Advertisement
ಸುದ್ದಿಗಳು

ಕ್ಯಾನ್ಸರ್‌ ಜೀವಕೋಶ ತಡೆಗೆ ಅಡಿಕೆ ಔಷಧಿ – ಅಡಿಕೆ ಪುಸ್ತಕದಲ್ಲಿ ವಿಶೇಷ ಉಲ್ಲೇಖ | ಅಡಿಕೆ ಬೆಳೆಗಾರರಿಗೆ ಇನ್ನೊಂದು ಬಲ |

Share

ಅಡಿಕೆಯಲ್ಲಿನ ಅರೆಕಾಲಿನ್‌ ಎಂಬ ಅಂಶವು ಕ್ಯಾನ್ಸರ್‌ ಜೀವಕೋಶಗಳ ವಿಸ್ತರಣೆ ತಡೆಯುತ್ತದೆ ಎಂಬ ಅಧ್ಯಯನ ವರದಿ ಇದೀಗ ಗಮನ ಸೆಳೆದಿದೆ. ಅಡಿಕೆ ಪುಸ್ತಕದಲ್ಲಿ ಈ ಅಂಶ ಬಹಿರಂಗವಾಗಿದ್ದು ಅಡಿಕೆ ಬೆಳೆಗಾರರಿಗೆ ಇದೊಂದು ಅಂಶ ಬಲವಾಗಲಿದೆ. ಈವರೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಗುಮ್ಮ ಆಗಾಗ ಹರಿದಾಡುತ್ತಿತ್ತು.ಅದಕ್ಕೆ ತಾತ್ಕಾಲಿಕ ಉತ್ತರ ದೊರೆತಂತಾಗಿದ್ದು, ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.

Advertisement
Advertisement

ಅಮೆರಿಕದ ಅಟ್ಲಾಂಟಾದ ಎಮರಿ ವಿಶ್ವವಿದ್ಯಾಲಯದ ವಿನ್‌ಶಿಪ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಇತ್ತೀಚಿನ ಅಧ್ಯಯನದಲ್ಲಿ, ಅರೆಕೋಲಿನ್ ಹೈಡ್ರೋಬ್ರೊಮೈಡ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬ ಅಂಶ ಕಂಡುಬಂದಿದೆ. ಈ ಆಧಾರದಲ್ಲಿ ಅಡಿಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ದೃಢಪಡಿಸುವ ಅಧ್ಯಯನ ವರದಿ ಇದೀಗ ಬಹಿರಂಗಗೊಂಡಿದೆ.

ಅಡಿಕೆ” ಪುಸ್ತಕದಲ್ಲಿ ಸಿಪಿಸಿಆರ್‌ ಐ ಮಾಜಿ ನಿರ್ದೇಶಕ ಡಾ. ಪಿ ಚೌಡಪ್ಪ ಅವರ ಸಂಪಾದಕತ್ವದಲ್ಲಿ  ಈ ಪುಸ್ತಕ ಹೊರಬರುತ್ತಿದೆ. ಪ್ರಮುಖವಾಗಿ ಈ ಪುಸ್ತಕದಲ್ಲಿ , ಅಡಿಕೆಯಲ್ಲಿನ ಅರೆಕೋಲಿನ್ ಹೈಡ್ರೋಬ್ರೋಮೈಡ್‌ ಅಂಶವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಹೇಳಿದೆ.  ಈ  ಪುಸ್ತಕದಲ್ಲಿ ಕೃಷಿ ವಿಜ್ಞಾನಿಗಳಾದ ಎಂ. ಅರಿವಳಗನ್, ಸೆಂಥಿಲ್ ಅಮುಧನ್ ಎಂ. ಮತ್ತು ಕೆಬಿ ಹೆಬ್ಬಾರ್ ಅಡಿಕೆಯ ಬಗ್ಗೆ ಬರೆದಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಚೆಗೆ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

ಈ ಪುಸ್ತಕದ ಪ್ರಕಾರ ಅಡಿಕೆಯು ಮೂಲ ರೂಪದಲ್ಲಿ ಅಪಾಯಕಾರಿಯಲ್ಲ. ಅಡಿಕೆಗೆ ಅಲ್ಸರ್, ಗಾಯಗಳು ಮತ್ತು ಕ್ಯಾನ್ಸರ್ ಅನ್ನು ಸಹ ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಿನ ಜಾನಪದ ಔಷಧಿಗಳ ಚಿಕಿತ್ಸೆ ಹಾಗೂ ಅದರ ಗುಣಗಳು ಈಗ ವೈಜ್ಞಾನಿಕ ಪುರಾವೆಗಳಿಂದ  ಬೆಳಕಿಗೆ ಬಂದಿವೆ ಕೂಡಾ. ಈ ಎಲ್ಲಾ ಗುಣಲಕ್ಷಣಗಳು ಮತ್ತು ಅವುಗಳ ಮೇಲಿನ ಕ್ಲಿನಿಕಲ್ ಪ್ರಯೋಗಗಳಿಗೆ ಕಾರಣವಾಗಿರುವ  ವಿವರವಾದ ಅಧ್ಯಯನಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬಹುತೇಕ ದೇಶಗಳಲ್ಲಿ  ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ ಹಾಗೂ ಬಳಕೆಯನ್ನೂ ಮಾಡಲಾಗಿದೆ.  ಆದ್ದರಿಂದ, ಅಡಿಕೆಗಳನ್ನು ಕಾರ್ಸಿನೋಜೆನಿಕ್ ಎಂದು ಅನಗತ್ಯವಾಗಿ ಹೇಳುವ ಬದಲು ಸರಿಯಾದ ವೈಜ್ಞಾನಿಕ ಸಂಶೋಧನೆ ನಡೆಸುವ ಅವಶ್ಯಕತೆಯಿದೆ ಎನ್ನುದು ಉಲ್ಲೇಖ.

ಅಡಿಕೆ ಟಾಸ್ಕ್‌ ಫೋರ್ಸ್ ನ  ಸಮಿತಿಯ ಸದಸ್ಯರೂ ಆಗಿರುವ ಸಿಪಿಸಿಆರ್‌ ಐ ಮಾಜಿ ನಿರ್ದೇಶಕ ಡಾ. ಪಿ ಚೌಡಪ್ಪ ಅವರು, ಅಡಿಕೆಯನ್ನು  ಕ್ಯಾನ್ಸರ್ ಕಾರಕ ಎಂದು ಅನಗತ್ಯ ಹೇಳುವ ಬದಲು ಸರಿಯಾದ ಅಧ್ಯಯನವಾಗಬೇಕಿದೆ ಎಂದು  ಹೇಳುತ್ತಾರೆ. ಇದೀಗ ಅನೇಕ ಅಧ್ಯಯನಗಳ ಪ್ರಕಾರ ಅಡಿಕೆಯ ಮೂಲ ಸ್ವರೂಪ ಆರೋಗ್ಯದ ಮೇಲೆ ಹಾನಿಕಾರಕವಾಗಿಲ್ಲ ಎನ್ನುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

2 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

2 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

12 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

12 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

12 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

12 hours ago