ಪುಸ್ತಕ ಪರಿಚಯ | ಬಂದಿದೆ “ಅನ್ನದ ಮರ” | ಇದು ಹಲಸಿನ ಪಾಸಿಟಿವ್‌ ಬೆಳವಣಿಗೆಗಳ ಬುತ್ತಿ…! |

December 28, 2021
9:30 AM

ಹಲಸು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಹಲಸು ಕೂಡಾ ಇಂದು ಕೃಷಿಕರಿಗೆ ಆದಾಯ ತರಬಲ್ಲ ಹಣ್ಣಾಗಿ ಪರಿವರ್ತನೆಯಾಗುತ್ತಿದೆ. ಆದರೆ ಪರಿಶ್ರಮ ಹಾಗೂ ಹೊಸ ಪ್ರಯತ್ನಗಳು ಬೇಕಾಗಿದೆ. ಇಂತಹ ಹೊಸ ಪ್ರಯತ್ನಗಳ ಹಾಗೂ ಹಲಸಿನ ಪಾಸಿಟಿವ್‌ ಬೆಳವಣಿಗೆಗಳ ಪುಸ್ತಕವೊಂದು ತಯಾರಾಗಿದೆ. ಅದು “ಅನ್ನದ ಮರ”

Advertisement
Advertisement

ಕೃಷಿ ಪತ್ರಕರ್ತ, ನಾಡಿನ ಹೆಸರಾಂತ ಕೃಷಿಪರ ಮಾಧ್ಯಮ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಅವರು ಬರೆದಿರುವ “ಅನ್ನದ ಮರ”  ಹಲಸು ಈಗ ಜಗದಗಲ ಎಂಬ ಟ್ಯಾಗ್‌ ಲೈನ್‌ ಮೂಲಕ ಬಂದಿರುವ ಈ ಪುಸ್ತಕ ಕೃಷಿಕರಿಗೆ ಉಪಯುಕ್ತವಾಗಿದೆ. ಕೃಷಿಯಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಅರಿಯುವ ಮಂದಿಗೆ  ಹಲಸಿನ ಸಾಧ್ಯತೆ ಹಾಗೂ ಆವಿಷ್ಕಾರಗಳ ಬಗ್ಗೆ ತಿಳಿಯಬಹುದಾಗಿದೆ.

ಪುಸ್ತಕದ ಒಳಪುಟಗಳಲ್ಲಿ…… ಹಲಸಿಗೊಬ್ಬರೇ ರಾಯಭಾರಿ…. ದೇವರ ನಾಡಲ್ಲಿ ಹಲಸಿಗೆ ರಾಜಕಿರೀಟ…. ದೇಶದಲ್ಲೆ ಪ್ರಥಮ ಚಕ್ಕವಂಡಿ… ಅಸೀಸ್ ಯುವಕನನ್ನು ಸೆಳೆದ ಹಲಸು… ಹಲಸಿನ ಸಸ್ಯಮಾಂಸ…. ಆರಾಧನೆಗೆ ಹಲಸಿನ ಥಳಕು… ಚೇಳೂರು ಹಲಸು ಸಂತೆ…‌ಹಲಸು-ಹುಮ್ಮಸ್ಸು… ಉಪ್ಪುಸೊಳೆ ಉದ್ಯಮ… ಹಲಸಿನ ಬೀಜದ ಜಾಫಿ.. ಹಲಸು ಕೃಷಿಕರಾದ ವರ್ಮುಡಿ ಮತ್ತು ಗ್ಯಾಬ್ರಿಯಲ್ ಅವರ ಅನುಭವ.. ಹಲಸಿಗೆ ಕಣ್ಣ ಕಸಿ.. ದೇಶದಲ್ಲೇ ಮೊದಲು ಮಲ್ಯರ ಹಲಸಿನಂಗಡಿ… ಜಾಬ್ ವರ್ಕ್ ಹಲ್ವ ತಯಾರಿ… ಹಹ ಐಸ್ ಕ್ರೀಮ್.. ಹ ಹ ಸಾಟ್.. ಹಲಸಿನ ಬೀಜದ ಹುಡೀ….. ಹೀಗೆ ಅನ್ಯಾನ್ಯ ವೈವಿಧ್ಯಗಳು ಕಂಡಿವೆ.

ಪುಸ್ತಕ ಅಗತ್ಯವಾಗಿ ಖರೀದಿ ಮಾಡಬಹುದಾಗಿದೆ. ಆಸಕ್ತರು ನಾ ಕಾರಂತ ಪೆರಾಜೆ ಅವರನ್ನು 9448625794 ಸಂಖ್ಯೆಯನ್ನು ಸಂಪರ್ಕ ಮಾಡಬಹುದಾಗಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
May 30, 2025
8:31 AM
by: The Rural Mirror ಸುದ್ದಿಜಾಲ
ಈ 3 ಗಣೇಶ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ…?
May 30, 2025
7:59 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ
May 29, 2025
2:42 PM
by: ಸಾಯಿಶೇಖರ್ ಕರಿಕಳ
ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ
May 29, 2025
7:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group