Advertisement
MIRROR FOCUS

ವಾಣಿಜ್ಯ ಉದ್ದೇಶಕ್ಕಾಗಿ ಅಡಿಕೆ ಆಮದಿಗೆ ಅನುಮತಿ | ನೇಪಾಳ ಸರ್ಕಾರದ ತೀರ್ಮಾನ ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಾದೀತೇ ? |

Share

ವಾಣಿಜ್ಯ ಉದ್ದೇಶಕ್ಕಾಗಿ ಅಡಿಕೆ, ಕರಿಮೆಣಸು ಸೇರಿದಂತೆ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳಲು ನೇಪಾಳ ಸರ್ಕಾರ ಅನುಮತಿ ನೀಡಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು ನೇಪಾಳ ಗೆಜೆಟ್‌ನಲ್ಲಿ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಕಳ್ಳಸಾಗಣೆಯಾಗುತ್ತಿದ್ದ ಈ ವಸ್ತುಗಳ ಆಮದನ್ನು ವ್ಯಾಪಾರಿಗಳಿಗೆ ಅನುಮತಿಸಲಾಗಿದೆ ಎಂದು ಹೇಳಿದೆ. ಇದು ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಾದೀತೇ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಯಾವುದೇ ಪರಿಣಾಮವಾಗದೇ ಇದ್ದರೂ ಅಡಿಕೆ ಮಾರುಕಟ್ಟೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರದು.

ನೇಪಾಳದ ವಿದೇಶಿ ವಿನಿಮಯ ಸಂಗ್ರಹವು ಕುಸಿಯುತ್ತಿರುವ ಮತ್ತು ಸರ್ಕಾರವು 1,500 ಕ್ಕೂ ಹೆಚ್ಚು ವಸ್ತುಗಳ ಆಮದನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ, ಸರ್ಕಾರವು ಕೈಗಾರಿಕಾ ಉದ್ದೇಶಗಳಿಗಾಗಿ ಅಡಿಕೆ ಹಾಗೂ ಇತರ ಕೆಲವು ವಸ್ತುಗಳ ಆಮದನ್ನು ಮುಕ್ತವಾಗಿಸಿ ಅನುಮತಿ ನೀಡಿದೆ. ನೇಪಾಳ ಸರ್ಕಾರ ಅಡಿಕೆಯನ್ನು  ಪ್ರತ್ಯೇಕಿಸಿ ಆಮದಿಗೆ ಅವಕಾಶ ಮಾಡಿದೆ.

ನೇಪಾಳದಲ್ಲಿ ಕಡಿಮೆ ಅಡಿಕೆ ಬೆಳೆಯುತ್ತಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾ ಸೇರಿದಂತೆ ವಿವಿದೆಡೆಯಿಂದ ಆಮದಾಗಿ ಭಾರತಕ್ಕೆ ರಪ್ತಾಗುತ್ತಿತ್ತು. ಯಾವುದೇ ತೆರಿಗೆ ಇಲ್ಲದೆ ಭಾರತ ಹಾಗೂ ನೇಪಾಳದ ನಡುವೆ ಅಡಿಕೆ ಸಾಗಾಟ ಅಧಿಕೃತವಾಗಿ ನಡೆಯುತ್ತಿತ್ತು. ಹೀಗಾಗಿ ವಿವಿದೆಡೆಯ ಅಡಿಕೆಯು ಭಾರತದೊಳಗೆ ನೇಪಾಳ ಮೂಲಕ ಆಮದಾಗುತ್ತಿತ್ತು. ಕೊರೋನಾ ನಂತರ ದೇಶದ ಎಲ್ಲಾ ಗಡಿಗಳು ಭದ್ರತೆಯಿಂದ ಕೂಡಿದ್ದ ಕಾರಣದಿಂದ ಅಡಿಕೆ ಆಮದು ಕಷ್ಟವಾಯಿತು. ಆದರೆ ನೇಪಾಳ ದಾರಿಯಲ್ಲಿ ಸ್ವಲ್ಪ ಪ್ರಮಾಣದ ಅಡಿಕೆ ಭಾರತಕ್ಕೆ ಬರುತ್ತಿತ್ತು.  ಯಾವುದೇ ತೆರಿಗೆ ಇಲ್ಲದೆ ನೇಪಾಳಕ್ಕೂ ನಷ್ಟವಾಗುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅಡಿಕೆ ಆಮದು ಹಾಗೂ ರಫ್ತು ಮೇಲೆ ನೇಪಾಳ ಸರ್ಕಾರ ಹಿಡಿತ ಸಾಧಿಸಿ, ನಿರ್ಬಂಧ ಹೇರಿತ್ತು. ಇದರಿಂದ ಭಾರತದ ಅಡಿಕೆ ಮಾರುಕಟ್ಟೆ ಬಿಗುಗೊಂಡು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಲೂ ಒಂದು ಕಾರಣವಾಯಿತು.

ಇದೀಗ ತೆರಿಗೆ ಸಹಿತವಾಗಿ ಅಡಿಕೆ ಆಮದಿಗೆ ನೇಪಾಳ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ನೇಪಾಳಕ್ಕೆ ಆಮದು ಆಗಿ ತೆರಿಗೆ ಸೇರಿದಂತೆ ಭಾರತಕ್ಕೆ ಮತ್ತೆ ಸಾಗಾಟವಾಗುವ ವೇಳೆಗೆ ಬಹುಪಾಲು ಭಾರತದ ಅಡಿಕೆ ಮಾರುಕಟ್ಟೆಯ ಈಗಿನ ಧಾರಣೆಯೇ ಆಗಿರುತ್ತದೆ. ಹೀಗಾಗಿ ಅಡಿಕೆ ಧಾರಣೆ ಮುಂದೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಸಾಧ್ಯವೇ ಎಂಬುದು ಮಾರುಕಟ್ಟೆ ವಲಯದ ಅಭಿಪ್ರಾಯ. ಆದರೆ ಈಗಿನ ಅಡಿಕೆ ಮಾರುಕಟ್ಟೆ, ಧಾರಣೆಯ ಮೇಲೆ ಸದ್ಯ ಯಾವುದೇ ಪರಿಣಾಮ ಬೀರಲಾರದು ಎನ್ನುವುದು  ಈಗಿನ ಅಂದಾಜು. ಮಾರುಕಟ್ಟೆ ಕುಸಿತವಾಗದಂತೆ ಈಗಾಗಲೇ ಸಾಕಷ್ಟು ಎಚ್ಚರಿಕೆಗಳನ್ನು ಸರ್ಕಾರವೂ ಕೈಗೊಂಡಿದೆ. ಭಾರತದೊಳಗ್ಗೆ ಅಸ್ಸಾಂ ಗಡಿಯ ಮೂಲಕ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಬಹುಪಾಲು ಕಡಿಮೆಯಾಗಿದ್ದು, ಇನ್ನೀಗ ಅಧಿಕೃತವಾಗಿ ನೇಪಾಳದ ಮೂಲಕ ಭಾರತದೊಳಕ್ಕೆ ಬರುವ ಅಡಿಕೆಯ ಬಗ್ಗೆ ಮಾತ್ರಾ ಹೆಚ್ಚು ನಿಗಾ ಇಡಬೇಕಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

2 hours ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

9 hours ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

16 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

17 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

18 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

1 day ago