ಅಡಿಕೆಗೊಂದು ಮೂಗು…..! | ಅಡಿಕೆ ಕೊಯ್ಲು ವೇಳೆ ಗಮನಿಸಬೇಕಾದ ಅಂಶ…. |

January 14, 2022
11:53 AM

ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಪ್ರಮುಖವಾದ ಘಟ್ಟ. ನುರಿತ ಕಾರ್ಮಿಕರು ಈ ಕಾರ್ಯಕ್ಕೆ ಅಗತ್ಯ. ಈಚೆಗೆ ನುರಿತ ಕಾರ್ಮಿಕರ ಕೊರತೆ ಇರುವುದು ನಿಜ. ಇದೇ ವೇಳೆ ಅಡಿಕೆ ಕೊಯ್ಲಿನ ತಾಂತ್ರಿಕ ಕೌಶಲ್ಯ ಅಡಿಕೆ ಬೆಳೆಗಾರರಿಗೂ ಅಗತ್ಯವಿದೆ. ಅಂತಹ ತಾಂತ್ರಿಕ ಮಾಹಿತಿಗಳಲ್ಲಿ ಅಡಿಕೆ ಗೊನೆಯ ಮೂಗೂ ಒಂದು. ಅದರ ವಿವರ ಇಲ್ಲಿದೆ…

Advertisement

ಈಚೆಗೆ ವಿಟ್ಲದ ಸಿಪಿಸಿಆರ್‌ ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್‌ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಅಡಿಕೆ ಕೌಶಲ್ಯ ಪಡೆಯ ಅಡಿಕೆ ಕೊಯ್ಲು ತರಬೇತಿ ಶಿಬಿರ ನಡೆಯಿತು. ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ ವಿಶೇಷವಾಗಿ ಅಡಿಕೆ ಕೊಯಿಲು ವೇಳೆ ಪ್ರಮುಖವಾಗಿ ಗಮನಿಸಬೇಕಾದ ಅಡಿಕೆ ಗೊನೆಯ ಮೂಗಿನ ಬಗ್ಗೆ ತರಬೇತುದಾರ ಆರ್‌ ಜಿ ಹೆಗಡೆ (ರಾಮಚಂದ್ರ ಹೆಗಡೆ) ಅವರು ಅಡಿಕೆ ಗೊನೆಯ ಮೂಗಿನ ಬಗ್ಗೆ ಹಾಗೂ ಕೊಯ್ಲು ಸುಲಭದ ಬಗ್ಗೆ ಮಾಹಿತಿ ನೀಡಿದರು.

ಅಡಿಕೆ ಗೊನೆಗೆ ಮೂಗು ಎಂಬುದಿದೆ. ಈಗಾಗಲೇ ಅಡಿಕೆ ಕೊಯಿಲು ಮಾಡುವ ಮಂದಿಗೆ ಈ ಬಗ್ಗೆ ಯಾವುದೇ ಮಾಹಿತಿ ಅಗತ್ಯವಿಲ್ಲ. ಆದರೆ ಹೊಸದಾಗಿ ಕಲಿಯುವ ಹಾಗೂ ಅಡಿಕೆ  ಬೆಳೆಗೆ ಬಂದಿರುವ ಹೊಸದಾದ ಕೃಷಿಕರಿಗೆ ಈ ಮಾಹಿತಿಯ ಕೊರತೆ ಇದೆ. ಅಡಿಕೆ ಗೊನೆಯ ಮೂಗಿಗೆ ದೋಟಿಯನ್ನು ಅಥವಾ ಕೊಕ್ಕೆಯನ್ನು ಹಾಕಿದರೆ ಅಡಿಕೆ ಕೊಯ್ಲು ಸುಲಭವಾಗುತ್ತದೆ ಹಾಗೂ ಕತ್ತಿಯನ್ನು ಕೂಡಾ ಅಡಿಕೆ ಗೊನೆಯ ನಡುವೆ ದಾಟಿಸಲೂ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಸರ್ಪಸಂಸ್ಕಾರವು ಈ ಶಾಪದಿಂದ ಮುಕ್ತಿಯನ್ನು ಒದಗಿಸುವ ಮಾರ್ಗ
August 1, 2025
8:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 31-07-2025 | ಇನ್ನೊಂದು ವಾಯುಭಾರ ಕುಸಿತದ ಲಕ್ಷಣ |
July 31, 2025
1:37 PM
by: ಸಾಯಿಶೇಖರ್ ಕರಿಕಳ
ಹಾವೇರಿಯಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯ | ರಾಜ್ಯದ 639 ರೈತರಿಗೆ ವಂಚನೆ |
July 30, 2025
9:32 PM
by: The Rural Mirror ಸುದ್ದಿಜಾಲ
ಕಾಡಾನೆಗಳ ನಿಯಂತ್ರಣಕ್ಕೆ ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ
July 30, 2025
9:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group