Advertisement
ಸುದ್ದಿಗಳು

ಜ.12 : ವಿಟ್ಲದಲ್ಲಿ ಅಡಿಕೆ ಗೋಣಿಗೊನೆ ಪ್ರಾತ್ಯಕ್ಷಿಕೆ

Share

ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12  ರಂದು ವಿಟ್ಲ ಸಿಪಿಸಿಆರ್‌ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ತರಬೇತಿ ಶಿಬಿರದ ಕೊನೆಯ ದಿನ ಪೂರ್ವಾಹ್ನ ನಡೆಯಲಿದೆ.

ಅಡಿಕೆ ಕೊಯ್ಯುವಾಗ ಬಿದ್ದ ಗೊನೆಯಿಂದ ಅಡಿಕೆ ಚದುರಿ ಹರಡಿದರೆ ಅದನ್ನು ಹೆಕ್ಕಲು ತುಂಬ ಆಳುಗಳು ಬೇಕು. ಈ ಸಮಸ್ಯೆ ನಿವಾರಿಸಲು ಉತ್ತರ ಕನ್ನಡ, ಚನ್ನಗಿರಿ ಮೊದಲಾದ ಕಡೆಗಳ  ಗೋಣಿಗೊನೆ ಹಾಗೂ ಪಾಟು ಹಾಕುವುದು,   ಮತ್ತು ಛಬ್ಬೆ ಹಿಡಿಯುವ ಕ್ರಮವನ್ನು ಅಡಿಕೆ ಬೆಳೆಗಾರರು ಬಹುಕಾಲದಿಂದ ಮಾಡುತ್ತಿದ್ದಾರೆ. ಅದೇ ಮಾದರಿ ದ ಕ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಮಾಡಲು ಸಾಧ್ಯವಿದೆ.

    

ಈ ವಿಧಾನವನ್ನು ಕರಾವಳಿಯ ಕೃಷಿಕರಿಗೆ ಪರಿಚಯಿಸಲೆಂದೇ ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಸಂಘದ ಅಧ್ಯಕ್ಷ, ಕೃಷಿಕ ಸತ್ಯನಾರಾಯಣ ಕೂಳೂರು ಕುಶಲಕರ್ಮಿಗಳನ್ನು ಕರೆತರಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿರುವ ತೀರ್ಥಹಳ್ಳಿಯ ಭಾಸ್ಕರ ಶೆಟ್ಟರಿಗೆ ಗೋಣಿಗೊನೆ ಹಿಡಿಯುವುದರಲ್ಲಿ ಮೂರು ದಶಕದ ಅನುಭವ ಇದೆ. ಈ ಭಾಗದಲ್ಲಿ ಬಿದಿರಿನ ದೋಟಿಯಲ್ಲಿ ಗೊನೆ ಕೊಯ್ಯುವಾಗಲೂ ಗೋಣಿಗೊನೆ ವಿಧಾನದಲ್ಲಿ ಅಡಿಕೆ ಉದುರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಭಾಸ್ಕರ ಶೆಟ್ಟರು. ತೋಟದಲ್ಲಿ ಕೊಕ್ಕೋ ಮತ್ತಿತರ ಎಡೆ ಬೆಳೆ ಸಾಂದ್ರವಾಗಿ ಇರುವಲ್ಲಿ ಈ ಕ್ರಮ ಕಷ್ಟ.

          ಆಸಕ್ತ ಕೃಷಿಕರು ಈ ಪ್ರಾತ್ಯಕ್ಷಿಕೆ ನೋಡಿ ಇಲ್ಲೂ ಈ ಶ್ರಮ ಉಳಿಸುವ ಉಪಾಯವನ್ನು ಅಳವಡಿಸಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

20 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

21 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

22 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 days ago