್ಮ್‌ಗೆ ಕರೆತರುವ  ಚಟುವಟಿಕೆಯನ್ನು ಹೇಳಲಾಗುತ್ತದೆ. ವಿಶೇಷವಾಗಿ ಮಾದರಿ ತೋಟಗಳಲ್ಲಿ ಪರಿಚಯಿಸುವುದು ಒಂದು ಉದ್ದೇಶವಾದರೆ, ತೋಟದಲ್ಲಿ ಬೆಳೆದ ವಸ್ತುಗಳ ಮೌಲ್ಯವರ್ಧನೆಗೂ ಈ ಎಗ್ರಿಟೂರಿಸಂ ಸಹಕಾರಿಯಾಗುತ್ತದೆ. ಉದಾಹರಣೆಗೆ ಹಣ್ಣು-ತರಕಾರಿ ಬೆಳೆ ಬಂದಾಗ ಮಾರುಕಟ್ಟೆ ಉದ್ದೇಶದಿಂದಲೇ ಎಗ್ರಿ ಟೂರಿಸಂಗೂ ಅವಕಾಶ ನೀಡಬಹುದಾದ ಕಲ್ಪನೆಯೂ ಇದೆ.

Advertisement

Advertisement

ಕೃಷಿಯಲ್ಲಿ ದಿನಂದಿಂದ ದಿನಕ್ಕೆ ವೆಚ್ಚಗಳು ಅಧಿಕವಾಗುತ್ತಿವೆ, ಸವಾಲುಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಆರ್ಥಿಕತೆ ಬೆಳೆಯಲೇಬೇಕಿದೆ, ಕೃಷಿಕರ ಆದಾಯವೂ ಹೆಚ್ಚಾಗಲೇಬೇಕಿದೆ.ಈಗಾಗಲೇ ಬೆಲೆಗಳ ಕುಸಿತ, ಏರಿದ ಕೃಷಿ ವೆಚ್ಚಗಳ ಕಾರಣಗಳಿಂದ ಸಾಂಪ್ರದಾಯಿಕ ಕೃಷಿ ಆರ್ಥಿಕತೆಗಳಿಗೆ ಸವಾಲುಗಳು ಹೆಚ್ಚಾಗಿದೆ. ಹೀಗಾಗಿ ಕೃಷಿಕರು ಆರ್ಥಿಕ ಸಾಧ್ಯತೆಗಳ ಬಗ್ಗೆಯೂ ಗಮನಹರಿಸಬೇಕಾದ್ದು ಅಗತ್ಯ. ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ ಸೇರಿದಂತೆ ಕೃಷಿ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿನ ಅವಕಾಶಗಳನ್ನು ಕಂಡುಕೊಳ್ಳುವುದು ಕೂಡಾ ಇಂದಿನ ಅನಿವಾರ್ಯತೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳು ಇವೆ. ಅನೇಕ ಪ್ರಗತಿಪತ ಕೃಷಿಕರು ಇದ್ದಾರೆ. ಕೃಷಿ ಸಾಧನೆಗಾಗಿ ಹಲವು ವರ್ಷಗಳ ಕಾಲ ಸಮಯ ವಿನಿಯೋಗ ಮಾಡಿದ್ದಾರೆ. ಈಗ ಯಶಸ್ವಿ ಕೃಷಿಕಾದವರೂ ಇದ್ದಾರೆ. ಯಶಸ್ವಿ ಕೃಷಿ ಎನಿಸಿದ ಬಳಿಕ ಹಲವು ಮಾಧ್ಯಮಗಳ ಮೂಲಕ ಬೆಳಕು ಚೆಲ್ಲಿದಾಗ ಸಾಕಷ್ಟು ಕೃಷಿಕರು -ಕೃಷಿ ಆಸಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿಸಾಧಕ ಕೃಷಿಕರಿಗೆ ತನ್ನ ಕೃಷಿ ಉಳಿಸಿ-ಬೆಳೆಸುವುದೇ ಸವಾಲಾಗುತ್ತದೆ. ಪ್ರತಿ ದಿನವೂ ಆಸಕ್ತರು ಆಗಮಿಸಿದರೆ ಕೃಷಿ ನಿರ್ವಹಣೆಯೂ ಕಷ್ಟ. ಹೀಗಾಗಿ ಮಾಹಿತಿಯ ಜೊತೆಗೆ ಆತಿಥ್ಯವನ್ನೂ ನೀಡಿ ದಿನ ನಿಗದಿ ಮಾಡಿ ಆಹ್ವಾನಿಸುವುದು ಕೃಷಿಗೂ-ಕೃಷಿಕನಿಗೂ ಉತ್ತಮವಾದ ವ್ಯವಸ್ಥೆ. ಅಂತಹ ಮಾದರಿಯೊಂದನ್ನು ಸುರೇಶ್‌ ಬಲ್ನಾಡು ಅವರು ಪುತ್ತೂರಿನಲ್ಲಿ ಪ್ರಯೋಗ ಮಾಡಿದ್ದಾರೆ. ಯಶಸ್ಸು ಕಂಡಿದ್ದಾರೆ.

Advertisement

Advertisement

ಈಚೆಗೆ ನಡೆದ “ಸಮ್ಮಿಲನ” ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಯಿಂದ 120 ಕ್ಕೂ ಅಧಿಕ ಮಂದಿ ನೋಂದಾಯಿಸಿ ಭಾಗವಹಿಸಿದ್ದರು. ಸ್ಥಳೀಯರು ಹಾಗೂ ಸಂಘಟಕರು ಸೇರಿದಂತೆ 170 ರಷ್ಟು ಕೃಷಿಕರು ಇದ್ದರು. ಕೃಷಿ-ಕಾಳುಮೆಣಸು ಬಗ್ಗೆ ಮಾಹಿತಿ ನೀಡಲು ಕೃಷಿಕರೇ ಭಾಗವಹಿಸಿದ್ದರು. ಈಗಾಗಲೇ ಕಾಳುಮೆಣಸು ಕೃಷಿಯಲ್ಲಿ ಯಶಸ್ಸು ಕಂಡಿರುವ ಅಜಿತ್‌ ಪ್ರಸಾದ್‌ ರೈ, ನಿವೃತ್ತ ವಿಜ್ಞಾನಿ ಡಾ.ಯದುಕುಮಾರ್ ಸೇರಿದಂತೆ ಹಲವು ಮಂದಿ ಸಾಧಕ ಕೃಷಿಕರು ಮಾಹಿತಿ ನೀಡಿದ್ದರು. ನೀರು ಹಾಗೂ ನೀರಾವರಿ ವ್ಯವಸ್ಥೆಯ ಬಗ್ಗೆ,ಕಿರು ವಿದ್ಯುತ್‌ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದ್ದರು. ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾಹಿತಿ ಕಾರ್ಯಕ್ರಮ ನಡೆದವು. ಬಂದ ಎಲ್ಲರಿಗೂ ಉತ್ತಮವಾದ ಆತಿಥ್ಯವನ್ನೂ ಮಾಡಿದ್ದರು. ಆಗಮಿಸಿದ ಎಲ್ಲರಿಗೂ ಕೃಷಿ ಬೆಳವಣಿಗೆಯ ಪರಿಚಯವಾಗಿದೆ.

ಅಡಿಕೆಯ ವಿವಿಧ ಸಮಸ್ಯೆಗಳು ಇಂದು ಕೃಷಿಕರನ್ನು ಕಾಡಲು ಆರಂಭವಾಗಿದೆ. ಅಡಿಕೆಯ ಜೊತೆಗೆ ಇನ್ನೊಂದು ಕೃಷಿ-ಕೃಷಿ ಚಟುವಟಿಕೆ ಬೇಕು ಎನ್ನುವ ಮಾತುಗಳು ಕೇಳುತ್ತಿವೆ. ಇದೇವೇಳೆ ಕೃಷಿಯಲ್ಲಿ ಮಾದರಿ ತೋಟಗಳ ಬಗ್ಗೆಯೂ ಪರಿಚಯ ಅಗತ್ಯ ಇದೆ. ಆದರೆ ಸಮಯ ವ್ಯರ್ಥವಾಗದೆ, ಕೃಷಿಕನಿಗೂ ಆದಾಯವಾಗುವಂತೆ ಮಾಡುವ ಮಾದರಿಗಳು ಬೇಕಿದೆ.  ಇಂತಹದೊಂದು ಮಾದರಿಯನ್ನು ಸುರೇಶ್‌ ಬಲ್ನಾಡು ಪರಿಚಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಯೋಜನೆಗಳ ವಿಸ್ತರಣೆಗೆ ಅವಕಾಶ ಇದೆ.

Advertisement

Pepper and Arecanut Farmer Suresh Balnadu is making waves in the Dakshina Kannada district with his new agritourism venture. Imagine getting a hands-on farming experience while soaking in the beauty of the countryside – that’s what he’s offering! Suresh’s farm is not just about crops and cattle; it’s a full-blown experience where visitors can learn, relax, and even participate in traditional farming activities. By blending agriculture with tourism, he’s helping folks reconnect with nature, all while boosting the local economy.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

3 hours ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

7 hours ago

Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…

7 hours ago

ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!

ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…

8 hours ago

ಭಾವತೀರ ಯಾನ ತಂಡದ ಸಂದರ್ಶನ

https://youtu.be/uK6DXLGXQiE?si=aXESe-CGSVVHt_WS

1 day ago

ವಳಲಂಬೆ ಜಾತ್ರೆ

https://youtu.be/2vEOlELtngk?si=R4B-hMjIJ5r31QyR

1 day ago