MIRROR FOCUS

#AgriTourism | ಕೃಷಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕೃಷಿ ಆಶ್ರಮದ ಮತ್ತೊಂದು ಕಾರ್ಯಕ್ರಮ | ಕೃಷಿಯ ಆಸಕ್ತರಿಗಾಗಿ ವಿಶೇಷ ಕಾರ್ಯಗಾರ |

Share

ಮಹಾರಾಷ್ಟ್ರದಲ್ಲಿ ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ (Agri Tourism)  ಅನ್ನು ಕರ್ನಾಟಕದಲ್ಲಿಯೂ ಬೆಳೆಸುವ ಇಚ್ಛೆ ಇದೆ. ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಆಶ್ರಮ) ಕೃಷಿ ಆಶ್ರಮದ ಮೊಗದೊಂದು ಕಾರ್ಯಕ್ರಮ, ಅಕ್ಟೋಬರ್ 1 (ಭಾನುವಾರ) ಹಾಗೂ 2 (ಸೋಮವಾರ) ರಂದು ಸಾಗರದ ಬಳಿ ಆಯೋಜಿಸಲಾಗಿದೆ.

ಸಾವಯವ ಕೃಷಿಕರಿಗಾಗಿ ಮತ್ತು ಸಾವಯವ ಕೃಷಿಯ ಆಸಕ್ತರಿಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು: 01.10.2023: ಸಾರ ಸಂಸ್ಥೆ. ಬಟ್ಟೆಮಲ್ಲಪ್ಪ. ಹೊಸನಗರ ತಾ. ಶಿವಮೊಗ್ಗ ಜಿಲ್ಲೆ.

02.10.2023 ರಂದು ಸಾಗರ ಬಳಿಯ ಪ್ರಕಾಶ ಮಂಚಾಲೆ ಅವರ ಔಷಧೀಯ ಸಸ್ಯಗಳ ತೋಟದಲ್ಲಿ ಗೆಳೆಯರೇ “ಕೃಷಿ ಆಶ್ರಮ” ಎಂದರೆ ಅಗ್ರಿ ಟೂರಿಸಂ. ಈ ಯೋಜನೆಯ ಉದ್ದೇಶ ಜನರು ಮತ್ತೆ ಪಟ್ಟಣಗಳಿಂದ ಹಳ್ಳಿಗಳತ್ತ ಮುಖ ಮಾಡಬೇಕು ಹಳ್ಳಿಗಳು ಉಳಿಯಬೇಕು, ಹಳ್ಳಿಗಳ ಆರ್ಥಿಕತೆ ಸದೃಢವಾಗಬೇಕು. ಕೃಷಿಕ ಮತ್ತು ಕೃಷಿ ಮತ್ತೆ ಚಿಗುರಬೇಕು. ಭಾರತ ಮತ್ತೆ ಕೃಷಿ ಪ್ರಧಾನ ದೇಶವಾಗಬೇಕು. ಇಲ್ಲಿನ ಜನರು ಹೆಚ್ಚು ಆರೋಗ್ಯವಂತರು, ಸಂಸ್ಕೃತಿವಂತರಾಗಬೇಕು. ಈ ಉದ್ದೇಶದಿಂದ ಈ ಎರಡು ದಿನಗಳ “ಕೃಷಿ ಆಶ್ರಮ ತರಬೇತಿ ಶಿಬಿರ” ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:
ಕೃಷಿ ಆಶ್ರಮಕ್ಕೆ ಭವಿಷ್ಯವಿದೆಯೇ? ಅಲ್ಲಿ ಇರಬೇಕಾದ ವಸ್ತುಗಳೇನು? ಇರಬಾರದ ವಸ್ತುಗಳಾವುವು? ಕೃಷಿ ಆಶ್ರಮ ಎಂದರೇನು?  ಕೃಷಿ ಆಶ್ರಮ ಪರಿಕಲ್ಪನೆ, ಉದ್ದೇಶ ಮತ್ತು ಅಗತ್ಯಗಳೇನು?  ಅದರ ಸ್ಥಾಪನೆಗೆ ಸಿದ್ಧತೆ ಹೇಗೆ?  ಆಶ್ರಮ ತೆರೆಯಲು ಎಷ್ಟು ವೆಚ್ಚ ಬಂದೀತು ?  ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು?  ನಿಬಂಧನೆಗಳು ಯಾವುವು?  ಕೃಷಿ ಆಶ್ರಮದ ಲಾಭಗಳೇನು?

“ಹಳ್ಳಿಯ ಸಂಪನ್ಮೂಲಗಳಿಂದ ಮೌಲ್ಯವರ್ಧನೆಯ ಸಾಧ್ಯತೆಗಳು”, ” ಕೃಷಿ ಆಶ್ರಮದಲ್ಲಿ ಆರೋಗ್ಯಕರ ದಿನಚರಿ ಹೇಗೆ ಇರಬೇಕು ಮತ್ತು ಯಾಕೆ?” , ಸಣ್ಣ ರೈತರು ಕೃಷಿಯಲ್ಲಿ ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದು? , ಸಣ್ಣ ಜಾಗದಲ್ಲಿ ವಾರ್ಷಿಕ ದ್ವಿವಾರ್ಷಿಕ, ತ್ರಿವಾರ್ಷಿಕ & ಬಹುವಾರ್ಷಿಕ ಬೆಳೆಗಳನ್ನು ಜೋಡಿಸುವ ಕ್ರಮವನ್ನು ವೀಕ್ಷಿಸುವುದು , ಶತಮೂಲಿಕ ವನ ನಿರ್ಮಾಣದ ಬಗ್ಗೆ ತಿಳಿಯುವುದು , ಕಾಡು ಮಾದರಿಯ ತೋಟದ ನಿರ್ಮಾಣದ ಬಗ್ಗೆ ವಿವರವಾದ ನೋಟ , ನೀರಿಲ್ಲದೆ, ಸ್ವಲ್ಪ ನೀರಿದ್ದಾಗ ಮತ್ತು ನೀರು ಅವಲಂಬಿತ ಕೃಷಿ ಹೇಗೆ ಮಾಡುವುದು ಎಂದು ತಿಳಿಯಲು , ದೀರ್ಘಾವಧಿ ಬೆಳೆಗಳ ಮಧ್ಯದಲ್ಲಿ ಆಯುರ್ವೇದ ಅಥವಾ ಔಷಧೀಯ ಸಸ್ಯಗಳ ಸಂಯೋಜನೆ , ಔಷಧೀಯ ಸಸ್ಯಗಳ ಬಳಕೆ ಮತ್ತು ಉತ್ಪನ್ನಗಳ ತಯಾರಿಕೆ , ಮಣ್ಣು ಹವಾಮಾನ ತಾಪಮಾನದ ಅನುಗುಣವಾಗಿ ಕೃಷಿ ವಿಧಾನಗಳು ಇತ್ಯಾದಿ ಸಂಗತಿಗಳ ಬಗ್ಗೆ ಮಾತುಕತೆ ನಡೆಯಲಿದೆ.

ಆಸಕ್ತರು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ ನೊಂದಣಿ ಮಾಡಿಸಿಕೊಳ್ಳಿ . ಕೇವಲ 50 ಮಂದಿಗೆ ಮಾತ್ರ ಅವಕಾಶ (ಇಷ್ಟು ಮಂದಿಗೆ ರಾತ್ರಿ ತಂಗಲು ವ್ಯವಸ್ಥೆ ಇದೆ). ಮೊದಲು ಪ್ರತಿಕ್ರಿಯೆ ನೀಡಿದವರಿಗೆ ಆದ್ಯತೆ. ನೊಂದಾಯಿತರಿಗೆ ಮಾತ್ರ ಅವಕಾಶ ಶುಲ್ಕ: 900/- 2 ದಿನಗಳಿಗೆ ವಸತಿ ಸಹಿತ 7259588743 ಫೋನ್ ಪೇ / ಗೂಗಲ್ ಪೇ ಸಂಪರ್ಕಿಸಿ: 7259588743 9916030272 .

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವ್ಯೋಮಯಾನಿಗಳ ಪುನರ್ಜನ್ಮ….! ವಿಜ್ಞಾನದ ವಿಸ್ಮಯ…!

ಕ್ರಿಕೆಟ್ ಪಂದ್ಯವನ್ನು ಅಥವಾ ಗ್ರಹಣವನ್ನು ವೀಕ್ಷಿಸುವುದಕ್ಕಾಗಿ ಸಮಯವನ್ನಿಟ್ಟುಕೊಂಡು ಸಿದ್ಧರಾಗುವಂತೆ ನಾನು ಸಿದ್ಧನಾಗಿದ್ದೆ. ಇಲ್ಲಿ…

44 minutes ago

ಹವಾಮಾನ ವರದಿ | 19-03-2025 | ಇಂದು ಕೆಲವು ಕಡೆ ಮಳೆ ಸಾಧ್ಯತೆ | ಮಾರ್ಚ್ 22 ರಿಂದ ಬೇಸಿಗೆ ಮಳೆಯ ಮುನ್ಸೂಚನೆ |

ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 22 ರಿಂದ ಬೇಸಿಗೆ ಮಳೆ ಆರಂಭವಾಗುವ…

8 hours ago

ಮಲೆನಾಡು-ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಎಲ್ಲಾಗುತ್ತಿದೆ…? | ಇಳುವರಿ ಕೊರೆತೆಯಾಗುತ್ತಿರುವುದು ಏಕೆ..? | ಏನು ಮಾಡಬಹುದು ಮುಂದೆ..?

ಈಚೆಗೆ ಕರಾವಳಿ-ಮಲೆನಾಡು ಭಾಗದಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಅದರ ಜೊತೆಗೇ ತೇವಾಂಶ ಗಣನೀಯವಾಗಿ…

10 hours ago

ಹೊಸರುಚಿ | ಗುಜ್ಜೆ ಸಮೋಸ

ಗುಜ್ಜೆ ಸಮೋಸಕ್ಕೆ ಬೇಕಾಗುವ ಸಾಮಗ್ರಿಗಳು  ಹಾಗೂ ಮಾಡುವ ವಿಧಾನ : ಗೋಧಿ ಹುಡಿ…

13 hours ago

ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

15 hours ago

ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್

ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ…

15 hours ago