ಅಡಿಕೆ ಮೇಲಿನ ನಿಷೇಧದ ಗುಮ್ಮ ಪ್ರತ್ಯಕ್ಷ | ಈ ಬಾರಿ ಬಿಜೆಪಿ ಸಂಸದ ಇದರ ರುವಾರಿ…!!

November 9, 2021
10:34 AM

ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದಂತೆಯೇ ಅಡಿಕೆ ನಿಷೇಧದ ಗುಮ್ಮ ಪ್ರತೀ ಬಾರಿ ಬರುತ್ತಿದೆ. ಈ ಬಾರಿಯೂ ಮತ್ತೆ ಆ ಸುದ್ದಿ ಪ್ರತ್ಯಕ್ಷವಾಗಿದೆ. ಆದರೆ ಈ ಬಾರಿ  ಬಿಜೆಪಿ ಸಂಸದ ಇದರ ರುವಾರಿ…!. 

Advertisement
Advertisement

ಅಡಿಕೆ ಧಾರಣೆ ಕಳೆದ ಒಂದು ವರ್ಷದಿಂದ ಏರಿಕೆಯಾಗುತ್ತಲೇ ಇದೆ. ಅಡಿಕೆ ಆಮದಿಗೆ ತಡೆಯಾಗಿರುವುದು  ಹಾಗೂ ಭಾರತದಲ್ಲಿ  ಅಡಿಕೆ ಬೇಡಿಕೆ ಇರುವುದು  ಧಾರಣೆ ಏರಿಕೆಗೆ ಕಾರಣವಾಗಿದೆ. ಧಾರಣೆ ಏರಿಕೆ ಬೆನ್ನಲ್ಲೇ ಅಡಿಕೆ ನಿಷೇಧ ಅಥವಾ ಅಡಿಕೆ ಹಾನಿಕಾರಕದ ಗುಮ್ಮ ಪ್ರತೀ ಬಾರಿಯೂ ಬರುತ್ತಿದೆ. ಈ ಬಾರಿಯೂ ಅಂತಹ ಗುಮ್ಮ ಕಾಣಿಸಿದೆ. ಕಳೆದ ವರ್ಷವೂ ಕಾಣಿಸಿಕೊಂಡಿತ್ತು. ಇದೀಗ ಜಾರ್ಖಂಡ್‌ ಬಿಜೆಪಿ ಸಂಸದ ನಿಶಿಕಾಂತ್‌ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಅಡಿಕೆ ಸೇವನೆ ಹಾನಿಕಾರಕವಾಗಿದ್ದು , ಇದನ್ನು ಜನರ ಸೇವಿಸಿದಂತೆ  ನಿಷೇಧ ಮಾಡಬೇಕು ಹಾಗೂ ಪೂಜೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ  ಮಾತ್ರವೇ ಬಳಕೆ ಮಾಡಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಅಡಿಕೆ ನಿಷೇಧದ ಗುಮ್ಮ...

ಅಡಿಕೆ ನಿಷೇಧದ ಗುಮ್ಮನ ಬಗ್ಗೆ ಎರಡು ತಿಂಗಳ ಹಿಂದೆ ” ರೂರಲ್‌ ಮಿರರ್‌ ”  ಅಡಿಕೆ ಹಾನಿಕಾರಕ ಸುದ್ದಿಯು ಮತ್ತೆ ಪ್ರಚಲಿತಕ್ಕೆ ಬರಲಿದ್ದು, ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಲಾಬಿಗಳು ನಡೆಯುತ್ತಿರುವ ಬಗ್ಗೆ ವರದಿ ಮಾಡಿತ್ತು. ಇದೀಗ ಭಾರತದಲ್ಲೂ ಅಡಿಕೆ ಹಾನಿಕಾರಕ, ನಿಷೇಧದ ಗುಮ್ಮ ಮತ್ತೆ ಮೇಲೆದ್ದಿದೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group