ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು 9482 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಜುಲೈ 3 ರಂದು ಪ್ರಾರಂಭವಾದಾಗಿನಿಂದ ಯಾತ್ರೆ ಕೈಗೊಂಡಿರುವ ಒಟ್ಟು ಭಕ್ತರ ಸಂಖ್ಯೆ 3.52 ಲಕ್ಷ ತಲುಪಿದೆ.
ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಉತ್ತಮವಾಗಿದ್ದರೂ, ಜಮ್ಮುವಿನಿಂದ ಯಾತ್ರಿಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದರೂ ಯಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯುತ್ತಿದೆ. ಆಶ್ರಯ, ಆಹಾರ, ವೈದ್ಯಕೀಯ ನೆರವು ಮತ್ತು ಮಾರ್ಗ ಭದ್ರತೆ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆ, ಅಮರನಾಥ ಯಾತ್ರೆಯ ಭಾಗವಾಗಿ ಶಿವನ ಪವಿತ್ರ ಆಯುಧ ‘ಛರಿ ಮುಬಾರಕ್’ ಅನ್ನು ಶ್ರೀನಗರದ ಐತಿಹಾಸಿಕ ಶಂಕರಾಚಾರ್ಯ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ದೇವಿಯ ಆಶೀರ್ವಾದ ಪಡೆಯಲು ಇಂದು ಪವಿತ್ರ ಆಯುಧವನ್ನು ಹರಿ ಪರ್ಬತ್ನಲ್ಲಿರುವ ‘ಶರಿಕಾ ಭವಾನಿ ದೇವಸ್ಥಾನ’ಕ್ಕೆ ಕೊಂಡೊಯ್ಯಲಾಗುವುದು. ಅಮರನಾಥ ಗುಹಾ ದೇಗುಲಕ್ಕೆ ಛಾರಿ ಮುಬಾರಕ್ನ ಅಂತಿಮ ಪ್ರಯಾಣವು ಚಂದನ್ವಾರಿ, ಶೇಷನಾಗ್ ಮತ್ತು ಪಂಚತರಣಿಯಲ್ಲಿ ರಾತ್ರಿ ತಂಗುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಪಹಲ್ಗಾಮ್ನಲ್ಲಿರುವ ಲಿಡ್ಡರ್ ನದಿಯಲ್ಲಿ ಆಯುಧ “ವಿಸರ್ಜನೆ”ಯೊಂದಿಗೆ ತೀರ್ಥಯಾತ್ರೆ ಕೊನೆಗೊಳ್ಳುತ್ತದೆ.
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…
ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…