Advertisement
Opinion

#Alergy | ಪ್ರತಿ ಕ್ಷಣವೂ ಕಿರಿಕಿರಿ ಅನ್ನಿಸುವ ಅಲರ್ಜಿ | ಕಂಡುಕೊಳ್ಳಿ ಆಯುರ್ವೇದ ಪರಿಹಾರ

Share

ಅಲರ್ಜಿ #alergy –  ಪದೇಪದೇ ಸೀನು ಬರುವುದು, ಮೂಗಿನಿಂದ ನೀರು ಸೋರುವುದು, ಶೀತ, ಕೆಮ್ಮು, ಕಣ್ಣುಗಳು ಕೆಂಪಾಗುವುದು, ಮುಖ ಊದಿಕೊಳ್ಳುವುದು, ಚರ್ಮದ ತುರಿಕೆ, ಚರ್ಮದಲ್ಲಿ ಕೆಂಪು ಕಲೆಗಳು, ಪಿತ್ತಗಂದೆ ಬರುವುದು, ಗಂಟಲು ಕರಕರ, ಉಸಿರಾಟದಲ್ಲಿ ಅಡಚಣೆ ದ್ವನಿಯಲ್ಲಿ ಏರುಪೇರು, ವಿಪರೀತ ಆಯಾಸ, ಮೊದಲಾದ ಹಲವು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಿರುವ ಅಂಶವನ್ನು ಅಲರ್ಜಿ ಎಂದು ಹೇಳಲಾಗುತ್ತದೆ.

Advertisement
Advertisement

ಅಲರ್ಜಿ ಎನ್ನುವುದು ಮಾನವನ ಶರೀರದ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಪಟ್ಟ ಪ್ರತಿಕ್ರಿಯೆ. ಉದಾಹರಣೆಗೆ ಹೂವುಗಳ ಪರಾಗಕಣಗಳು, ಧೂಳು, ಹೊಗೆ, ಕೆಲವು ಆಹಾರ ಪದಾರ್ಥಗಳು, ಹಾಲು, ಮೊಟ್ಟೆ, ಸೋಯಾ, ಮೀನು ಮಾಂಸ, ಕೆಲವು ರೀತಿಯ ಔಷಧಿಗಳು( Antibiotics /painkillers/Bp tablets)) ಇಲ್ಲವೇ ಕೆಲವು ಪದಾರ್ಥಗಳನ್ನು ಮುಟ್ಟುವುದರಿಂದ, ಹಾಗೂ ಕೆಲವು ವಸ್ತುಗಳ ವಾಸನೆಯಿಂದ (ಅಗರ ಬತ್ತಿ, ಧೂಪ ), ಕ್ರಿಮಿ ಕೀಟಗಳ ಜಂತು ಸೊಳ್ಳೆ ಇವುಗಳ ಸ್ಪರ್ಶದಿಂದ ಹಾಗೂ ವಾತಾವರಣ ಬದಲಾವಣೆಯಿಂದ ನಮ್ಮ ಶರೀರದೊಳಗೆ ಅತಿಯಾದ ಪ್ರತಿಕ್ರಿಯೆ ಪ್ರಾರಂಭವಾಗುವುದನ್ನು ಅಲರ್ಜಿ ಎಂದು ಕರೆಯುತ್ತಾರೆ.

Advertisement

ಅಲರ್ಜಿಗೆ ಕಾರಣವಾದ ಪ್ರತಿಕ್ರಿಯೆಯನ್ನು allegic reaction ಅಂತ ಸಾಮಾನ್ಯವಾಗಿ ಕರೆಯುತ್ತೇವೆ. ನಾವು ಉಸಿರಾಡುವ ಗಾಳಿ,ಕುಡಿಯುವ ನೀರು, ಸೇವಿಸುವ ಆಹಾರಗಳ ಜೊತೆಗೆ ಒಳಗಡೆ ಪ್ರವೇಶಿಸುವ ಎಷ್ಟೋ ಕ್ರಿಮಿಕೀಟಗಳ ವಿರುದ್ಧ ಬಿಳಿ ರಕ್ತ ಕಣಗಳು ತೀವ್ರವಾಗಿ ಹೋರಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ. ಇಂತಹ ಹಾನಿಯನ್ನು ಉಂಟುಮಾಡುವ ಪದಾರ್ಥಗಳು ನಮ್ಮ ಶರೀರದಲ್ಲಿ ತೀವ್ರ ಪ್ರತಿಕ್ರಿಯೆ ನೀಡುವುದನ್ನು Hypersentivity ಅಥವಾ ಅಲರ್ಜಿ ಎಂದು ಕರೆಯಲಾಗುತ್ತದೆ.

ಅಲರ್ಜಿಯಲ್ಲಿ ವಿವಿಧ ರೀತಿಗಳಿವೆ:
– ಶ್ವಾಸಕೋಶ ಸಂಬಂಧಪಟ್ಟ ಅಲರ್ಜಿ … ಧೂಳು ಹೊಗೆ ತಣ್ಣನೆಯ ಗಾಳಿ ಇವುಗಳಿಂದ ಪದೇಪದೇ ಸೀನು ಬರುವುದು, ಕೆಮ್ಮು, ಮೂಗು ಕಟ್ಟುವುದು, ಉಸಿರಾಟ ಸಮಸ್ಯೆ,ದಮ್ಮು ತಲೆನೋವು ಮೊದಲಾದ ಸಮಸ್ಯೆಗಳು ಉಂಟಾಗುವುದು… (Allergic rhinitis /Allergic bronchititis / Allergic sinusitis)
– ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿ (Skin allergy )… ಕೆಲವು ಔಷಧಿಗಳ ಸೇವನೆಯಿಂದ ಹಾಗೂ ಕೆಲವು ಆಹಾರ ಪದಾರ್ಥಗಳು ಇಲ್ಲವೇ ಕೆಲವು ವಸ್ತುಗಳ/ ಗಿಡ ಮರಗಳ/ ಕ್ರಿಮಿ ಕೀಟಗಳ ಸ್ಪರ್ಶದಿಂದ ಚರ್ಮದ ತುರಿಕೆ ಚರ್ಮಕೆಂಪಾಗುವುದು
(Urticaria /Allergic Dermatitis /skin rashes/ pimples)
– ಜೀರ್ಣಕೋಶಕ್ಕೆ ಸಂಬಂಧಪಟ್ಟ ಅಲರ್ಜಿ(Food allergy /ಆಹಾರ ಅಲರ್ಜಿ ).. ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಶರೀರದಲ್ಲಿಅಲರ್ಜಿ ಉಂಟಾಗಿ ಅತಿಸಾರ ಮಲಬದ್ಧತೆ ವಾಂತಿ ಆಯಾಸ ಕಾಣಿಸಿಕೊಳ್ಳುವುದು.

Advertisement

ಆಯುರ್ವೇದ ಪರಿಹಾರ:
– ಆಹಾರದ ಅಲರ್ಜಿ…. ಅಲರ್ಜಿಗೆ ಕಾರಣವಾದ ಪದಾರ್ಥಗಳನ್ನು ತ್ಯಜಿಸುವುದು..
– ಅಗ್ನಿ ಅಥವಾ ಜೀರ್ಣಕಾರಿ ಶಕ್ತಿಯನ್ನು ಬಲಪಡಿಸಿಕೊಳ್ಳುವುದು
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನ ಸೇವನೆ ಮಾಡುವುದು
ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು
– ವಿರುದ್ಧ ಆಹಾರದ ಸೇವನೆ ನಿಷೇಧಿಸುವುದು(ಹಾಲುಹಣ್ಣು, ಹಾಲು ಮತ್ತು ಮೊಸರಿನ ಜೊತೆ ಮಾಂಸಹಾರ ಸೇವನೆ, Milkshakes ).
ಸಂಜೆ 7 ಗಂಟೆಯ ನಂತರ ಆಹಾರ ಸೇವಿಸುವುದನ್ನು ನಿಲ್ಲಿಸುವುದು.
ವಿಟಮಿನ್ C ಹೇರಳವಾಗಿರುವ ಆಹಾರ ಪದಾರ್ಥದ ಸೇವನೆ.
– ಸಂಸ್ಕರಿಸಿದ ಆಹಾರ ಪದಾರ್ಥಗಳು (junk food/ fastfood/ packed food etc) ಇವುಗಳ ಅತಿ ಸೇವನೆಯಿಂದ ಅಗ್ನಿ ಅಥವಾ ಜೀರ್ಣಕ್ರಿಯೆ ಶಕ್ತಿಯು ದುರ್ಬಲಗೊಂಡು ಆಹಾರದ ಅಲರ್ಜಿ ಸಮಸ್ಯೆ ಉಂಟಾಗುವುದು. ಸರಿಯಾದ ಆಹಾರವನ್ನು ಸರಿಯಾದ ಮಾರ್ಗಸೂಚಿ ಗಳನ್ನು ಬಳಸಿಕೊಂಡು ಆಹಾರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಈ ಅಲರ್ಜಿ ಸಮಸ್ಯೆಯನ್ನು ನಿವಾರಿಸಬಹುದು.

ಬರಹ :
Dr Jyothi, Ayurveda
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೈಸೂರು ದಸರದಲ್ಲಿ ರೈತರಿಗೆ ಗೌರವ | ಬೆಳೆ ಇಳುವರಿ ಹೆಚ್ಚು ಮಾಡಲು ಹಲವು ಕ್ರಮ – ಕೃಷಿ ಸಚಿವ ಚಲುವರಾಯಸ್ವಾಮಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮಕ್ಕೆ…

23 mins ago

ಜಿಲ್ಲಾಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋ ಥೆರಫಿ’ ಕೇಂದ್ರ ಶೀಘ್ರದಲ್ಲೇ ಆರಂಭ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋ ಥೆರಫಿ’ ಕೇಂದ್ರಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.…

28 mins ago

ಬಗರ್‌ಹುಕುಂ ಅರ್ಜಿಗಳ ವಿಲೇವಾರಿಗಾಗಿ 2 ತಿಂಗಳು ಗಡುವು | ಕಂದಾಯ ಸಚಿವ ಕೃಷ್ಣ ಭೈರೇಗೌಡ

ಅಧಿಕಾರಿಗಳು ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನುಕ್ರಮ ಎದುರಿಸಬೇಕಾಗುತ್ತದೆ ಎಂದು…

32 mins ago

ಹವಾಮಾನ ವರದಿ | 06-10-2024 | ಸಂಜೆ ಗುಡುಗು ಸಹಿತ ಮಳೆ ನಿರೀಕ್ಷೆ | ಅ.15 ರವರೆಗೆ ಮಳೆ ಸಾಧ್ಯತೆ |

ಅಕ್ಟೊಬರ್ 10ರ ನಂತರದ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಸ್ವಷ್ಠತೆ…

3 hours ago

ನವರಾತ್ರಿ ಸಂಭ್ರಮ | ಕರಾವಳಿಯಲ್ಲಿಈಗ ಹುಲಿ ವೇಷದ ಕುಣಿತ | ಸ್ಥಾನಪಡೆಯುತ್ತಿರುವ “ಪಿಲಿಗೊಬ್ಬು” |

ಹುಲಿ ನೃತ್ಯ ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡರೂ ಇದು ದೇವಿಯ  ಆರಾಧನೆಯ  ಇನ್ನೊಂದು…

6 hours ago

ಕೃಷಿ ಸಮ್ಮಾನ್‌ ನಿಧಿಯ 18 ನೇ ಕಂತು ಬಿಡುಗಡೆ | 9.4 ಕೋಟಿ ರೈತರ ಖಾತೆಗೆ ಹಣ ಜಮೆ |

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ಪಿಎಂ ಕೃಷಿ ಸಮ್ಮಾನ್‌ ನಿಧಿಯ 18ನೇ ಕಂತಿನ…

8 hours ago