Advertisement
ಸುದ್ದಿಗಳು

#Electricity | ಒಂದೇ ದಿನಕ್ಕೆ ಬೇರೆ ಬೇರೆ ವಿದ್ಯುತ್ ದರ ಅನ್ವಯ | ಕೇಂದ್ರದಿಂದ ಹೊಸ ಮಾದರಿ ಕರೆಂಟ್ ಬಿಲ್ ವ್ಯವಸ್ಥೆ

Share

ಬೇಸಿಗೆ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ,  ಕರೆಂಟ್ ಬಿಲ್ #ElectricityBill ದರ ಏರಿಕೆ ಆಗಾಗ..!, ರಾಜ್ಯದಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ವ್ಯವಸ್ಥೆ ಜಾರಿಗೆ ಬರುವುದಾಗಿ ಹೇಳಿದರು ಅದರಿಂದ ಯಾರಿಗೆ..? ಎಷ್ಟು..? ಪ್ರಯೋಜನ ಇದೆಯೋ ಇಲ್ಲವೋ..?. ಆದರೆ ವಿದ್ಯುತ್‍ ದರವಂತೂ ಏರಿಕೆ ಕಂಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಕೇಂದ್ರ ಸರ್ಕಾರ 2020ರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಕ್ಕೆ ತಿದ್ದುಪಡಿ ತಂದಿದ್ದು ಅದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ವಿದ್ಯುತ್ ಬಳಕೆ ವಿಚಾರದಲ್ಲಿ ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ದರ ವಿಧಿಸುವಂತೆ ನಿಯಮ ಬದಲಾಯಿಸಲಾಗಿದೆ.

ವಿದ್ಯುತ್ ಲೋಡಿಂಗ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹೊಸ ಉಪಾಯ ಹುಡುಕಿದೆ. ಅದರಂತೆ ದಿನದಲ್ಲಿ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ಅನ್ವಯ ಮಾಡುವಂತ ವ್ಯವಸ್ಥೆಯನ್ನು ಕೇಂದ್ರ ಜಾರಿ ಮಾಡುತ್ತಿದೆ. ಇದರಲ್ಲಿ ನೀವು ಬೆಳಗಿನ ನಿರ್ದಿಷ್ಟ ಅವಧಿಯಲ್ಲಿ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಬೆಳಗ್ಗೆ ಅಥವಾ ಸಂಜೆ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜೂನ್ 23, ಶುಕ್ರವಾರದಂದು ವಿದ್ಯುತ್ ಗ್ರಾಹಕರ ಹಕ್ಕು ನಿಯಮ 2020ಕ್ಕೆ ತಿದ್ದುಪಡಿಗೆ ಅನುಮೋದಿಸಿದೆ. ಇದರಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯೂ ಒಳಗೊಂಡಿದೆ.

ಸೋಲಾರ್ ಅವರ್ ಅಥವಾ ಸೌರ ಗಂಟೆ ಎಂದು ಕರೆಯಲಾಗುವ ಅವಧಿಯಲ್ಲಿ ವಿದ್ಯುತ್ ದರ ಶೇ. 10ರಿಂದ 20ರಷ್ಟು ಕಡಿಮೆ ಇರುತ್ತದೆ. ಪೀಕ್ ಅವರ್ ಅಥವಾ ಉಚ್ಛ್ರಾಯ ಅವಧಿಯಲ್ಲಿ ಶೇ. 10ರಿಂದ ಶೇ. 20ರಷ್ಟು ಹೆಚ್ಚು ದರ ಇರಲಿದೆ. ಈ ಅವಧಿಯನ್ನು ರಾಜ್ಯ ವಿದ್ಯುತ್ ಪ್ರಾಧಿಕಾರಗಳು ನಿರ್ಧರಿಸುತ್ತವೆ.

ಹೊಸ ಮಾದರಿಯ ವಿದ್ಯುತ್ ದರ ವ್ಯವಸ್ಥೆಯು ಎಲ್ಲೆಡೆ ಸ್ಮಾರ್ಟ್​ಮೀಟರ್ ಅಳವಡಿಕೆ ಪೂರ್ಣಗೊಂಡ ಬಳಿಕ ಅನ್ವಯ ಆಗಬಹುದು. ಸರ್ಕಾರ 2024 ಏಪ್ರಿಲ್ 1ರಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಗುರಿ ಹೊಂದಿದೆ. ಮೊದಲಿಗೆ 10 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇರುವ ವಾಣಿಜ್ಯ ಮತ್ತು ಔದ್ಯಮಿಕ ಗ್ರಾಹಕರಿಗೆ ಇದು ಅನ್ವಯ ಆಗಲಿದೆ. ಒಂದು ವರ್ಷದ ಬಳಿಕ, 2025 ಏಪ್ರಿಲ್ 1ರಿಂದ ಕೃಷಿ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಇದು ಜಾರಿಯಾಗುವ ನಿರೀಕ್ಷೆ ಇದೆ.

ಸೌರ ಗಂಟೆಯಲ್ಲಿ ಯಾಕೆ ವಿದ್ಯುತ್ ದರ ಕಡಿಮೆ? : ಪೀಕ್ ಅವಧಿ, ಸೌರ ಅವಧಿ ಮತ್ತು ಸಹಜ ಅವಧಿ ಹೀಗೆ ವಿದ್ಯುತ್ ದರಗಳನ್ನು ವಿಭಾಗಿಸುವುದರಿಂದ ಗ್ರಾಹಕರು ವಿದ್ಯುತ್ ಬಳಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಬಹುದು. ಇದರಿಂದ ಗ್ರಾಹಕರಿಗೂ ಲಾಭ, ವಿದ್ಯುತ್ ಸರಬರಾಜು ವ್ಯವಸ್ಥೆಗೂ ಹೊರೆ ತಗ್ಗುತ್ತದೆ ಎಂಬುದು ಸರ್ಕಾರದ ಎಣಿಕೆ.

ಸೌರ ಗಂಟೆಗಳೆಂದರೆ ಅದು ಸೂರ್ಯನ ಬಿಸಿಲು ಇರುವ ಕಾಲಾವಧಿ. ಈ ಸಂದರ್ಭದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿರುತ್ತದೆ. ಇದರ ಬೆಲೆ ಕಡಿಮೆ ಇರುವುದರಿಂದ ವಿದ್ಯುತ್ ಬಳಕೆದಾರರಿಗೆ ಈ ಅವಧಿಯಲ್ಲಿನ ಬಳಕೆಗೆ ದರ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ. ಇನ್ನು ದಿನದ ಬೇರೆ ಕಾಲಾವಧಿಯಲ್ಲಿ ಜಲವಿದ್ಯುತ್ ಇತ್ಯಾದಿ ಮೂಲದಿಂದ ತಯಾರಾಗುವ ವಿದ್ಯುತ್ ಅನ್ನು ಬಳಸಲಾಗುತ್ತದೆ. ಇವು ಹೆಚ್ಚಿನ ಬೆಲೆ ಹೊಂದಿರುವುದರಿಂದ ಇದರ ಬಳಕೆಗೂ ಹೆಚ್ಚಿನ ದರ ಅನ್ವಯ ಮಾಡುವುದು ಸರ್ಕಾರದ ತಂತ್ರ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

4 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

5 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

6 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

12 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

17 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago