ವಾಯುಮಾಲಿನ್ಯ ಕೊರೋನಾ ವೈರಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆಯೇ….?

October 24, 2020
8:41 PM

ಕೊರೋನಾ ವೈರಸ್ ವೇಗವಾಗಿ‌ ಹರಡಲು ವಾಯುಮಾಲಿನ್ಯವೂ ಪರಿಣಾಮ ಬೀರುತ್ತದೆ ಹಾಗೂ ಕೊರೋನಾ ಸೋಂಕಿತರಿಗೆ ವಾಯು ಮಾಲಿನ್ಯ ಸಂಕಷ್ಟ ತರುತ್ತದೆ ಎಂಬ ಹೊಸದಾದ ವರದಿಯೊಂದು ದೆಹಲಿ ಸರಕಾರವನ್ನು ಎಚ್ಚರಿಸಿದೆ.

Advertisement

ಪ್ರತೀ ವರ್ಷ ದೆಹಲಿಯಲ್ಲಿ ಮಳೆಗಾಲದ ನಂತರ ವಾಯು ಮಾಲಿನ್ಯ ಒಮ್ಮೆಲೇ ಹೆಚ್ಚಾಗುತ್ತದೆ. ದೆಹಲಿಯ ಆಸುಪಾಸಿನ ಪ್ರದೇಶಗಳಲ್ಲಿ ಕೃಷಿ ಬೆಳೆ ಕಟಾವು ಬಳಿಕ ಅನಿವಾರ್ಯವಾಗಿ ಬೆಂಕಿ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ವ್ಯಾಪಕವಾದ ಹೊಗೆ ಕಂಡುಬರುತ್ತದೆ. ಇದು ವಾಯು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಶಾಲೆಯ ಸಂದರ್ಭ ಮಕ್ಕಳಿಗೆ ಶಾಲೆಗೆ ರಜೆ ಘೋಷಣೆ ಮಾಡುವ ಸಂದರ್ಭವೂ ಇತ್ತು. ಇದೀಗ ಕೊರೋನಾ ವೈರಸ್‌ ಪರಿಣಾಮದ ಹಿನ್ನೆಲೆಯಲ್ಲಿ  ನಡೆದ ಅಧ್ಯಯನ ವರದಿಯೊಂದು ವಾಯು ಮಾಲಿನ್ಯವೂ ಕೊರೋನಾ ವೈರಸ್‌ ಹರಡುವುದಕ್ಕೆ ಹೆಚ್ಚು ಅನುಕೂಲವಾದ ವಾತಾವರಣ ಸೃಷ್ಟಿ ಮಾಡಿದರೆ ಕೊರೋನಾ ವೈರಸ್‌ ಸೋಂಕಿತರಿಗೆ ಶ್ವಾಸಕೋಸದ ಮೇಲೆ ವಾಯು ಮಾಲಿನ್ಯದ ಪ್ರಭಾವ ಹೆಚ್ಚಾಗಿ ಸಮಸ್ಯೆ ಉಂಟಾಗಬಹುದು  ಎಂದು ಈ ಅಧ್ಯಯನ ವರದಿ ಹೇಳಿದೆ.

ಪಂಜಾಬ್ ಕೇಸರಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ ಮೊದಲ ಎರಡು ವಾರಗಳಲ್ಲಿ ದೆಹಲಿಯ ವಾಯು ಗುಣಮಟ್ಟ ಕುಸಿದಿದೆ. ಇದು ಹೆಚ್ಚುತ್ತಾ ಸಾಗಿದರೆ ವಾಯುಮಾಲಿನ್ಯವು ಕೊರೋನವೈರಸ್ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಕೊರೋನಾ  ಸೋಂಕಿಗೆ ಒಳಗಾದವರೆಲ್ಲರೂ ಸಹ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಅದು ಎಚ್ಚರಿಸಿದೆ. ವೈದ್ಯರ ಪ್ರಕಾರ, ವೈರಲ್ ಸೋಂಕು ಹೆಚ್ಚಳದಂತಹ ಉಸಿರಾಟದ ಕಾಯಿಲೆಗಳು  ಏರಿಕೆಯಾಗಬಹುದು. ಕಳಪೆ ಗಾಳಿಯ ಗುಣಮಟ್ಟವು ಶ್ವಾಸಕೋಶದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಜನರನ್ನು ವೈರಸ್‌ಗೆ ಹೆಚ್ಚು ಗುರಿಯಾಗಿಸುತ್ತದೆ ಎಂದು ಎಚ್ಚರಿಸಲಾಗಿದೆ.

ಇದು ದೆಹಲಿ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳಲ್ಲಿನ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣವಾಗಬೇಕು ಹಾಗೂ ವಾಯು ಮಾಲಿನ್ಯದ ಕಾರಣದಿಂದಲೇ ಶ್ವಾಸಕೋಸದ ಮೇಲೆ ಪರಿಣಾಮ ಬೀರುತ್ತದೆ. ಇದೇ ಸಂದರ್ಭ ಕೊರೋನಾ ವೈರಸ್‌ ನಂತಹ ಸೋಂಕು ಉಂಟಾದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿಯೇ ಬಹುಪಾಲು ಯುವಕರಿಗೆ ಕೊರೋನಾ ವೈರಸ್‌

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು
February 12, 2026
6:40 AM
by: ಮಹೇಶ್ ಪುಚ್ಚಪ್ಪಾಡಿ
WHO ಅಡಿಕೆ ನೀತಿ ಚರ್ಚೆ | ಆರೋಗ್ಯ ರಕ್ಷಣೆಯೋ, ರೈತರಿಗೆ ಹೊಸ ಸವಾಲೋ?
February 8, 2026
12:47 PM
by: ದ ರೂರಲ್ ಮಿರರ್.ಕಾಂ
ಏಕ ಬೆಳೆಯ ಅಪಾಯಗಳು ಹಾಗೂ ರೈತರ ಅನಿಶ್ಚಿತ ಭವಿಷ್ಯ | ಭಾರತ ಮತ್ತು ಕರ್ನಾಟಕ ಈಗಲೇ ಕಲಿಯಬೇಕಾದ ಸತ್ಯಗಳು..!
January 20, 2026
7:00 AM
by: ಮಿರರ್‌ ಡೆಸ್ಕ್
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror