Advertisement
Opinion

ಅರ್ಕ ಮೈಕ್ರೋಬಿಯಲ್ ಕನ್ಸೇರ್ಷಿಯ.. ಅಂದರೆ AMC ಬಳಕೆ ಹೇಗೆ..? : ಏಎಂಸಿ ಎಂದರೆ ಮಣ್ಣಿಗೆ ಬೇಕಾಗುವ ಸೂಕ್ಷ್ಮಾಣು ಜೀವಿಗಳು.

Share

ಏಎಂಸಿ(AMC) ದ್ರಾವಣವನ್ನು ನೀರಿನೊಂದಿಗೆ ಕದಡಿ ಭೂಮಿಗೆ(Land) ಹಾಕಿ ಎಂದು ಕೃಷಿ ತಜ್ಞರು(Agriculture expert) ಸಲಹೆ ನೀಡುತ್ತಾರೆ.. ಈಗ ಮಾರುಕಟ್ಟೆಯಲ್ಲಿ(Market) ಹಲವಾರು ಕಂಪನಿಗಳು(Company) ಈ ಏಎಂಸಿಯನ್ನು ಚಂದ ಚಂದದ ಕಂಟೇನರ್‌ನಲ್ಲಿ ರೈತರಿಗೆ(Farmer) ಮಾರಿ ಹಣ(Money) ಮಾಡಿಕೊಳ್ಳುತ್ತಿದೆ. ಆದರೆ ಈ ಮೈಕ್ರೋಬಿಯಲ್(Microbial) ಸೂಕ್ಷ್ಮಾಣು ಜೀವಿಗಳು(Microorganisms), ಗೊಬ್ಬರ(Manure) ಅಲ್ಲ.. ಅವು ಕಣ್ಣಿಗೆ ಕಾಣದ ಅಸಂಖ್ಯಾತ ಕೋಟ್ಯಂತರ ಜೀವಿಗಳು.

ಇದೊಂಥರ ಮೀನುಗಳು ಇದ್ದಂತೆ..!! ಮೀನುಗಳು ಕಣ್ಣಿಗೆ ಕಾಣಿಸುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಕಣ್ಣಿಗೆ ಕಾಣಿಸದು. ಮೀನುಗಳನ್ನು ನಿಮ್ಮ ಕೃಷಿ ಜಮೀನಿಗೆ ತಂದು ಸುರಿದರೆ ಅವು ಬದುಕುತ್ತವೆಯೇ..? ಹಾಗೆಯೇ ಸೂಕ್ಷ್ಮಾಣು ಜೀವಿಗಳಿಗೂ ನಿಮ್ಮ ಕೃಷಿ ಭೂಮಿಯಲ್ಲಿ ಬಾಳಲು ಅನುಕೂಲ ವಾದ, ಜಾಗ ವಾತಾವರಣ ಆಹಾರ ಎಲ್ಲವೂ ಇರಬೇಕು.. ಈ ಸೂಕ್ಷ್ಮಾಣು ಜೀವಿಗಳು ಆಯಸ್ಸು ಕೆಲವೇ ಸೆಕೆಂಡ್ ಗಳು.. ಡಾಕ್ಟರು ಸಾಯ್ಲಿ ನೋ ಇನ್ಯಾವುದೋ ಕಂಪನಿಯ ದ್ರಾವಣ ರೂಪದ ಏಎಂಸಿ ಯೋ.. ಅಮ್ಮತವೋ ಅನ್ನಪೂರ್ಣಕ್ಕನೋ ಇನ್ಯಾವುದೋ ಘನ ರೂಪದ ಗೊಬ್ಬರವೋ ಏಎಂಸಿ‌ಯನ್ನ ಕಾರ್ಖಾನೆಯಿಂದ ಚೀಲದಲ್ಲಿ ತುಂಬಿ ಕಳಿಸಿ ರಿಟೀಲ್ ಏಜನ್ಸಿ ಯವನಿಗೆ ಬಂದು ಅಲ್ಲಿಂದ ನೀವು ತಂದು ನಿಮ್ಮ ತೋಟಕ್ಕೆ ಹಾಕುವ ತನಕವೂ ಸೆಕೆಂಡ್ ಗೆ ಹುಟ್ಟಿ ಸಾಯುವ ಸೂಕ್ಷ್ಮಾಣು ಜೀವಿಗಳು ಜೀವ ಇಟ್ಟುಕೊಂಡು ಇರಲು ಸಾಧ್ಯವೇ..?

ಏಎಂಸಿ ಹಾಕುವ ಕೃಷಿ ಬೆಳೆಯ ಭೂಮಿ ಸಾವಯವಯುಕ್ತವಾಗಿರಬೇಕು..
ಏಎಂಸಿ ಸೂಕ್ಷ್ಮಾಣು ಜೀವಿಗಳಿಗೆ ಸಗಣಿ ಆಹಾರವಾಗಿ ಬೇಕು. ಜೊತೆಯಲ್ಲಿ ಯಾವುದಾದರೂ ಕರಗುವ ಸಾವಯವ ಕಾಂಪೋಸ್ಟ್ ಮಾದ್ಯಮ ಬೇಕು. ಈ ಕಾಂಪೋಸ್ಟ್ ಮಾದ್ಯಮ ದಲ್ಲಿ ಈ ಸೂಕ್ಷ್ಮಾಣು ಜೀವಿಗಳು ವಾಸ ಮಾಡುತ್ತಾ ಸಗಣಿಯನ್ನು ಆಹಾರವಾಗಿ ತಿನ್ನುತ್ತಾ ತಮ್ಮ ಸಂತಾನ ವೃದ್ದಿ ಮಾಡಿಕೊಳ್ಳುತ್ತಾ ಕೃಷಿ ಭೂಮಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಮಾಡುತ್ತವೆ.. ಏಎಂಸಿ ದ್ರಾವಣವನ್ನು ಸುಮ್ಮನೆ ನೀರಿನಲ್ಲಿ ಕರಡಿ ಅಡಿಕೆ ಮರದ ಬುಡಕ್ಕೆ ಹಾಕಿದರೆ ಏಎಂಸಿ ಕದಡಿದ ಕೆಲಸ ಆಗುತ್ತದೆ, ಏಎಂಸಿ ಮಾರಿದವನಿಗೆ, ಏಎಂಸಿ ತಯಾರಿಸಿದವನಿಗೆ ಲಾಭವಾಗುತ್ತದೆ..

ಇದರ ವಸ್ತು ವಿಚಾರ ಇಷ್ಟು.. ‌‌‌ ನಾವು ನಮ್ಮ ಗೊಬ್ಬರ ತಯಾರಿಕಾ ಕೇಂದ್ರದಲ್ಲಿ ಚಾಲ್ತಿ ಮಾರುಕಟ್ಟೆಯ ಎಲ್ಲಾ ಕಂಪನಿಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಏಎಂಸಿ ದ್ರಾವಣವನ್ನೂ ಮತ್ತು ಟ್ರೈಕೋಡರ್ಮ, ಸುಡಮನೋಸ್, ಅಜಟೋಬ್ಯಾಕ್ಟರ್, ಪಿಎಸ್ ಬಿ ಮತ್ತು ಕೆಎಸ್ ಬಿ ದ್ರಾವಣವನ್ನು ಸಗಣಿ ಗೊಬ್ಬರ + ಕೋಕೋಪಿಥ್ ನೊಂದಿಗೆ ಸಮ್ಮಿಳಿತ ಗೊಳಿಸಿ ಫ್ರೆಷ್ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತೇವೆ.
ನಾವು ದ್ರವ ಮತ್ತು ಘನ ರೂಪದ ಗೊಬ್ಬರವನ್ನು ತಯಾರಿಸಿ ದಾಸ್ತಾನು ಮಾಡಿಡುವ ಕ್ರಮ ಇಟ್ಟುಕೊಂಡಿಲ್ಲ. ರೈತ ಗ್ರಾಹಕ ಬೇಡಿಕೆಗನುಗುಣವಾಗಿ‌ ತಯಾರಿಸಿ ಕೊಡುತ್ತೇವೆ. ದಯವಿಟ್ಟು ರೈತೋದ್ಯಮವನ್ನ ಪ್ರೋತ್ಸಾಹಿಸಿ ಎಂದು ಕೋರುತ್ತಿದ್ದೇನೆ..

ಬರಹ – ಪ್ರಬಂಧ ಅಂಬುತೀರ್ಥ
9481801869

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

8 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

13 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

24 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

1 day ago