ವಾಣಿಜ್ಯ ಉದ್ದೇಶಕ್ಕಾಗಿ ಅಡಿಕೆ, ಕರಿಮೆಣಸು ಸೇರಿದಂತೆ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳಲು ನೇಪಾಳ ಸರ್ಕಾರ ಅನುಮತಿ ನೀಡಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು ನೇಪಾಳ ಗೆಜೆಟ್ನಲ್ಲಿ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಕಳ್ಳಸಾಗಣೆಯಾಗುತ್ತಿದ್ದ ಈ ವಸ್ತುಗಳ ಆಮದನ್ನು ವ್ಯಾಪಾರಿಗಳಿಗೆ ಅನುಮತಿಸಲಾಗಿದೆ ಎಂದು ಹೇಳಿದೆ. ಇದು ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮವಾದೀತೇ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಯಾವುದೇ ಪರಿಣಾಮವಾಗದೇ ಇದ್ದರೂ ಅಡಿಕೆ ಮಾರುಕಟ್ಟೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರದು.
ನೇಪಾಳದ ವಿದೇಶಿ ವಿನಿಮಯ ಸಂಗ್ರಹವು ಕುಸಿಯುತ್ತಿರುವ ಮತ್ತು ಸರ್ಕಾರವು 1,500 ಕ್ಕೂ ಹೆಚ್ಚು ವಸ್ತುಗಳ ಆಮದನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ, ಸರ್ಕಾರವು ಕೈಗಾರಿಕಾ ಉದ್ದೇಶಗಳಿಗಾಗಿ ಅಡಿಕೆ ಹಾಗೂ ಇತರ ಕೆಲವು ವಸ್ತುಗಳ ಆಮದನ್ನು ಮುಕ್ತವಾಗಿಸಿ ಅನುಮತಿ ನೀಡಿದೆ. ನೇಪಾಳ ಸರ್ಕಾರ ಅಡಿಕೆಯನ್ನು ಪ್ರತ್ಯೇಕಿಸಿ ಆಮದಿಗೆ ಅವಕಾಶ ಮಾಡಿದೆ.
ನೇಪಾಳದಲ್ಲಿ ಕಡಿಮೆ ಅಡಿಕೆ ಬೆಳೆಯುತ್ತಿದ್ದರೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಂಗ್ಲಾ ಸೇರಿದಂತೆ ವಿವಿದೆಡೆಯಿಂದ ಆಮದಾಗಿ ಭಾರತಕ್ಕೆ ರಪ್ತಾಗುತ್ತಿತ್ತು. ಯಾವುದೇ ತೆರಿಗೆ ಇಲ್ಲದೆ ಭಾರತ ಹಾಗೂ ನೇಪಾಳದ ನಡುವೆ ಅಡಿಕೆ ಸಾಗಾಟ ಅಧಿಕೃತವಾಗಿ ನಡೆಯುತ್ತಿತ್ತು. ಹೀಗಾಗಿ ವಿವಿದೆಡೆಯ ಅಡಿಕೆಯು ಭಾರತದೊಳಗೆ ನೇಪಾಳ ಮೂಲಕ ಆಮದಾಗುತ್ತಿತ್ತು. ಕೊರೋನಾ ನಂತರ ದೇಶದ ಎಲ್ಲಾ ಗಡಿಗಳು ಭದ್ರತೆಯಿಂದ ಕೂಡಿದ್ದ ಕಾರಣದಿಂದ ಅಡಿಕೆ ಆಮದು ಕಷ್ಟವಾಯಿತು. ಆದರೆ ನೇಪಾಳ ದಾರಿಯಲ್ಲಿ ಸ್ವಲ್ಪ ಪ್ರಮಾಣದ ಅಡಿಕೆ ಭಾರತಕ್ಕೆ ಬರುತ್ತಿತ್ತು. ಯಾವುದೇ ತೆರಿಗೆ ಇಲ್ಲದೆ ನೇಪಾಳಕ್ಕೂ ನಷ್ಟವಾಗುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅಡಿಕೆ ಆಮದು ಹಾಗೂ ರಫ್ತು ಮೇಲೆ ನೇಪಾಳ ಸರ್ಕಾರ ಹಿಡಿತ ಸಾಧಿಸಿ, ನಿರ್ಬಂಧ ಹೇರಿತ್ತು. ಇದರಿಂದ ಭಾರತದ ಅಡಿಕೆ ಮಾರುಕಟ್ಟೆ ಬಿಗುಗೊಂಡು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಲೂ ಒಂದು ಕಾರಣವಾಯಿತು.
ಇದೀಗ ತೆರಿಗೆ ಸಹಿತವಾಗಿ ಅಡಿಕೆ ಆಮದಿಗೆ ನೇಪಾಳ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ನೇಪಾಳಕ್ಕೆ ಆಮದು ಆಗಿ ತೆರಿಗೆ ಸೇರಿದಂತೆ ಭಾರತಕ್ಕೆ ಮತ್ತೆ ಸಾಗಾಟವಾಗುವ ವೇಳೆಗೆ ಬಹುಪಾಲು ಭಾರತದ ಅಡಿಕೆ ಮಾರುಕಟ್ಟೆಯ ಈಗಿನ ಧಾರಣೆಯೇ ಆಗಿರುತ್ತದೆ. ಹೀಗಾಗಿ ಅಡಿಕೆ ಧಾರಣೆ ಮುಂದೆ ಭಾರೀ ಏರಿಕೆಯ ನಿರೀಕ್ಷೆ ಸದ್ಯಕ್ಕೆ ಕಷ್ಟ ಸಾಧ್ಯವೇ ಎಂಬುದು ಮಾರುಕಟ್ಟೆ ವಲಯದ ಅಭಿಪ್ರಾಯ. ಆದರೆ ಈಗಿನ ಅಡಿಕೆ ಮಾರುಕಟ್ಟೆ, ಧಾರಣೆಯ ಮೇಲೆ ಸದ್ಯ ಯಾವುದೇ ಪರಿಣಾಮ ಬೀರಲಾರದು ಎನ್ನುವುದು ಈಗಿನ ಅಂದಾಜು. ಮಾರುಕಟ್ಟೆ ಕುಸಿತವಾಗದಂತೆ ಈಗಾಗಲೇ ಸಾಕಷ್ಟು ಎಚ್ಚರಿಕೆಗಳನ್ನು ಸರ್ಕಾರವೂ ಕೈಗೊಂಡಿದೆ. ಭಾರತದೊಳಗ್ಗೆ ಅಸ್ಸಾಂ ಗಡಿಯ ಮೂಲಕ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದು ಬಹುಪಾಲು ಕಡಿಮೆಯಾಗಿದ್ದು, ಇನ್ನೀಗ ಅಧಿಕೃತವಾಗಿ ನೇಪಾಳದ ಮೂಲಕ ಭಾರತದೊಳಕ್ಕೆ ಬರುವ ಅಡಿಕೆಯ ಬಗ್ಗೆ ಮಾತ್ರಾ ಹೆಚ್ಚು ನಿಗಾ ಇಡಬೇಕಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…