ಚೀನಾದಲ್ಲಿ ನಡೆಯುವ ವಿಚಾರ ಸಂಕಿರಣಕ್ಕೆ ಸುಳ್ಯದ ಅಕ್ಷರ ದಾಮ್ಲೆಆಯ್ಕೆ | ಗ್ರಾಮೀಣ ಭಾಗಕ್ಕೊಂದು ಗರಿ |

June 5, 2024
10:30 AM
ಚೀನಾ ಸರಕಾರದ ವಾಣಿಜ್ಯ ಸಚಿವಾಲಯವು ಏರ್ಪಡಿಸಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಸುಳ್ಯದ ಅಕ್ಷರ ದಾಮ್ಲೆ ಅವರು ಆಮಂತ್ರಿತರಾಗಿದ್ದಾರೆ .

ಶರೀರದ ನರಗಳ ಅಸ್ವಸ್ಥತೆಗಳ ಹಾಗೂ ಮಾನಸಿಕ ಅಸೌಖ್ಯದ ನಿಯಂತ್ರಣದ ಬಗ್ಗೆ ಇದೇ ಜೂನ್ 12ರಿಂದ ಹತ್ತು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಅರ್ಹರ ಆಯ್ಕೆಗಾಗಿ ಸಲ್ಲಿಸಲ್ಪಟ್ಟ ಪ್ರೊಫೈಲ್ ಗಳಲ್ಲಿ ಭಾರತದಿಂದ ಅಕ್ಷರ ದಾಮ್ಲೆಯವರು ಪರಿಗಣಿಸಲ್ಪಟ್ಟಿದ್ದಾರೆ .ಚೀನಾ ಸರಕಾರದ ವಾಣಿಜ್ಯ ಸಚಿವಾಲಯವು ಏರ್ಪಡಿಸಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಮಂತ್ರಿತರಾಗಿದ್ದಾರೆ .

ಅವರು ಬೆಂಗಳೂರಿನ ಕೊಳೆಗೇರಿಗಳಲ್ಲಿ ಮಾನಸಿಕ ಅಸ್ವಸ್ಥತೆಯ ನಿವಾರಣೆಗಾಗಿ ಕೈಗೊಂಡ ಸೇವಾ ಕಾರ್ಯಗಳು ಹಾಗೂ 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದ್ದು , ಅವರ ಇಂಗ್ಲಿಷ್ ಲೇಖನಗಳು ಹಾಗೂ ಉಪನ್ಯಾಸಗಳ ಕೊಡುಗೆಗಳನ್ನು ಆಯ್ಕೆ ಸಮಿತಿಯು ಪರಿಗಣಿಸಿದೆ. ಇದು ಅಂತಾರಾಷ್ಟ್ರೀಯ ಸಮ್ಮೇಳನವಾದುದರಿಂದ ಭಾಗವಹಿಸುವವರಿಗೆ ಇಂಗ್ಲಿಷ್ ಜ್ಞಾನ ಇರಲೇಬೇಕೆಂಬ ಕಂಡೀಶನ್ ಇದೆ. ಅಕ್ಷರ ಅವರಿಗೆ ಸ್ನೇಹ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಣದ ಗಟ್ಟಿ ತಳಹದಿ ಸಿಕ್ಕಿತ್ತು.ಮಾನಸಿಕ ಸಮಸ್ಯೆಗಳ ನಿವಾರಣೆಯ ಬಗ್ಗೆ ಯೂಟ್ಯೂಬ್ ನಲ್ಲಿರುವ ಅವರ ಇಂಗ್ಲಿಷ್ ಭಾಷಣಗಳು ಈ ವಿಚಾರ ಸಂಕಿರಣಕ್ಕೆ ಆಯ್ಕೆಯಾಗಲು ಉಪಯುಕ್ತವಾದವು . ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಮಾನಸಿಕ ಚಿಕಿತ್ಸೆಯ ಮನೋ ಸಂವಾದ ಸಂಸ್ಥೆಯನ್ನು ಸ್ಥಾಪಿಸಿರುವ ಅಕ್ಷರ ಅವರ ಆತಿಥ್ಯವನ್ನು ಹಾಗೂ ಪ್ರಯಾಣ ವೆಚ್ಚಗಳನ್ನು ಚೀನಾ ಸರಕಾರವೇ ಭರಿಸಲಿದೆ .

ಚೀನಾದ ರಾಜಧಾನಿ ಬೀಜಿಂಗ್‍ಗೆ ಚೀನಾದ ರಾಜಧಾನಿ ಬೀಜಿಂಗ್ ಗೆ ಸಮೀಪವಿರುವ ಅಕಾಡೆಮಿ Academy for International Business Offic ಕೇಂದ್ರದಲ್ಲಿ ಜರಗಲಿರುವ ಈ ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳ ಮನಶ್ಯಾಸ್ತ್ರಜ್ಞರು ಭಾಗವಹಿಸಲಿದ್ದಾರೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?
December 16, 2025
1:47 PM
by: ಸಾಯಿಶೇಖರ್ ಕರಿಕಳ
ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ
December 16, 2025
7:22 AM
by: ರೂರಲ್‌ ಮಿರರ್ ಸುದ್ದಿಜಾಲ
ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ
December 16, 2025
7:20 AM
by: ರೂರಲ್‌ ಮಿರರ್ ಸುದ್ದಿಜಾಲ
ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ
December 16, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror