ಸುಳ್ಯ ತಾಲೂಕಿನ ವಿವಿದೆಡೆ ಕೃಷಿಗೆ ಕಾಡಾನೆ ದಾಳಿ ತೀವ್ರಗೊಂಡಿದೆ. ಅಪಾರ ಪ್ರಮಾಣದ ಕೃಷಿ ನಾಶವಾಗುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಇದೀಗ ಅರಂತೋಡು ಪ್ರದೇಶದಲ್ಲೂ ಕಾಡಾನೆ ಹಾವಳಿ ಹೆಚ್ಚಾಗಿದ್ದು ಅರಂತೋಡು ಗ್ರಾಮದ ದೇರಾಜೆ ಆದರ್ಶ ಎಂಬುವವರ ತೋಟದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ನಷ್ಟ ಉಂಟಾಗಿದೆ.
ಸುಮಾರು ಒಂದು ತಿಂಗಳಿನಿಂದ ದೇರಾಜೆ ಅಸುಪಾಸಿನಲ್ಲಿ ಕಾಡಾನೆ ಕಂಡು ಬಂದಿದ್ದು. ಸಾಕಷ್ಟು ಕೃಷಿ ಹಾನಿ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃಷಿ ಹಾನಿ ಸಂಭವಿಸಬಹುದಾಗಿದೆ ಎಂದು ಕೃಷಿಕರು ಆತಂಕ ತೋಡಿದ್ದಾರೆ. ಸಂಬಧಪಟ್ಟ ಇಲಾಖೆ ಗಮನ ವಹಿಸಲು ಕೃಷಿಕರು ಒತ್ತಾಯಿಸಿದ್ದಾರೆ.
ಊರಿನ ಹೆಚ್ಚಿನ ಜನರು ಮತ್ತು ಶಾಲಾ ಮಕ್ಕಳು ಕಾಲು ದಾರಿಯನ್ನೇ ಅವಲಂಬಿತರಾಗಿರುವುದರಿಂದ ಕಾಡನೆ ದಾಳಿ ನಡೆಸಬಹುದು ಎಂದು ಭಯಬೀತಗೋಡಿದ್ದಾರೆ. ಆದುದರಿಂದ ಸೂಕ್ತ ಕ್ರಮ ಆಗಬೇಕು ಎಂದು ಊರಿನ ಜನರು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…