Advertisement
MIRROR FOCUS

ಮೂರು ವರ್ಷದ ಬಾಲಕ ಈಗ ಅತ್ಯಂತ ಕಿರಿಯ ಫಿಡೆ ರೇಟೆಡ್‌ ಚೆಸ್‌ ಆಟಗಾರ..!

Share

ಮೂರು ವರ್ಷ, ಎಂಟು ತಿಂಗಳ ಕೋಲ್ಕತ್ತಾದ ಅನೀಶ್ ಸರ್ಕಾರ್  ಇತಿಹಾಸದಲ್ಲಿ ಅತ್ಯಂತ ಕಿರಿಯ ಪಿಡೇ ರೇಟೆಡ್  ಚೆಸ್ ಆಟಗಾರ ಎಂದು ದಾಖಲಿಸಿಕೊಂಡಿದ್ದಾರೆ. ಇದೀಗ ಅನೀಶ್, 1555ನೇ ಫಿಡೆ ರೇಟಿಂಗ್ ಪಡೆದಿದ್ದಾರೆ. 5ನೇ ವಯಸ್ಸಿನ ತೇಜಸ್ ತಿವಾರಿ ಈ ಹಿಂದಿನ ಅತಿ ಕಿರಿಯ ರೇಟೆಡ್ ಆಟಗಾರ ಎನಿಸಿಕೊಂಡಿದ್ದರು.…..ಮುಂದೆ ಓದಿ….

ಜನವರಿ 26, 2021 ರಂದು ಜನಿಸಿದ ಅನೀಶ್ ಸರ್ಕಾರ್ ಅವರು ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್ ಆಟಕ್ಕೆ ಪ್ರವೇಶ ಪಡೆದಿದ್ದರು. ಇಬ್ಬರು ರೇಟೆಡ್ ಆಟಗಾರರನ್ನು ಸೋಲಿಸುವ ಮೂಲಕ, ಅವರು 8 ರಲ್ಲಿ 5.5 ಅಂಕಗಳನ್ನು ಗಳಿಸಿ 24 ನೇ ಸ್ಥಾನ ಪಡೆದರು. ಪ್ರದರ್ಶನ ಪಂದ್ಯದಲ್ಲಿ, ಅವರು ಭಾರತದ ನಂ. 1 ಮತ್ತು ವಿಶ್ವದ ನಂ. 4 ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸ್ ವಿರುದ್ಧ ಆಡುವ ಅವಕಾಶವನ್ನು ಕೂಡಾ ಪಡೆದರು. ಒಂದು ವಾರದ ನಂತರ, ಅನೀಶ್ ಸರ್ಕಾರ್ ಅವರು ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-13 ಓಪನ್‌ನಲ್ಲಿ ಸ್ಪರ್ಧಿಸಿದರು, ಈ ಪಂದ್ಯಾವಳಿಯಲ್ಲಿ ಅವರು ಐದು ರೇಟಿಂಗ್ ಆಟಗಾರರನ್ನು ಎದುರಿಸಿದರು. ಅಂತಿಮವಾಗಿ ಅವರಿಗೆ ಆರಂಭಿಕ ಫಿಡೇ ರೇಟಿಂಗ್ 1555 ಗಳಿಸಿತು. ಗುರುವಾರ ಈ ರೇಟಿಂಗ್‌ಗಳು ಅಪ್ಡೇಟ್‌ ಆಗಿದೆ.

ಅನೀಶ್‌ ಸರ್ಕಾರ ಅವರ ತಾಯಿ ರೇಷ್ಮಾ ಪಿಟಿಐ ಜೊತೆ ಮಾತನಾಡುತ್ತಾ, ನಮಗೆ ಚದುರಂಗದಲ್ಲಿ ಅಷ್ಟೊಂದು ಜ್ಞಾನ ಇಲ್ಲ. ನಾವು ಪೆಪ್ಪಾ ಪಿಗ್‌ ಕಾರ್ಟೂನ್‌ ಹಾಗೂ ಯೂಟ್ಯೂಬ್‌  ಚಾನೆಲ್‌ಗಳನ್ನು ಪರಿಚಯಿಸಿದ್ದೆವು. ಆದರೆ ಅನೀಶ್‌ ಚೆಸ್‌ ವಿಡಿಯೋಗಳನ್ನು ನೋಡುವುದು ಗಮನಿಸಿ ತರಬೇತಿಗೆ ಕಳುಹಿಸಿದೆವು ಎನ್ನುತ್ತಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

16 minutes ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

31 minutes ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

1 day ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago