ಸುದ್ದಿಗಳು

ಪುಸ್ತಕ ಪರಿಚಯ | ಬಂದಿದೆ “ಅನ್ನದ ಮರ” | ಇದು ಹಲಸಿನ ಪಾಸಿಟಿವ್‌ ಬೆಳವಣಿಗೆಗಳ ಬುತ್ತಿ…! |

Share

ಹಲಸು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಹಲಸು ಕೂಡಾ ಇಂದು ಕೃಷಿಕರಿಗೆ ಆದಾಯ ತರಬಲ್ಲ ಹಣ್ಣಾಗಿ ಪರಿವರ್ತನೆಯಾಗುತ್ತಿದೆ. ಆದರೆ ಪರಿಶ್ರಮ ಹಾಗೂ ಹೊಸ ಪ್ರಯತ್ನಗಳು ಬೇಕಾಗಿದೆ. ಇಂತಹ ಹೊಸ ಪ್ರಯತ್ನಗಳ ಹಾಗೂ ಹಲಸಿನ ಪಾಸಿಟಿವ್‌ ಬೆಳವಣಿಗೆಗಳ ಪುಸ್ತಕವೊಂದು ತಯಾರಾಗಿದೆ. ಅದು “ಅನ್ನದ ಮರ”

Advertisement

ಕೃಷಿ ಪತ್ರಕರ್ತ, ನಾಡಿನ ಹೆಸರಾಂತ ಕೃಷಿಪರ ಮಾಧ್ಯಮ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಅವರು ಬರೆದಿರುವ “ಅನ್ನದ ಮರ”  ಹಲಸು ಈಗ ಜಗದಗಲ ಎಂಬ ಟ್ಯಾಗ್‌ ಲೈನ್‌ ಮೂಲಕ ಬಂದಿರುವ ಈ ಪುಸ್ತಕ ಕೃಷಿಕರಿಗೆ ಉಪಯುಕ್ತವಾಗಿದೆ. ಕೃಷಿಯಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಅರಿಯುವ ಮಂದಿಗೆ  ಹಲಸಿನ ಸಾಧ್ಯತೆ ಹಾಗೂ ಆವಿಷ್ಕಾರಗಳ ಬಗ್ಗೆ ತಿಳಿಯಬಹುದಾಗಿದೆ.

ಪುಸ್ತಕದ ಒಳಪುಟಗಳಲ್ಲಿ…… ಹಲಸಿಗೊಬ್ಬರೇ ರಾಯಭಾರಿ…. ದೇವರ ನಾಡಲ್ಲಿ ಹಲಸಿಗೆ ರಾಜಕಿರೀಟ…. ದೇಶದಲ್ಲೆ ಪ್ರಥಮ ಚಕ್ಕವಂಡಿ… ಅಸೀಸ್ ಯುವಕನನ್ನು ಸೆಳೆದ ಹಲಸು… ಹಲಸಿನ ಸಸ್ಯಮಾಂಸ…. ಆರಾಧನೆಗೆ ಹಲಸಿನ ಥಳಕು… ಚೇಳೂರು ಹಲಸು ಸಂತೆ…‌ಹಲಸು-ಹುಮ್ಮಸ್ಸು… ಉಪ್ಪುಸೊಳೆ ಉದ್ಯಮ… ಹಲಸಿನ ಬೀಜದ ಜಾಫಿ.. ಹಲಸು ಕೃಷಿಕರಾದ ವರ್ಮುಡಿ ಮತ್ತು ಗ್ಯಾಬ್ರಿಯಲ್ ಅವರ ಅನುಭವ.. ಹಲಸಿಗೆ ಕಣ್ಣ ಕಸಿ.. ದೇಶದಲ್ಲೇ ಮೊದಲು ಮಲ್ಯರ ಹಲಸಿನಂಗಡಿ… ಜಾಬ್ ವರ್ಕ್ ಹಲ್ವ ತಯಾರಿ… ಹಹ ಐಸ್ ಕ್ರೀಮ್.. ಹ ಹ ಸಾಟ್.. ಹಲಸಿನ ಬೀಜದ ಹುಡೀ….. ಹೀಗೆ ಅನ್ಯಾನ್ಯ ವೈವಿಧ್ಯಗಳು ಕಂಡಿವೆ.

ಪುಸ್ತಕ ಅಗತ್ಯವಾಗಿ ಖರೀದಿ ಮಾಡಬಹುದಾಗಿದೆ. ಆಸಕ್ತರು ನಾ ಕಾರಂತ ಪೆರಾಜೆ ಅವರನ್ನು 9448625794 ಸಂಖ್ಯೆಯನ್ನು ಸಂಪರ್ಕ ಮಾಡಬಹುದಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ

ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…

12 hours ago

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…

21 hours ago

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…

21 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

2 days ago