ಸುದ್ದಿಗಳು

ಜ.12 : ವಿಟ್ಲದಲ್ಲಿ ಅಡಿಕೆ ಗೋಣಿಗೊನೆ ಪ್ರಾತ್ಯಕ್ಷಿಕೆ

Share

ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12  ರಂದು ವಿಟ್ಲ ಸಿಪಿಸಿಆರ್‌ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ತರಬೇತಿ ಶಿಬಿರದ ಕೊನೆಯ ದಿನ ಪೂರ್ವಾಹ್ನ ನಡೆಯಲಿದೆ.

Advertisement
Advertisement

ಅಡಿಕೆ ಕೊಯ್ಯುವಾಗ ಬಿದ್ದ ಗೊನೆಯಿಂದ ಅಡಿಕೆ ಚದುರಿ ಹರಡಿದರೆ ಅದನ್ನು ಹೆಕ್ಕಲು ತುಂಬ ಆಳುಗಳು ಬೇಕು. ಈ ಸಮಸ್ಯೆ ನಿವಾರಿಸಲು ಉತ್ತರ ಕನ್ನಡ, ಚನ್ನಗಿರಿ ಮೊದಲಾದ ಕಡೆಗಳ  ಗೋಣಿಗೊನೆ ಹಾಗೂ ಪಾಟು ಹಾಕುವುದು,   ಮತ್ತು ಛಬ್ಬೆ ಹಿಡಿಯುವ ಕ್ರಮವನ್ನು ಅಡಿಕೆ ಬೆಳೆಗಾರರು ಬಹುಕಾಲದಿಂದ ಮಾಡುತ್ತಿದ್ದಾರೆ. ಅದೇ ಮಾದರಿ ದ ಕ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಮಾಡಲು ಸಾಧ್ಯವಿದೆ.

    

Advertisement

ಈ ವಿಧಾನವನ್ನು ಕರಾವಳಿಯ ಕೃಷಿಕರಿಗೆ ಪರಿಚಯಿಸಲೆಂದೇ ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಸಂಘದ ಅಧ್ಯಕ್ಷ, ಕೃಷಿಕ ಸತ್ಯನಾರಾಯಣ ಕೂಳೂರು ಕುಶಲಕರ್ಮಿಗಳನ್ನು ಕರೆತರಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿರುವ ತೀರ್ಥಹಳ್ಳಿಯ ಭಾಸ್ಕರ ಶೆಟ್ಟರಿಗೆ ಗೋಣಿಗೊನೆ ಹಿಡಿಯುವುದರಲ್ಲಿ ಮೂರು ದಶಕದ ಅನುಭವ ಇದೆ. ಈ ಭಾಗದಲ್ಲಿ ಬಿದಿರಿನ ದೋಟಿಯಲ್ಲಿ ಗೊನೆ ಕೊಯ್ಯುವಾಗಲೂ ಗೋಣಿಗೊನೆ ವಿಧಾನದಲ್ಲಿ ಅಡಿಕೆ ಉದುರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಭಾಸ್ಕರ ಶೆಟ್ಟರು. ತೋಟದಲ್ಲಿ ಕೊಕ್ಕೋ ಮತ್ತಿತರ ಎಡೆ ಬೆಳೆ ಸಾಂದ್ರವಾಗಿ ಇರುವಲ್ಲಿ ಈ ಕ್ರಮ ಕಷ್ಟ.

          ಆಸಕ್ತ ಕೃಷಿಕರು ಈ ಪ್ರಾತ್ಯಕ್ಷಿಕೆ ನೋಡಿ ಇಲ್ಲೂ ಈ ಶ್ರಮ ಉಳಿಸುವ ಉಪಾಯವನ್ನು ಅಳವಡಿಸಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋಲಾರದ 54 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆ | ಈ ಬಾರಿ ಮಾವು ಬೆಳೆ ಧಾರಣೆ ತೀವ್ರ ಕುಸಿತ

ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇದರಲ್ಲಿ ಕೋಲಾರ…

7 hours ago

ಅಡಿಕೆ ಹಾನಿಕಾರವಲ್ಲ- ಅಡಿಕೆ ಬೆಳೆಗಾರರ ಸವಾಲುಗಳನ್ನು ಎದುರಿಸಲು ಸಂಘಟಿತರಾಗಬೇಕಿದೆ

ಅಡಿಕೆ ಬೆಳೆಗಾರರು ವಿವಿಧ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ…

7 hours ago

ಹವಾಮಾನ ವರದಿ | 29-06-2025 | ರೈತರಿಗೆ ಈ ವಾರ ಬೆಳೆ ರಕ್ಷಣೆಯ ಸಮಯ – ಮಳೆ ಕಡಿಮೆ ಇರಬಹುದು |

ಜೂನ್ 30 ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ನಂತರ ಅಲ್ಲಲ್ಲಿ ಸಾಮಾನ್ಯ…

8 hours ago

ಕೇರಳ ಮತ್ತು ಅಸ್ಸಾಂನಲ್ಲಿ ಭಾರಿ ಮಳೆ, ದೆಹಲಿ ಮಾನ್ಸೂನ್ ವಿಳಂಬ

ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮುಂಗಾರು ಮಳೆ ವಿಳಂಬವಾಗಿದ್ದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ…

12 hours ago

ಬದುಕು ಪುರಾಣ | ವಾತ್ಸಲ್ಯಗಳು ತೂಕಡಿಸುತ್ತಿವೆ?

ಒಂದೇ ತಾಯಿಯ ಗರ್ಭದಿಂದ ಸಂಜನಿಸಿದ ಸಹೋದರರ ಗುಣಗಳಲ್ಲಿ ವ್ಯತ್ಯಾಸಗಳಿವೆ. ವ್ಯಕ್ತಿತ್ವ ರೂಪೀಕರಣದಲ್ಲೂ ಭಿನ್ನ…

12 hours ago

ಆಷಾಢ ಶುಕ್ರವಾರ ಈ 4 ತಪ್ಪುಗಳನ್ನು ಮಾಡಲೇಬೇಡಿ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago