ಅಡಿಕೆಗೆ ಇನ್ನೊಂದು ಹೆಜ್ಜೆ | ಹಾನಿಕಾರಕ ಭೀತಿ ಹೋಗಲಾಡಿಸಲು ಮಹತ್ವದ ಹೆಜ್ಜೆ |

November 11, 2023
3:16 PM
ಅಡಿಕೆಯ ಪರ್ಯಾಯ ಬಳಕೆ ಹಾಗೂ ಅಡಿಕೆಯ ಗುಣಗಳ ಬಗ್ಗೆ ಅಧ್ಯಯನಕ್ಕೆ ಪ್ರಮುಖ ಸಂಸ್ಥೆಗಳ 25 ವೈದ್ಯರು ಹಾಗೂ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಧ್ಯಯನ ನಡಸಲಿದೆ.

ಅಡಿಕೆ ಹಾನಿಕಾರಕ ಎಂಬ ಗುಮ್ಮ ಕಳೆದ ಹಲವು ಸಮಯಗಳಿಂದ ಇದೆ. ಅಡಿಕೆ ಜಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಆರೋಪ ಇದೆ. ಇದಕ್ಕಾಗಿ ಕಳೆದ ಹಲವಾರು ಸಮಯಗಳಿಂದ ಚರ್ಚೆ ನಡೆಯುತ್ತಲೇ ಇದೆ. ಇದೀಗ ಸಿಪಿಸಿಆರ್‌ಐ ಈ ಬಗ್ಗೆ ಬೆಳೆಗಾರರಿಗೆ ಪ್ರಯೋಜನವಾಗುವ ಹೆಜ್ಜೆಯೊಂದಕ್ಕೆ ಇಳಿದಿದೆ.

ಅಡಿಕೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ಧಾರಣೆಯ ಕಾರಣದಿಂದ ವಿಸ್ತರಣೆಯೂ ಆಗುತ್ತಿದೆ. ಅಡಿಕೆ ಬೆಳೆಯುವ ಶೇ.90 ರಷ್ಟು ಜಗಿಯಲು ಬಳಕೆಯಾಗುತ್ತದೆ. ಅಡಿಕೆ ಮಾರಾಟ ನಂತರ ಏನಾಗುತ್ತದೆ ಎನ್ನುವುದೂ ಬೆಳೆಗಾರರಿಗೆ ತಿಳಿಯುತ್ತಿಲ್ಲ. ಆದರೆ ಬಹುಪಾಲು ಅಡಿಕೆ ಜಗಿಯಲೇ ಬಳಕೆಯಾಗುತ್ತದೆ. ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಇನ್ನೂ ಅಧ್ಯಯನಗಳು ಸಾಕಾಗಿಲ್ಲ. ಆದರೆ ಇದಕ್ಕೆಲ್ಲಾ ಅಡ್ಡಿ ಇರುವುದು  ಅಡಿಕೆ ಹಾನಿಕಾರಕ ಎಂಬ ಗುಮ್ಮ.

ಈ ನಿಟ್ಟಿನಲ್ಲಿ ಕಳೆದ ಹಲವು ಸಮಯಗಳಿಂದ ಚರ್ಚೆ ಆಗುತ್ತಿದೆ. ಇದೀಗ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಭಯ ನಿವಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ.  ಇದೇ ತಿಂಗಳಲ್ಲಿ ಅಡಿಕೆಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖರು ಭಾಗವಹಿಸುತ್ತಾರೆ. ಪ್ರಮುಖ ಸಂಸ್ಥೆಗಳಿಂದ ಸುಮಾರು 25 ವೈದ್ಯರು ಆಗಮಿಸುತ್ತಾರೆ. ಅಡಿಕೆ ಮಾತ್ರವೇ ತಿಂದರೆ ಏನಾಗುತ್ತದೆ..? ಅಡಿಕೆ ಜೊತೆಗೆ ಇತರ ವಸ್ತುಗಳನ್ನು ಬಳಕೆ ಮಾಡಿದರೆ ಏನಾಗುತ್ತದೆ..? ಇತ್ಯಾದಿಗಳ ಬಗ್ಗೆ ಚರ್ಚೆ ಹಾಗೂ ಅಧ್ಯಯನ ನಡೆಸಲಾಗುತ್ತದೆ.  ಅಡಿಕೆಯ ಸಾಧ್ಯತೆಗಳ ಬಗ್ಗೆ ಕ್ಲಿನಿಕಲ್‌ ಆಗಿರುವ ಮಾಹಿತಿಯನ್ನು ಪಡೆಯಲಾಗುತ್ತದೆ.

ಕೇವಲ ಅಡಿಕೆಯನ್ನು ಜಗಿದರೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವ ವರದಿಯ ಮೂಲಕ ಅಡಿಕೆಯ ಬೇರೆ ಬೇರೆ ಉತ್ಪನ್ನಗಳು ತಯಾರಾಗಬೇಕಿದೆ. ಅಡಿಕೆ ಜಗಿಯುವುದಕ್ಕಿಂತಲೂ ಅಡಿಕೆಯ ಪರ್ಯಾಯ ಉತ್ಪನ್ನಗಳು ತಯಾರಾಗಬೇಕಿದೆ. ಇದಕ್ಕಾಗಿ ಅಡಿಕೆ ಹಾನಿಕಾರಕ ಎಂಬ ಅಂಶ ದೂರವಾಗಬೇಕಿದೆ. ಈ ಹೆಜ್ಜೆ ಇದೀಗ ಮಹತ್ವದ್ದಾಗಿದೆ. ಸಿಪಿಸಿಆರ್‌ ಐ ಈ ಕ್ರಮ ಕೈಗೊಳ್ಳುತ್ತಿದೆ.

ಅಡಿಕೆ ಎಷ್ಟೇ ಉತ್ಪಾದನೆಯಾದರೂ ಅಡಿಕೆಯ ಬಳಕೆ ಅದೇ ಪ್ರಮಾಣದಲ್ಲಿ ಆಗಬೇಕಿದೆ. ಅದು ಜಗಿಯುವುದು  ಮಾತ್ರಾ ಅಲ್ಲ, ಅದರ ಹೊರತಾದ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ವೈದ್ಯರು ಜೊತೆಯಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ ಬಾಲಚಂದ್ರ ಹೆಬ್ಬಾರ್‌ ಹೇಳುತ್ತಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?
August 7, 2026
11:12 AM
by: ಸಾಯಿಶೇಖರ್ ಕರಿಕಳ
ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ
August 7, 2026
7:34 AM
by: ದ ರೂರಲ್ ಮಿರರ್.ಕಾಂ
‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror