ಅಡಿಕೆಗೆ ಇನ್ನೊಂದು ಜಂಪ್‌ | ಮತ್ತೆ ಪತ್ತೆಯಾಯಿತು ಅಡಿಕೆ ಕಳ್ಳಸಾಗಾಣಿಕೆ | 40 ಸಾವಿರ ಕೆಜಿ ಅಡಿಕೆ ವಶಕ್ಕೆ ಪಡೆದ ಅಧಿಕಾರಿಗಳು |

October 23, 2021
10:53 PM

ಅಡಿಕೆ ಮಾರುಕಟ್ಟೆ  ಕಳೆದ ಸುಮಾರು 15  ದಿನಗಳಿಂದ ಸ್ಥಿರವಾಗಿರುವಂತೆಯೇ ಮಾರುಕಟ್ಟೆಯ ಒಳಗೆ ಸಂಚಲನ ಶುರುವಾಗಿದೆ. ಅಡಿಕೆ ಧಾರಣೆಗೆ ಇನ್ನೊಂದು ಜಂಪ್‌ ಸಿಗಲಿದೆ. ಪೂರಕ ವಾತಾವರಣ ಇದ್ದರೂ ಜಂಪ್‌ ಯಾವಾಗ ಎನ್ನುವುದು  ಪ್ರಶ್ನೆಯಾಗಿದೆ. ಮಾರುಕಟ್ಟೆಯಲ್ಲಿನ ಬೇಡಿಕೆ ಈಗ ಮತ್ತೆ ಹೆಚ್ಚಾಗುತ್ತಿದೆ. ಹೀಗಾಗಿ ದೀಪಾವಳಿ ಆಸುಪಾಸಿನಲ್ಲಿ  ಒಂದು ಜಂಪ್‌ ಸಿಗುವ ನಿರೀಕ್ಷೆ ಇದೆ. ಈ ನಡುವೆಯೇ ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಗೆ  ಪತ್ತೆಯಾಗಿದ್ದು ಸುಮಾರು 40  ಸಾವಿರ ಕೆಜಿಯ ಸುಮಾರು 1.56  ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಶುಕ್ರವಾರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಕೊರೋನಾ ನಂತರ ಭಾರತದ ಒಳಗೆ ಯಾವುದೇ ವಸ್ತುಗಳು ಕಳ್ಳಸಾಗಾಣಿಕೆಗೆ ಕಷ್ಟವಾಗಿದೆ. ಹೀಗಾಗಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿತ್ತು. ಅದರ ಜೊತೆಗೆ ಈಗ ನೇಪಾಳದ ಮೂಲಕವೂ ಅಡಿಕೆ ಆಮದು ತಡೆಯಾಗಿದೆ. ಹೀಗಾಗಿ ಈಗ ಮತ್ತೆ ಅಡಿಕೆ ಕಳ್ಳಸಾಗಾಣಿಗೆಯು ಭಾರತ -ಮ್ಯಾನ್ಮಾರ್‌ ಗಡಿಯ ಮೂಲಕ ಸಾಗಾಟಕ್ಕೆ ಪ್ರಯತ್ನವಾಗುತ್ತಿದೆ. ಅಸ್ಸಾಂ ಮೂಲಕ ದೇಶದೊಳಕ್ಕೆ ಆಗಮಿಸಿ ಅಲ್ಲಿಂದ ಪೂರೈಕೆ ನಡೆಯುತ್ತಿತ್ತು.

ಇದೀಗ ಮತ್ತೆ ಅಸ್ಸಾಂನಲ್ಲಿ ಗಡಿಭದ್ರತಾ ಪಡೆಯ ಸಿಬಂದಿಗಳು ವಿಶೇಷ ಕಾಳಜಿ ವಹಿಸಿ ಅಡಿಕೆ ಕಳ್ಳಸಾಗಾಣಿಕೆ ತಡೆಹಿಡಿದಿದ್ದಾರೆ. ಮಾಯನ್ಮಾರ್ ಗಡಿ ಸಮೀಪದ ಚಾಂಫೈ ಜಿಲ್ಲೆಯ ಕುವಾಂಗ್‌ಫಾ ಗ್ರಾಮದಲ್ಲಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಇಲಾಖೆಯು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ.

ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿರುವುದರಿಂದ ಗಡಿಭದ್ರತಾ ಅಧಿಕಾರಿಗಳು ಹಾಗೂ ಕಸ್ಟಮ್ಸ್‌ ಅಧಿಕಾರಿಗಳು ನಿರಂತರ ತಪಾಸಣೆಯಲ್ಲಿ  ತೊಡಗಿದ್ದಾರೆ.  ಹೀಗಾಗಿ ಭಾರೀ ಪ್ರಮಾಣದ ಅಡಿಕೆ ಸಾಗಾಣಿಕೆ ಮತ್ತೆ ಪತ್ತೆಯಾಗಿದೆ.

ಕಳೆದ ಹಲವು ದಿನಗಳಿಂದ ಅಡಿಕೆ ಖರೀದಿ ಹಾಗೂ ಮಾರಾಟವು ನಿಧಾನಗತಿಯಲ್ಲಿ ಸಾಗುತ್ತಿತ್ತು. ಮಾರುಕಟ್ಟೆಯಲ್ಲಿ ಹಣದ ಕೊರತೆಯ ಕಾರಣದಿಂದ ಧಾರಣೆಯಲ್ಲೂ ಏರುಗತಿ ಇರಲಿಲ್ಲ. ಅದರ ಜೊತೆಗೆ ವ್ಯಾಪಾರಿಗಳಲ್ಲೂ ಹೆಚ್ಚಿನ ಧಾರಣೆ ನೀಡಿ ಖರೀದಿ ಮಾಡಲು ಮಾರುಕಟ್ಟೆಯ ಸ್ಥಿತಿ ಭದ್ರವಾಗಿರಲಿಲ್ಲ. ಖರೀದಿದಾರರ ಸಂಖ್ಯೆಯೂ ಕಡಿಮೆಯಾಗಿತ್ತು.

ವಿಪರೀತ ಧಾರಣೆ ಏರಿಕೆಯ ಕಾರಣದಿಂದ ಅಡಿಕೆ ಖರೀದಿ ಮಾಡುವ ಹಾಗೂ ತಿನ್ನುವ ಮಂದಿಯೂ ಮಂದಗತಿಯಲ್ಲಿತ್ತು. ದೀಪಾವಳಿ ಆಸುಪಾಸಿನಲ್ಲಿ  ಮತ್ತೆ ಧಾರಣೆ ಏರಿಕೆ ನಿರೀಕ್ಷೆ ಸದ್ಯಕ್ಕಿದ್ದು, ಅದಕ್ಕೆ ಪೂರಕವಾಗಿ ಕಳಪೆ ಗುಣಮಟ್ಟದ ಅಥವಾ ವಿದೇಶ ಅಡಿಕೆ ಕಳ್ಳಸಾಗಾಣಿಕೆಗೆ ತಡೆಯಾಗುತ್ತಿದೆ.

ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ ಸ್ಥಿರತೆಯ ಕಡೆಗೆ ಹೆಚ್ಚು ಗಮನಹರಿಸಿದೆ. ಬೆಳೆಗಾರರಿಗೆ ಉತ್ತಮ ಧಾರಣೆ ಲಭ್ಯವಾಗಬೇಕು ಎಂದು ಧಾರಣೆಯ ಇಳಿಕೆ ಮಾಡದೆ ಸ್ಥಿರತೆಯನ್ನು ಕಾಯ್ದುಕೊಂಡು ಮಾರುಕಟ್ಟೆಗೆ ಸ್ಥಿರತೆ ನೀಡಿದೆ. 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?
September 5, 2026
1:37 PM
by: ಸಾಯಿಶೇಖರ್ ಕರಿಕಳ
ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror