MIRROR FOCUS

#Arecanut | ಮಳೆಗಾಲದಲ್ಲಿ ಕಾಡುವ ಅಡಿಕೆ ಸುಳಿಕೊಳೆ ರೋಗ | ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳು ಏನು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರಾವಳಿ, ಮಲೆನಾಡು ಜನತೆಯ ಮೂಲ ಕೃಷಿ #Agriculture ಅಡಿಕೆ. ಹಾಗೆ ಮಳೆನೂ ಜಾಸ್ತಿಯೇ. ಮಳೆ ಜಾಸ್ತಿಯಾಗುತ್ತಿದ್ದಂತೆ ಅಡಿಕೆಗೆ ಕೆಲ ರೋಗಗಳು ಹತ್ತಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಮಳೆಗಾಲ ಜೋರಾಗುತ್ತಿದ್ದಂತೆ ಅಡಿಕೆಯಲ್ಲಿ ಸುಳಿಕೊಳೆ ರೋಗ ಕಾಣಿಸಿಕೊಳ್ಳಲು ಆರಂಭಗೊಳ್ಳುತ್ತದೆ. ಇದರ ಲಕ್ಷಣಗಳು ಹಾಗೂ ಇದರ ನಿರ್ವಹಣೆ ಬಗ್ಗೆ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಸಲಹೆಗಾರರಾದ ಸಂತೋಷ್ ನಿಲುಗುಳಿ ಅವರು ವಿವರವಾದ ಮಾಹಿತಿ ನೀಡಿದ್ದಾರೆ.

Advertisement

ಸುಳಿಕೊಳೆ ಅಡಿಕೆ ಬೆಳೆಯ ಒಂದು ಮಾರಕ ರೋಗ. ಈ ರೋಗವೂ ಕೂಡ ಪೈಟಾಪ್ತೋರ ಮೀಡಿ#Phytophthora medii ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿರುವ ತೋಟಗಳಲ್ಲಿ ಈ ರೋಗವು ಮುಂಗಾರು (ಜೂನ್ – ಸೆಪ್ಟೆಂಬರ್) ಮತ್ತು ಚಳಿಗಾಲದ (ಅಕ್ಟೋಬರ್ – ಫೆಬ್ರವರಿ) ತಿಂಗಳುಗಳಲ್ಲಿ ಕಂಡುಬರುತ್ತದೆ.

ಲಕ್ಷಣಗಳು

1. ಭಾಗದ ಎಳೆಗರಿ ಹಳದಿ ಬಣ್ಣಕ್ಕೆ ತಿರುಗುವುದು ರೋಗದ ಪ್ರಾರಂಭಿಕ ಲಕ್ಷಣ. ನಂತರ ಗರಿಯು ಕಂದು ಬಣ್ಣಕ್ಕೆ ತಿರುಗಿ ಸಂಪೂರ್ಣ ಸಾಯುವುದು.

2. ಈ ಹಂತದಲ್ಲಿ ರೋಗ ಪೀಡಿತ ಗರಿಯನ್ನು ಕೈಯಿಂದ ಎಳೆದಾಗ ಸುಲಭವಾಗಿ ಹೊರಕ್ಕೆ ಬರುತ್ತದೆ.

Advertisement

3. ಕಾಲಕ್ರಮೇಣ ಸೋಂಕಿನಿಂದಾಗಿ ಮರದ ಸುಳಿ ಸಂಪೂರ್ಣವಾಗಿ ಕೊಳೆತು ಸಾಯುತ್ತದೆ. ಸುಳಿಕೊಳೆ ಪೀಡಿತ ಮರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕೊಳೆತ ಭಾಗದಿಂದ ಹೊರಹೊಮ್ಮುವ ದುರ್ವಾಸನೆಯಿಂದಲೂ ಈ ರೋಗವನ್ನು ಗುರುತಿಸಬಹುದು.

4.ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಗಿಡಕ್ಕೆ ಸೂಕ್ತ ಚಿಕಿತ್ಸೆ ಮಾಡುವುದರಿಂದ ಹೊಸ ಸುಳಿ ಬರುವುದಲ್ಲದೆ ಪೀಡಿತ ಮರವನ್ನು ಉಳಿಸಿಕೊಳ್ಳಬಹುದು.

5.ಈ ರೋಗ ಗಾಳಿ ಹಾಗೂ ಕೀಟಗಳ ಮೂಲಕ ಸಹ ಹರಡುತ್ತದೆ. ರೋಗಪೀಡಿತ ಮರದ ತುದಿಯನ್ನು ಉದ್ದಕ್ಕೆ ಸೀಳಿ ಅದರಲ್ಲಿರುವ ದುರ್ವಾಸನೆಯಿಂದ ಕೂಡಿದ ರಸವನ್ನು ಹೊರ ತೆಗೆಯಬೇಕು.

ನಿರ್ವಹಣಾ ಕ್ರಮಗಳು:

1.ರೋಗಪೀಡಿತ ಮರದ ಸುಳಿಯ ಕೊಳೆತ ಅಂಗಾಂಶವನ್ನು ಒಂದು ಹರಿತವಾದ ಚಾಕುವಿನಿಂದ ತೆಗೆದು ಬೋರ್ಡೋ ಮಿಶ್ರಣದ ಪೇಸ್ಟ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ (ಬ್ಲೈಟಾಕ್ಸ್) ಪೇಸ್ಟ್ ಲೇಪಿಸುವುದು.

Advertisement

2.ಶಿಲೀಂಧ್ರನಾಶಕ ಲೇಪನ ಮಾಡಿದ ಭಾಗವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಅಡಿಕೆ ಸೋಗೆಯಿಂದ ಮುಚ್ಚುವುದರಿಂದ ಕೀಟಗಳಿಂದ ರೋಗ ಹರಡುವುದನ್ನು ತಡೆಯಬಹುದಲ್ಲದೆ ಮಳೆಯಿಂದ ಶಿಲೀಂಧ್ರನಾಶಕ ಸೋರಿ ಹೋಗುವುದನ್ನು ತಡೆಯಬಹುದು.

3.ಕ್ರಮವರಿತು ಪ್ರತಿ ವರ್ಷ ಶೇಕಡ ೧ ರ ಬೋರ್ಡೋ ದ್ರಾವಣ ಅಥವಾ ಶೇಕಡ ೦.೩ ರ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ಸುಳಿ ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪರಣೆ ಮಾಡುವುದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.

4.ಪರ್ಯಾಯವಾಗಿ ಅಂತರ್‌ವ್ಯಾಪಿ ಶಿಲೀಂಧ್ರನಾಶಕ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ ಶೇಕಡ ೦.೩ ರಂತೆ ಬಳಸಿ ರೋಗ ಹತೋಟಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

ಸಂತೋಷ್ ನಿಲುಗುಳಿ, ವಿಜ್ಞಾನಿಗಳು ಹಾಗೂ ತೋಟಗಾರಿಕಾ ಸಲಹೆಗಾರರು,  ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ, 9916359007

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ

ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ…

10 minutes ago

ಕೋಲಾರದಲ್ಲಿ ಬಾಕಿ ಇರುವ 3610 ಜಮೀನಿನ ಸರ್ವೆ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣ

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗುತ್ತಿದೆ.…

13 minutes ago

ಭಾರಿ ಮಳೆಗೆ ಮೂರು ಜನರು ಬಲಿ | ಕರಾವಳಿ ಜಿಲ್ಲೆಗಳಲ್ಲಿ ಜೂ.21 ರವರೆಗೆ ವ್ಯಾಪಕ ಮಳೆ |  ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.…

24 minutes ago

ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ

ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ…

30 minutes ago

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಜಾರಿಗೆ ತರಲು ಸರ್ಕಾರ ನಿರ್ಧಾರ

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮವಾಗಬೇಕಿದ್ದು, ಇದು ಅತ್ಯಂತ ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

44 minutes ago

ಕೋಲಾರದಲ್ಲಿ ಮಾವು ಬೆಲೆ ಕುಸಿತ | 15,000 ಬೆಂಬಲ ಬೆಲೆ ಘೋಷಿಸುವಂತೆ ಬೆಳೆಗಾರರ ಆಗ್ರಹ

ಕೋಲಾರದಲ್ಲಿ ಮಾವು ಬೆಳೆಗೆ ಬೆಲೆ ಇಲ್ಲದೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಳೆಗಾರರು ತೀವ್ರ…

49 minutes ago