ಭೋಜನವೆಂದರೆ ಅದು ಕೇವಲ ಹಸಿವು ನೀಗಿಸುವ ಕ್ರಿಯೆಯಲ್ಲ, ಅದೊಂದು ಅದ್ವೈತ ಸಾಧನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಗುರುವಾರ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದ ಅವರು, ನಾವು ಸೇವಿಸುವ ಆಹಾರ ಕಾಲಕ್ರಮೇಣ ನಮ್ಮ ರಕ್ತ, ಮೇಧಸ್ಸು, ಚರ್ಮ ಸೇರಿದಂತೆ ದೇಹದ ಭಾಗವಾಗುತ್ತದೆ. ಆರಂಭದಲ್ಲಿ ಆಹಾರ ಮತ್ತು ನಾವು ಪ್ರತ್ಯೇಕವಾಗಿದ್ದರೂ, ಬಳಿಕ ಅದು ನಮ್ಮಲ್ಲೇ ಒಂದಾಗಿ ನಾವೇ ಆಗುತ್ತದೆ. ಇದೇ ರೀತಿ ಜೀವನದ ಅಂತಿಮ ಗುರಿಯೂ ಎಲ್ಲಾ ಕರ್ಮಗಳನ್ನು ತೊರೆದು ಪರಮಾತ್ಮನಲ್ಲಿ ಒಂದಾಗುವುದಾಗಿದೆ ಎಂದು ತಿಳಿಸಿದರು.
ಭೋಜನವು ಜೀವ-ಜೀವ ಅದ್ವೈತಕ್ಕೆ ದಾರಿ ಮಾಡಿಕೊಡುತ್ತದೆ. ಜೀವ-ದೇವ ಅದ್ವೈತದತ್ತ ಸಾಗುವ ಮೊದಲ ಹಂತವೇ ಭೋಜನವಾಗಿದ್ದು, ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗಿ ಒಂದಾಗದಿದ್ದರೆ ಅದೇ ಅನಾರೋಗ್ಯ ಮತ್ತು ಮರಣಕ್ಕೂ ಕಾರಣವಾಗಬಹುದು. “ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಇಲ್ಲದಿದ್ದರೆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ” ಎಂಬ ಆಯುರ್ವೇದದ ತತ್ವವನ್ನು ಉಲ್ಲೇಖಿಸಿದ ಶ್ರೀಗಳು, ಜೀರ್ಣವಾಗದೆ ಉಳಿಯುವ ಆಹಾರವೇ ಅನೇಕ ರೋಗಗಳ ಮೂಲ ಎಂದು ಹೇಳಿದರು.
ಅನ್ನವನ್ನು ‘ಅನ್ನಂ ಬ್ರಹ್ಮ’ ಎಂಬ ಭಾವನೆಯೊಂದಿಗೆ ಸೇವಿಸಿದಾಗ ಅದು ಕೇವಲ ದೈಹಿಕ ಪೋಷಣೆಯಾಗದೆ, ಆತ್ಮೋನ್ನತಿಯ ಸಾಧನವಾಗಿ ಮುಕ್ತಿಯ ಮಾರ್ಗವನ್ನು ತೋರಿಸುತ್ತದೆ. ಜೀವವುಳ್ಳ ವಸ್ತುವೇ ಜೀವಿಗೆ ಆಹಾರವಾಗಬಲ್ಲದು. ಜಡ ವಸ್ತುಗಳು ಆಹಾರವಾಗಲು ಸಾಧ್ಯವಿಲ್ಲ. ಸೃಷ್ಟಿಯ ನಿಯಮದಂತೆ ಒಂದಾಗುವ ವಸ್ತುಗಳಲ್ಲಿ ಸಮಾನತೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ದೇಹವೆಂಬ ಯಂತ್ರ ಬೆಳಗಿನ ವೇಳೆಯಲ್ಲಿ ಸಂಪೂರ್ಣ ಶಕ್ತಿಯಿಂದ ಕಾರ್ಯನಿರ್ವಹಿಸಿದರೂ, ಸಂಜೆ ಮತ್ತು ರಾತ್ರಿ ಹೊತ್ತಿಗೆ ವಿಶ್ರಾಂತಿ ಅಗತ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾತ್ರಿ ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ದೇಹದ ಸಹಜ ಚಕ್ರದ ವಿರುದ್ಧದ ಯುದ್ಧವೇ ಆಗಿದೆ ಎಂದು ಶ್ರೀಗಳು ಹೇಳಿದರು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Jagadguru Shankaracharya Sri Sri Raghaveshwara Bharathi Mahaswamiji said that eating is an act of Advaita, where food ultimately becomes one with the body. Speaking at the ‘Annabrahma Chaturmasya’ discourse in Gokarna, he stressed that food consumed with the feeling of “Annam Brahma” becomes a path to spiritual liberation, while unhealthy food leads to disease and affects future generations.
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…