ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12 ರಂದು ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ತರಬೇತಿ ಶಿಬಿರದ ಕೊನೆಯ ದಿನ ಪೂರ್ವಾಹ್ನ ನಡೆಯಲಿದೆ.
ಅಡಿಕೆ ಕೊಯ್ಯುವಾಗ ಬಿದ್ದ ಗೊನೆಯಿಂದ ಅಡಿಕೆ ಚದುರಿ ಹರಡಿದರೆ ಅದನ್ನು ಹೆಕ್ಕಲು ತುಂಬ ಆಳುಗಳು ಬೇಕು. ಈ ಸಮಸ್ಯೆ ನಿವಾರಿಸಲು ಉತ್ತರ ಕನ್ನಡ, ಚನ್ನಗಿರಿ ಮೊದಲಾದ ಕಡೆಗಳ ಗೋಣಿಗೊನೆ ಹಾಗೂ ಪಾಟು ಹಾಕುವುದು, ಮತ್ತು ಛಬ್ಬೆ ಹಿಡಿಯುವ ಕ್ರಮವನ್ನು ಅಡಿಕೆ ಬೆಳೆಗಾರರು ಬಹುಕಾಲದಿಂದ ಮಾಡುತ್ತಿದ್ದಾರೆ. ಅದೇ ಮಾದರಿ ದ ಕ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಮಾಡಲು ಸಾಧ್ಯವಿದೆ.
ಈ ವಿಧಾನವನ್ನು ಕರಾವಳಿಯ ಕೃಷಿಕರಿಗೆ ಪರಿಚಯಿಸಲೆಂದೇ ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಸಂಘದ ಅಧ್ಯಕ್ಷ, ಕೃಷಿಕ ಸತ್ಯನಾರಾಯಣ ಕೂಳೂರು ಕುಶಲಕರ್ಮಿಗಳನ್ನು ಕರೆತರಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿರುವ ತೀರ್ಥಹಳ್ಳಿಯ ಭಾಸ್ಕರ ಶೆಟ್ಟರಿಗೆ ಗೋಣಿಗೊನೆ ಹಿಡಿಯುವುದರಲ್ಲಿ ಮೂರು ದಶಕದ ಅನುಭವ ಇದೆ. ಈ ಭಾಗದಲ್ಲಿ ಬಿದಿರಿನ ದೋಟಿಯಲ್ಲಿ ಗೊನೆ ಕೊಯ್ಯುವಾಗಲೂ ಗೋಣಿಗೊನೆ ವಿಧಾನದಲ್ಲಿ ಅಡಿಕೆ ಉದುರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಭಾಸ್ಕರ ಶೆಟ್ಟರು. ತೋಟದಲ್ಲಿ ಕೊಕ್ಕೋ ಮತ್ತಿತರ ಎಡೆ ಬೆಳೆ ಸಾಂದ್ರವಾಗಿ ಇರುವಲ್ಲಿ ಈ ಕ್ರಮ ಕಷ್ಟ.
ಆಸಕ್ತ ಕೃಷಿಕರು ಈ ಪ್ರಾತ್ಯಕ್ಷಿಕೆ ನೋಡಿ ಇಲ್ಲೂ ಈ ಶ್ರಮ ಉಳಿಸುವ ಉಪಾಯವನ್ನು ಅಳವಡಿಸಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…