ಚೀನಾದಲ್ಲಿ ಮತ್ತೆ ಸದ್ದು ಮಾಡಿದ ಅಡಿಕೆ | 36 ವರ್ಷದ ಗಾಯಕನ ಹೇಳಿಕೆ ಮೂಡಿಸಿದ ಸಂಚಲನ |

September 23, 2022
10:39 PM

ಚೀನಾದ ಪ್ರಸಿದ್ಧ ಯುವ ಗಾಯಕ ಫೂ ಸಾಂಗ್ ತನ್ನ 36 ನೇ ವಯಸ್ಸಿನಲ್ಲಿ ಬಾಯಿಯ ಕ್ಯಾನ್ಸರ್‌ನಿಂದ ನಿಧನರಾದರು. ಅದಕ್ಕೂ ಮುನ್ನ ಆತ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಯಿ ಕ್ಯಾನ್ಸರ್‌ ಗೆ ಅಡಿಕೆ ಕಾರಣ ಎಂದು ಹೇಳಿದ್ದರು. ಹೀಗಾಗಿ ಈಗ ಚೀನಾದ ಹಲವು ಕಡೆ ಅಡಿಕೆ ಮತ್ತೆ ಸದ್ದು ಮಾಡುತ್ತಿದೆ. ಚೀನಾ ಕೆಲವು ವರ್ಷದ ಹಿಂದೆಯೇ ಅಡಿಕೆ ಜಾಹೀರಾತು ನಿಷೇಧ ಮಾಡಿತ್ತು. ಇದೀಗ ಗಾಯಕನ ಹೇಳಿಕೆ ಬಳಿಕ ಮತ್ತೆ ಅಡಿಕೆ ಸದ್ದು ಮಾಡಲು ಆರಂಭಿಸಿದೆ.

36 ವರ್ಷದ ಗಾಯಕ 6 ವರ್ಷಗಳ ಕಾಲ ಅಡಿಕೆ ಹಾಗೂ ವೀಳ್ಯದೆಲೆಯನ್ನು ಜಗಿಯುತ್ತಿದ್ದರು. ಈ ನಡುವೆ ಬಾಯಿ ಕ್ಯಾನ್ಸರ್‌ ಬಂದಿತ್ತು. ಈ ಒಂದು ಪ್ರಕರಣದ ಮೂಲಕ ಚೀನಾದಲ್ಲಿ ಮತ್ತೆ ಅಡಿಕೆಯ ಮೇಲೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 10, 2022 ರಂದು, ಗಾಯಕ ಫೂ ಸಾಂಗ್  ನಿಧನರಾದರು. ಫೂ ಸಾಂಗ್ ಒಮ್ಮೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಯಿಯ ಕ್ಯಾನ್ಸರ್ ಅಡಿಕೆಯಿಂದ ಉಂಟಾಗಿದೆ ಎಂದು ಹೇಳಿದ್ದರು. ಅಂದಿನಿಂದ,  ಅಡಿಕೆ ಮಾರಾಟವನ್ನು ನಿಷೇಧಿಸುವ ವದಂತಿಯೂ ಹರಿಡಿದೆ. ಸಾರ್ವಜನಿಕ ಅಭಿಪ್ರಾಯವೂ ಈಗ ಅಲ್ಲಿ ಸದ್ದು ಮಾಡುತ್ತಿದೆ. ಹಲವೆಡೆ ಅಡಿಕೆ ಮಾರಾಟವನ್ನು ನಿಷೇಧಿಸಲಾಗಿದೆ. ಸದ್ಯ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಪ್ಯಾಕೇಜಿಂಗ್ ಮತ್ತು ಲೇಬಲ್‌ಗಳೊಂದಿಗೆ  ಅಡಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿಸುವುದಿಲ್ಲ ಎಂದು ವರದಿಯಾಗಿದೆ.

ಚೀನಾದ ಅಂಕಿಅಂಶಗಳ ಪ್ರಕಾರ  ಪ್ರಪಂಚದಾದ್ಯಂತ ಸುಮಾರು 600 ಮಿಲಿಯನ್ ಜನರು ಅಡಿಕೆಯನ್ನು ಜಗಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಚೀನಾದ ಕೆಲವು ಪ್ರದೇಶದಲ್ಲಿ ಮಾತ್ರವೇ ಅಡಿಕೆ ಬೆಳೆಯುತ್ತಾರೆ. ಚೀನಾದ ಹುನಾನ್ ಪ್ರಾಂತ್ಯದಲ್ಲಿ  ಅಡಿಕೆಯನ್ನು ವಾರ್ಷಿಕವಾಗಿ ಸುಮಾರು 2 ಲಕ್ಷ ಟನ್‌ ವರೆಗೆ ಬೆಳೆಯುತ್ತಾರೆ. ಬೇಡಿಕೆಯು 7-8 ಲಕ್ಷ ಟನ್‌ಗಳಷ್ಟಿದೆ. ಚೀನಾದಾದ್ಯಂತ ಅಡಿಕೆ ಮೌತ್ ಫ್ರೆಶ್ನರ್‌   ತಯಾರಕ ಸಂಸ್ಥೆಗಳು 20 ರಷ್ಟು ಇದ್ದಾರೆ. ಇಡೀ ಚೀನಾದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಿರಿದಾಗಿದೆ. ಆದರೆ ಉದ್ಯಮಗಳು ಹೆಚ್ಚಿವೆ. ಈ ಎಲ್ಲದರ ನಡುವೆಯೂ ಅಡಿಕೆಯ ಬಗ್ಗೆ ಋಣಾತ್ಮಕವಾದ ಸಂದೇಶವನ್ನು ಚೀನಾದಲ್ಲಿ ಬಿತ್ತಲಾಗುತ್ತಿದೆ. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಅಡಿಕೆಯ ಮೇಲೆ ಪರಿಣಾಮವಾಗುವಂತೆ ಅಲ್ಲಿ ಪ್ರಯತ್ನವಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೂ ತರಲಾಗುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್
July 20, 2026
10:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror