ಅಡಿಕೆ ಕೃಷಿಯ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ ಸಚಿವೆ ಶೋಭಾ ಕರಂದ್ಲಾಜೆ |

October 27, 2022
9:53 PM
ಅಡಿಕೆ ಪರೀಕ್ಷೆ ನಡೆಸಿದ ಅಂದಿನ ಅಧಿಕಾರಿಗಳು ವಿರುದ್ಧವಾದ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ, ಈಗ ಅಡಿಕೆಗೆ ವಿವಿಧ ರೋಗಗಳು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಡಿಕೆ ಮೇಲೆ ತೂಗುಗತ್ತಿ ಇದೆ. ಹೀಗಾಗಿ ಅಡಿಕೆ ಬಿಟ್ಟು ಪರ್ಯಾಯ  ಕೃಷಿಯ ಬಗ್ಗೆ ಕರಾವಳಿಯ ರೈತರು ಯೋಚಿಸಬೇಕು ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಡಬ ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ ನ ನೂತನ ಸಭಾಭವನ ಹಾಗೂ ಬೈತಡ್ಕ ಗೆಜ್ಜರ್ಮೆ 5 ಕೋಟಿಯ ರಸ್ತೆ ಕಾಮಗಾರಿ, ಜನೌಷಧಿ ಕೇಂದ್ರ ಉದ್ಘಾಟಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.
ಅಡಿಕೆ ಆಮದು ತೆರಿಗೆ ವಿಧಿಸಿದ ಕಾರಣ ಆಮದು ನಿಂತಿದೆ. ಆದರೆ ಅಡಿಕೆ ಮೇಲೆ ಇತರ ತೂಗುಗತ್ತಿ  ಇದೆ. ಅಡಿಕೆಯ ಹಾನಿ ಅಥವಾ ವಿಷಕಾರಿ ಅಂಶಗಳ ಪಟ್ಟಿಗೆ ಸೇರಿಸುವುದಿಲ್ಲ.  ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ ಆದರೆ ಸುಪ್ರಿಂ ಕೋರ್ಟ್ ನ ತೂಗುಗತ್ತಿ ಅಡಿಕೆ ಮೇಲೆ ಸದಾ ಇದೆ ಎಂದು ಸಚಿವೆ ಹೇಳಿದರು.  ಈ ನಡುವೆಯೇ ಅಡಿಕೆ ಕೃಷಿಗೆ ಹಳದಿ ರೋಗ ಮತ್ತು ಎಲೆಚುಕ್ಕೆ ರೋಗ ಭಾಧಿಸಿದೆ.ವಿಜ್ಞಾನಿಗಳೂ ಸೇರಿದಂತೆ ಹಲವು ಸಂಶೋಧನೆ ನಡೆಯುತ್ತಿದೆ. ಹೊಸ ಹೊಸ ರೋಗಗಳು ಅಡಿಕೆಯನ್ನು ಬಾಧಿಸುತ್ತವೆ. ಹೀಗಾಗಿ ಅಡಿಕೆ ಬಿಟ್ಟು ಪರ್ಯಾಯವಾಗಿ ತಾಳೆ ಕೃಷಿ ಬಗ್ಗೆ ಕರಾವಳಿಯ ರೈತರು ಯೋಚಿಸಬೇಕು ಎಂದು ಎಚ್ಚರಿಸಿದರು.
ಭಾರತದಲ್ಲಿ ಎಲ್ಲಾ ತಿನ್ನುವ ಆಹಾರಗಳನ್ನು  ಯಥೇಚ್ಛವಾಗಿ ಬೆಳೆಯುತ್ತೇವೆ,  ಆದರೆ ಅಡುಗೆಗೆ ಎಣ್ಣೆ ಉಪಯೋಗಿಸುವ ಎಣ್ಣೆಗಳನ್ನು ಹೊರದೇಶದಿಂದ ತರುತ್ತೇವೆ. ಇಲ್ಲಿಯ ಅಡಿಕೆ ಕೃಷಿಕರು ಅಡುಗೆ ಎಣ್ಣೆಯ ಕೃಷಿಯಾದ ತಾಳೆ ಕೃಷಿಗೆ ಹೆಚ್ಚು ಮಹತ್ವ ಕೊಟ್ಟು ಅದನ್ನು ಬೆಳೆಸಬೇಕು, ಸ್ವಲ್ಪ ಜಾಗದಲ್ಲಿ ತಾಳೆ ಬೆಳೆಸಿ ಎಂದು ಶೋಭಾ ಅಡಿಕೆ ಕೃಷಿಕರಿಗೆ ಮನವಿ ಮಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ  ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ ಅಡಿಕೆ ಕೃಷಿಗೆ ಹಳದಿ ಹಾಗೂ ಎಲೆಚುಕ್ಕೆ ರೋಗದ ನಂತರ ಬದಲಿ ಕೃಷಿ ಬಗ್ಗೆ ಯೋಚನೆ ಮಾಡಬೇಕು ಎಂದರು.  ಒಳನಾಡ ಮೀನು ಸಾಕಾಣಿಕೆ, ಬಯೋಪ್ಲಾಕ್ ಮೀನುಗಾರಿಕೆ  ಬಗ್ಗೆ ಮಾಹಿತಿ ನೀಡಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group