ಕಾಲೇಜು ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಒಮ್ಮಿಂದೊಮ್ಮೆಗೆ ಆಶ್ಚರ್ಯ…! ಇದೇನು?. ಅಂತ ಅತ್ತಿತ್ತ ನೋಡುತ್ತಿರುವಾಗಲೇ ಸಾಲು ಸಾಲು ಹುಲಿಗಳು ವೇದಿಕೆಯನ್ನೇರಿ ಕುಣಿಯಲಾರಂಭಿಸಿದ್ದವು. ವೇದಿಕೆಯೊಂದರಲ್ಲೇ ಮೂವತ್ತಕ್ಕಿಂತಲೂ ಅಧಿಕ ಹುಲಿಗಳು ನರ್ತಿಸುವ ಅಪೂರ್ವ ಅವಕಾಶವನ್ನು ನೆರೆದ ಸಾವಿರಾರು ಮಂದಿ ತಮ್ಮದಾಗಿಸಿಕೊಂಡರು.
ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ವಾರ್ಷಿಕೋತ್ಸವ – ಮಾನಸೋಲ್ಲಾಸ 2022-23 ನಡೆಯುತ್ತಿದ್ದ ಮಧ್ಯೆಯಲ್ಲಿ ಈ ಹುಲಿಗಳ ಆಗಮನವಾಯಿತು. ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಪ್ರಸ್ತುತಿಯಲ್ಲಿ ಅನೇಕ ಮಂದಿ ಹುಲಿವೇಷಧಾರಿಗಳಾಗಿ ಪುತ್ತೂರಿಗರ ಮನರಂಜಿಸುತ್ತಿದ್ದಾರೆ. ಅದರ ಭಾಗವಾಗಿ ಆ ತಂಡದಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸುಮಾರು ಅರ್ಧ ಗಂಟೆಯ ಹುಲಿನರ್ತನ ನಡೆಯಿತು. ಈ ‘ಪಿಲಿ ನಲಿಕೆ’ ಯುವಮನಸ್ಸುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಭಾಗವನ್ನು ಅನಾವರಣಗೊಳಿಸಿತು.
ಕಪ್ಪು ಹುಲಿಗಳು, ಪಟ್ಟೆ ಹುಲಿಗಳು, ಚಿರತೆ ಬಣ್ಣದ ಹುಲಿಗಳು, ಅವುಗಳ ಜತೆಗೆ ಪುಟಾಣಿ ಹುಲಿಗಳು ಹಿಮ್ಮೇಳದ ಸದ್ದಿನ ಜತೆಗೆ ವೈಭವದ ಹೆಜ್ಜೆಯನ್ನಿರಿಸಿದವು. ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಪಿಲಿ ನಲಿಕೆಯ ನಾನಾ ವೈವಿಧ್ಯಗಳು ತೆರೆದುಕೊಂಡು ವಿಶಿಷ್ಟ ಕ್ಷಣಕ್ಕೆ ಸಾಕ್ಷಿಯಾಯಿತು. ಯುವ ಸಮೂಹವನ್ನು ‘ಪಿಲಿ ನಲಿಕೆ’ ಮೂಲಕ ರಂಜಿಸಿದ ಕಲ್ಲೇಗ ಟೈಗರ್ಸ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಗೌರವಿಸಿದರು.ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…