Arecanut | ಅಡಿಕೆಯಿಂದ ತಯಾರಾಗುತ್ತಿದೆ ಎನರ್ಜಿ ಡ್ರಿಂಕ್…!‌ |

September 22, 2022
6:47 PM

ವಿಶ್ವದಲ್ಲಿ ಅಡಿಕೆ ಹೆಚ್ಚು ಬೆಳೆಯುವ ದೇಶ ಭಾರತ. ಹಾಗಿದ್ದರೂ ಇಂದಿಗೂ ಅಡಿಕೆ ಹಾನಿಕಾರಕ ಎಂಬ ಹಣೆಪಟ್ಟಿಯಿಂದ ಹೊರಬಂದಿಲ್ಲ. ಸರ್ಕಾರ, ಇಲಾಖೆ, ಅಧಿಕಾರಿಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಆದರೆ ಪುಟ್ಟ ದೇಶ ವಿಯೆಟ್ನಾಂನಲ್ಲಿ ಅಡಿಕೆಯಿಂದ ಎನರ್ಜಿ ಡ್ರಿಂಕ್‌ ತಯಾರಾಗಿ ಮಾರಾಟವಾಗುತ್ತಿದೆ . ಒಂದಲ್ಲ ಮೂರು ಬಗೆಯ ಎನರ್ಜಿ ಡ್ರಿಂಕ್‌ ಅಡಿಕೆಯಿಂದಲೇ ತಯಾರಾಗುತ್ತಿದೆ.

ವಿಯೆಟ್ನಾಂ ದೇಶದಲ್ಲಿ ವಿವಿಧ ಬಗೆಯ ಕೃಷಿ ಉತ್ಪನ್ನಗಳು ತಯಾರಾಗುತ್ತಿದೆ. ಅದರಲ್ಲಿ ಅಡಿಕೆಯ ಎನರ್ಜಿ ಡ್ರಿಂಕ್‌ ಕೂಡಾ ಒಂದು. ಎಳೆ ಅಡಿಕೆಯಿಂದ ಈ ಡ್ರಿಂಕ್‌ ತಯಾರು ಮಾಡಲಾಗುತ್ತಿದೆ. 250 ಎಂಎಲ್‌ ನ ಬಾಟಲಿಯಲ್ಲಿ ವಿಯೆಟ್ನಾಂನಲ್ಲಿ ಈ ಡ್ರಿಂಕ್‌ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. 24 ತಿಂಗಳು ಬಾಳ್ವಿಕೆಯನ್ನು ಈ ಡ್ರಿಂಕ್‌ ಹೊಂದಿದೆ.ಕಳೆದ ಒಂದರಡು ವರ್ಷಗಳಿಂದ ಈ ಡ್ರಿಂಕ್‌ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಹಾಗೂ ಇತರೆಡೆಗೂ ಸರಬರಾಜಾಗುತ್ತಿದೆ.

ಅಡಿಕೆ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಅಡಿಕೆ ತಿನ್ನುವುದು  ಹಾನಿಕಾರಕ ಎಂಬ ಅಪವಾದಗಳು ಕೇಳುತ್ತಲೇ ಇದೆ. ಈಚೆಗೆ ಚೀನಾದಲ್ಲಿ ಯುವ ಗಾಯಕನೊಬ್ಬ ಕ್ಯಾನ್ಸರ್‌ ನಿಂದ ನಿಧನರಾದ ಬಳಿಕ ಅಡಿಕೆ ಹಾನಿಕಾರಕ ಎಂದು ವ್ಯಾಪಕವಾಗಿ ಹಬ್ಬಿತು.

ಆದರೆ ಅಡಿಕೆಯ ಬಳಕೆ ವಿವಿಧ ರೂಪದಲ್ಲಿದೆ. ಅಡಿಕೆಯ ಎನರ್ಜಿ ಡ್ರಿಂಕ್‌ ಈಗ ಹೆಚ್ಚು ಗಮನ ಸೆಳೆದಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ನಿವೇದನ್‌  ಎಂಬವರು ಅಡಿಕೆ ಚಹಾ ತಯಾರಿಸಿ ದೇಶ ವಿದೇಶದ ಗಮನ ಸೆಳೆದಿದ್ದರು. ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಭಾರತದಲ್ಲಿ ಕೂಡಾ ಅತೀ ಅಗತ್ಯವಾಗಿ ಅಧ್ಯಯನಗಳು ನಡೆಯಬೇಕಾಗಿದೆ.

ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಇಂದು ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆಯಿಂದ ಸಾಕಷ್ಟು ಬಗೆಯ ಉತ್ಪನ್ನಗಳನ್ನು ತಯಾರು ಮಾಡಲು ಸಾಧ್ಯವಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ.
ಶ್ರೀ ಪಡ್ರೆ, ಸಂಪಾದಕರು,ಅಡಿಕೆ ಪತ್ರಿಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror