ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ 1971 ರಲ್ಲಿ ಸರಾಸರಿ ಕ್ವಿಂಟಾಲ್ ಒಂದರ ರೂಪಾಯಿ 664 ಇತ್ತು.ಇದು 1981 ರಲ್ಲಿ ರೂಪಾಯಿ 1384 ಆಗಿ 1989 ರಲ್ಲಿರೂಪಾಯಿ 2080 ಆಯಿತು.ಆಗ ಅಡಿಕೆ ಹೆಚ್ಚಾಗಿ ಬೀಡಾದ ತಯಾರಿಯಲ್ಲಿ ಬಳಕೆ ಆಗುತ್ತಿತ್ತು. ಇದೇ ಸಂದರ್ಭದಲ್ಲಿ ಗುಟ್ಕಾ ಮಾರುಕಟ್ಟೆ ವಿಸ್ತರಿಸಲಾರಂಬಿಸಿತು.ಪರಿಣಾಮವಾಗಿ ಕೆಂಪು ಅಡಿಕೆಗೆ ಬೇಡಿಕೆ ಹೆಚ್ಚಾಗಿ ಅಲ್ಲಿ ಉತ್ಪಾಡಿಸುತ್ತಿದ್ದ ಚಾಲಿ ಪ್ರಮಾಣ ಕಡಿಮೆ ಆಗಿ ಕರಾವಳಿ ಬಾಗದ ಚಾಲಿಗೆ ಬೇಡಿಕೆ ಹೆಚ್ಚಾಗಿ ಧಾರಣೆಯ ಹೆಚ್ಚಳಕ್ಕೆ ದಾರಿ ಆಗಿ 1990 ರಲ್ಲಿ ಅದು ಕ್ವಿಂಟಾಲ್ ಒಂದರ ರೂಪಾಯಿ 4024 ಆಗಿ ಮುಂದೆ ಅದು ತಾತ್ಕಾಲಿಕವಾಗಿ ಆಗೊಮ್ಮೆ ಈಗೊಮ್ಮೆ ಇಳಿಕೆ ಕಂಡರೂ ಸರಾಸರಿ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂದಿದೆ. ಇದೇ ಪ್ರವೃತ್ತಿ ಕೆಂಪು ಅಡಿಕೆಯಲ್ಲೂ ಕಂಡು ಬರುತ್ತಿದೆ.…..ಮುಂದೆ ಓದಿ….
2001 ರ ಬಳಿಕ ಈ ಸರಾಸರಿ ಧಾರಣೆ ಏರುತ್ತಾ ಹೋಯಿತು. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಇದರ ವಿಸ್ತೀರ್ಣ ಮತ್ತು ಉತ್ಪಾದನೆಯೂ ಹೆಚ್ಚಾಗಿ ಹೋಯಿತು. ಉದಾಹರಣೆಗೆ 1970-71 ಅಲ್ಲಿ ವಿಸ್ತೀರ್ಣ ಸುಮಾರು 1,67,300 ಹೆಕ್ಟೇರ್ ಆಗಿದ್ದರೆ ಈಗ ಇದು ಸುಮಾರು ಎಂಟು ಲಕ್ಷ ಹೆಕ್ಟೇರ್ ದಾಟಿದೆ. ಉತ್ಪಾದನೆ ದೃಷ್ಟಿಯಿಂದ ನೋಡುವುದಾದರೆ ಇದೇ ಅವಧಿಯಲ್ಲಿ ಅದು 1,41,000 ಟನ್ ಇದ್ದುದು ಈಗ ಸುಮಾರು ಹದಿನಾರು ಲಕ್ಷ ಟನ್ ಆಗಿದೆ.
ಇನ್ನು ಕರ್ನಾಟಕದಲ್ಲಿ ಅಡಿಕೆ ವಿಸ್ತೀರ್ಣ ವೇಗವಾಗಿ ಹೆಚ್ಚುತ್ತಿದ್ದು ಇದೀಗ 28 ಜಿಲ್ಲೆಗಳಿಗೆ ವ್ಯಾಪಿಸಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಇದರ ವ್ಯಾಪ್ತಿ ಹೆಚ್ಚಾಗುತ್ತಿದೆ.ಕೇರಳದ 14 ಜಿಲ್ಲೆಗಳು ಮತ್ತು ತಮಿಳ್ನಾಡಿನ 27 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ವ್ಯಾಪಿಸಿದ್ದು, ಇದೇ ಪ್ರವೃತ್ತಿ ಕನಿಷ್ಟ ಎಂಟು ರಾಜ್ಯಗಳಲ್ಲಿ ಕಂಡು ಬರುತ್ತಿದೆ.
ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣ 1985 ಇಂದ ಅಡಿಕೆ ಮಾರುಕಟ್ಟೆ ಪ್ರವೇಶಿಸಿ ಬಳಿಕ ಅಗಾದವಾಗಿ ಬೆಳವಣಿಗೆ ತೋರಿಸುತ್ತಿರುವ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳೂ. ಇದರಿಂದಾಗಿಯೇ ಇವನ್ನು ಇಂದು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಎನ್ನುವುದು. ಈ ಕೋಳಿಗಳಿಂದಾಗಿ ಅಡಿಕೆ ಕ್ಷೇತ್ರಕ್ಕೆ ಹಲವು ಲಾಭಗಳು ಆಗಿವೆ.ಇದರೊಂದಿಗೆ ನಷ್ಟಗಳು ಆಗುತ್ತಲಿದೆ.ಹಲವು ವರವಾಗಿದ್ದಾರೆ ಇನ್ನು ಕೆಲವು ಶಾಪವಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ವರಗಳು: ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳಿಂದ ಬೆಳೆಗಾರರಿಗಲ್ಲದೆ ಆರ್ಥಿಕತೆಗೆ ಕೂಡ ಹಲವು ಲಾಭಗಳಾಗಿವೆ.ಇವುಗಳೆಂದರೆ….…..ಮುಂದೆ ಓದಿ….
ಶಾಪಗಳೇನು? :
ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು ಆಗಿ ಬದಲಾಗಿರುವುದು.ಪರಿಣಾಮವಾಗಿ ವಿಷಯುಕ್ತ ಆಹಾರದ ಸೇವನೆಗೆ ದಾರಿ ಆಗಿರುವುದು. ಒಟ್ಟಾರೆಯಾಗಿ ಚಿನ್ನದ ಮೊಟ್ಟೆ ಇಡುವ ಕೋಳಿ ನಾನಾ ರೀತಿಯ ಲಾಭಗಳನ್ನು ಈ ಕ್ಷೇತ್ರಕ್ಕೆ ತಂದು ಕೊಟ್ಟಿದ್ದರೂ ಇವು ಮುಂದಿನ ದಿನಗಳಲ್ಲಿ ನಷ್ಟಕ್ಕೆ ಎಡೆ ಮಾಡಿಕೊಡಬಹುದು ಎಂಬ ಬಲವಾದ ಶಂಕೆ ಮೂಡುತ್ತಿದೆ.
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…