ಈ ವರ್ಷ ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಆಮದು..?

February 26, 2025
11:11 PM
ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ ಮಾಡಲಿದೆ ಎನ್ನುವ ಆಶಾವಾದ ವ್ಯಕ್ತವಾಗಿದೆ. ಭಾರತದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದು, ಬೆಳೆಯೂ ಕಡಿಮೆ ಇದೆ.ಈ ಕೊರತೆಯನ್ನು ಭರ್ತಿ ಮಾಡಲು ಮ್ಯಾನ್ಮಾರ್‌ ಅಡಿಕೆ ಖರೀದಿ ನಡೆಯುತ್ತದೆ ಎನ್ನುವುದು ಅಲ್ಲಿನ ಮಾರುಕಟ್ಟೆ ವಿಶ್ಲೇಷಣೆಯಾಗಿದೆ.(Source:GNL)

ಭಾರತವು ಈ ವರ್ಷ ಮ್ಯಾನ್ಮಾರ್‌ನಿಂದ ಅಡಿಕೆ ಖರೀದಿಯನ್ನು ಪುನರಾರಂಭಿಸಲಿದೆಯೇ..? ಹೀಗೊಂದು ಸುದ್ದಿಯು ಇದೀಗ ಚರ್ಚೆಗೆ ಕಾರಣವಾಗುತ್ತಿದೆ.………ಮುಂದೆ ಓದಿ……..

Advertisement

ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ ಮಾಡಲಿದೆ ಎನ್ನುವ ಆಶಾವಾದ ವ್ಯಕ್ತವಾಗಿದೆ. ಭಾರತದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದು, ಬೆಳೆಯೂ ಕಡಿಮೆ ಇದೆ.ಈ ಕೊರತೆಯನ್ನು ಭರ್ತಿ ಮಾಡಲು ಮ್ಯಾನ್ಮಾರ್‌ ಅಡಿಕೆ ಖರೀದಿ ನಡೆಯುತ್ತದೆ ಎನ್ನುವುದು ಅಲ್ಲಿನ ಮಾರುಕಟ್ಟೆ ವಿಶ್ಲೇಷಣೆಯಾಗಿದೆ. ಈ ಬಗ್ಗೆ ಮ್ಯಾನ್ಮಾರ್‌ನ ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಮ್ಯಾನ್ಮಾರ್‌ ನಿಂದ ಚೀನಾವು ಅತಿದೊಡ್ಡ ಅಡಿಕೆ ಖರೀದಿದಾರ. ಕಳೆದ ವರ್ಷ ಭಾರತದ ಬೇಡಿಕೆ ಕಡಿಮೆಯಾಗಿತ್ತು, ಆದರೆ ಈ ವರ್ಷ ಎಂದಿನಂತೆ ಅಡಿಕೆ ವ್ಯಾಪಾರ ಪುನರಾರಂಭವಾಗಲಿದೆ ಎನ್ನುತ್ತದೆ ಅಲ್ಲಿನ ಅಡಿಕೆ ವ್ಯಾಪಾರದ ಮಾರುಕಟ್ಟೆ. ಮ್ಯಾನ್ಮಾರ್ ಸುಮಾರು 230,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆ ಉತ್ಪಾದನೆಯನ್ನು ಮಾಡುತ್ತದೆ.

ಭಾರತವು 1994 ರಿಂದ ಮ್ಯಾನ್ಮಾರ್‌ನಿಂದ ಅಡಿಕೆಯನ್ನು  ಆಮದು ಸುಂಕ ಇಲ್ಲದೆಯೇ  ಅನುಮತಿಸಿತ್ತು, ಆದರೆ ಅಡಿಕೆ ಆಮದು ಪ್ರಸ್ತುತ 100 ಶೇಕಡಾ ಆಮದು ಸುಂಕಕ್ಕೆ ಒಳಪಟ್ಟಿರುತ್ತದೆ. 2018 ರಲ್ಲಿ, ಇಂಡೋನೇಷ್ಯಾದಿಂದ ಮ್ಯಾನ್ಮಾರ್ ಮೂಲಕ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಕಾರಣದಿಂದ ಭಾರತವು ಅಡಿಕೆ ಮೇಲೆ ಆಮದು ಸುಂಕ ವಿಧಿಸಿತ್ತು. ಆದರೆ ಮ್ಯಾನ್ಮಾರ್-ಭಾರತ ಗಡಿಯಲ್ಲಿ ಅಡಿಕೆ ಕಳ್ಳಸಾಗಣೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಈಗಲೂ ಈ ಕಳ್ಳಸಾಗಾಣಿಕೆ ನಡೆಯುತ್ತಿದೆ. ಆಗಾಗ ಅಡಿಕೆ ವಶಕ್ಕೆ ಪಡೆಯುವ ವರದಿಗಳು ಬೆಳಕಿಗೆ ಬರುತ್ತಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ
ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ
March 29, 2025
9:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group