ಅಡಿಕೆ ಹಳದಿ ಎಲೆ ರೋಗ ಈಗ ವೇಗವಾಗಿ ವಿಸ್ತರಣೆಯಾಗುತ್ತಿದೆ. ಸಂಪಾಜೆ ಪ್ರದೇಶದಲ್ಲಿ ಮಾತ್ರಾ ಕಂಡುಬರುತ್ತಿದ್ದ ರೋಗ ಈಗ ಮರ್ಕಂಜ ಸೇರಿದಂತೆ ಹಲವು ಕಡೆಗಳಲ್ಲಿ ಕಂಡುಬಂದಿದೆ. ಈ ರೋಗ ನಿಯಂತ್ರಣಕ್ಕೆ ಹಲವು ಕೃಷಿಕರು ವಿವಿಧ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಮರ್ಕಂಜದ ಬಾಲಕೃಷ್ಣ ಅವರು ಸಾವಯವ ಕೃಷಿಯ ಪ್ರಯತ್ನ ಮಾಡಿದ್ದಾರೆ. ಇದರಿಂದ ಹರಡುವಿಕೆ ನಿಧಾನವಾಗಿದೆ ಎನ್ನುತ್ತಾರೆ.
ಅಡಿಕೆ ಹಳದಿ ಎಲೆ ರೋಗ ನಿವಾರಣೆಗೆ ವಿವಿಧ ಪ್ರಯತ್ನ ಕೃಷಿಕರೇ ಮಾಡಿದ್ದಾರೆ. ಕೃಷಿ ವಿಜ್ಞಾನಿಗಳ ರೀತಿಯಲ್ಲಿಯೇ ಹಲವು ಪ್ರಯತ್ನ ಮಾಡಿದವರು ಇದ್ದಾರೆ. ಅದರಲ್ಲಿ ಸಾವಯವ ಕೃಷಿಯೂ ಒಂದು ವಿಧಾನ.ಸಾವಯವ ಕೃಷಿಯಿಂದ ರೋಗ ವಿಸ್ತರಣೆಯ ಪ್ರಭಾವ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅಡಿಕೆ ಹಳದಿ ಎಲೆ ರೋಗವು ಇಂತಹ ತೋಟಗಳಿಗೆ ನಿಧಾನವಾಗಿ ಬರುತ್ತದೆ ಮತ್ತು ಹರಡುತ್ತವೆ ಎಂದು ಹೇಳುತ್ತಾರೆ. ಇಂತಹ ಕೃಷಿ ಕೂಡಾ ಇಂದು ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ಅಗತ್ಯವಾಗಿದೆ. ರೋಗ ವಿಸ್ತರಣೆಯನ್ನು ಸ್ವಲ್ಪ ನಿಧಾನವಾಗಿಸಬಹುದು ಎಂಬುದು ಸಾವಯವ ಕೃಷಿಕರ ಸಲಹೆಯಾಗಿದೆ.
ಮರ್ಕಂಜದ ಕೃಷಿಕ ಬಾಲಕೃಷ್ಣ ಅವರ ತೋಟದಲ್ಲಿ ಕಳೆದ ಐದು ವರ್ಷದ ಹಿಂದೆ ರೋಗ ಕಂಡುಬಂದಿತ್ತು. ಆಗಲೇ ವಿಸ್ತರಣೆಯಾಗಿತ್ತು, ತಕ್ಷಣವೇ ಸಾವಯವ ಕೃಷಿ ಆರಂಭಿಸಿದರು. ಆ ತೋಟದಲ್ಲಿ ರೋಗ ವಿಸ್ತರಣೆ ಕಡಿಮೆಯಾಗಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ ರೋಗವೇ ಬರುವುದಿಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ.
ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…