Advertisement
ಸುದ್ದಿಗಳು

ಅಡಿಕೆ ಆಮದು ಪ್ರಮಾಣ ಏರಿಕೆ | ಕಳೆದ ವರ್ಷ 42236 ಮೆಟ್ರಿಕ್‌ ಟನ್‌ ಅಡಿಕೆ ಆಮದು

Share

ಭಾರತಕ್ಕೆ 2024-25 ನೇ ಸಾಲಿನಲ್ಲಿ 1208 ಕೋಟಿ ರೂಪಾಯಿ ಮೌಲ್ಯದ 42236 ಮೆಟ್ರಿಕ್‌ ಟನ್‌ ಅಡಿಕೆ ವಿವಿಧ ದೇಶಗಳಿಂದ ಆಮದಾಗಿದೆ. ಇದೇ ವೇಳೆ 105 ಕೋಟಿ ರೂಪಾಯಿ ಮೌಲ್ಯದ 2396 ಮೆಟ್ರಿಕ್‌ ಟನ್‌ ಅಡಿಕೆ ಭಾರತದಿಂದ ರಪ್ತು ಆಗಿದೆ.

ಲೋಕಸಭೆಯಲ್ಲಿ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಸಂಸದ ಬಿ ವೈ ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯವು ಈ ಉತ್ತರ ನೀಡಿದೆ. ಸಂಸದ ರಾಘವೇಂದ್ರ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದಿಂದ ಅಡಿಕೆ ರಫ್ತಿನ ವಿವರ,  ಭಾರತದಿಂದ ಅಡಿಕೆ ರಫ್ತು ಮಾಡುದ ದೇಶಗಳು, ಕಳೆದ ಹತ್ತು ವರ್ಷಗಳಲ್ಲಿ ಭಾರತಕ್ಕೆ ಅಡಿಕೆ ಆಮದಿನ ವಿವರ ಹಾಗೂ  ಅಡಿಕೆ ರಫ್ತನ್ನು ಉತ್ತೇಜಿಸಲು  ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದ್ದರು.

ಪ್ರಶ್ನೆಗೆ ಸಚಿವಾಲಯವು ನೀಡಿದ ಉತ್ತರದಂತೆ, 2015-16 ರಿಂದ 2024-25 ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ, ಅಡಿಕೆಯ ರಫ್ತು ಮೌಲ್ಯದ ಆಧಾರದಲ್ಲಿ ಹೆಚ್ಚಳವಾಗಿದೆ.  ರೂಪಾಯಿಗಳಲ್ಲಿ 35.69%  ಮತ್ತು  ಡಾಲರ್‌ಗಳಲ್ಲಿ 6.2% ರಷ್ಟು ಹೆಚ್ಚಾಗಿದೆ.

2024-25 ರಲ್ಲಿ ಭಾರತದಿಂದ 2396 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿದ್ದು, 2023-24 ರಲ್ಲಿ 400 ಕೋಟಿ ರೂಪಾಯಿ ಮೌಲ್ಯದ  10636 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿತ್ತು. 2022-23 ರಲ್ಲಿ 13765 ಮೆಟ್ರಿಕ್‌ ಟನ್‌, 2021-22 ರಲ್ಲಿ 6663 ಮೆಟ್ರಿಕ್‌ ಟನ್‌, 2020-21 ರಲ್ಲಿ 3195 ಮೆಟ್ರಿಕ್‌ ಟನ್‌ ಅಡಿಕೆ ರಪ್ತು ಮಾಡಲಾಗಿತ್ತು.  ಮಲೇಶ್ಯಾಕ್ಕೆ  ಅತೀ ಹೆಚ್ಚು ಅಡಿಕೆ ರಫ್ತಾಗಿದೆ. ಕಳೆದ ಸಾಲಿನಲ್ಲಿ 224 ಮೆಟ್ರಿಕ್‌ ಟನ್‌ ಅಡಿಕೆ ರಫ್ತು ಮಾಡಲಾಗಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಇದೇ ವೇಳೆ ಅಡಿಕೆ ಆಮದು ಕೂಡಾ ಏರಿಕೆಯಾಗಿದೆ.  2024-25 ರ ಅವಧಿಯಲ್ಲಿ 1208 ಕೋಟಿ ರೂಪಾಯಿ ಮೌಲ್ಯದ 42236 ಮೆಟ್ರಿಕ್‌ ಟನ್‌ ಅಡಿಕೆ ಆಮದಾಗಿದೆ.  2023-24 ರಲ್ಲಿ 40386 ಮೆಟ್ರಿಕ್‌ ಟನ್‌, 2022-23 ರಲ್ಲಿ 78233 ಮೆಟ್ರಿಕ್‌ ಟನ್‌, 2021-22 ರಲ್ಲಿ 30049 ಮೆಟ್ರಿಕ್‌ ಟನ್‌, 2020-21 ರಲ್ಲಿ 23988 ಮೆಟ್ರಿಕ್‌ ಟನ್‌ ಅಡಿಕೆ ಆಮದು ಆಗಿದೆ. …… ಮುಂದೆ ಓದಿ……

2024-25 ನೇ ಸಾಲಿನಲ್ಲಿ ಬಾಂಗ್ಲಾದೇಶದಿಂದ ಅತೀ ಹೆಚ್ಚು ಅಡಿಕೆ ಆಮದಾಗಿದ್ದು, 12155 ಮೆಟ್ರಿಕ್‌ ಟನ್‌ ಅಡಿಕೆ ಬಂದಿದೆ. ಉಳಿದಂತೆ ಶ್ರೀಲಂಕಾ, ಮ್ಯಾನ್ಮಾರ್‌, ಇಂಡೋನೇಶ್ಯಾ, ಯುಎಇ, ಮಲೇಶ್ಯಾ, ಒಮನ್‌, ಸಿಂಗಾಪುರ, ಭೂತಾನ್‌, ಥೈಲ್ಯಾಂಡ್‌ ಹಾಗೂ ಇತರ ದೇಶಗಳಿಂದ ಅಡಿಕೆ ಆಮದು ಆಗಿದೆ.  ಅಚ್ಚರಿ ಎಂದರೆ ಯುಎಇಯಿಂದಲೂ ಅಡಿಕೆ ಆಮದು ಆಗಿದೆ..! ಯುಎಇಯಿಂದ 390 ಮೆಟ್ರಿಕ್‌ ಟನ್‌ ಅಡಿಕೆ ಬಂದಿದೆ, ಒಮನ್‌ನಿಂದ 144 ಮೆಟ್ರಿಕ್‌ ಟನ್‌ ಅಡಿಕೆ ಬಂದಿರುವುದಾಗಿ ವರದಿ ನೀಡಲಾಗಿದೆ.

ಭಾರತದಿಂದ ಅಡಿಕೆ ರಫ್ತು ಮಾಡುವ ಉದ್ದೇಶದಿಂದಲೂ ಪ್ರಯತ್ನ ಮಾಡಿದೆ. ಅಡಿಕೆ ರಫ್ತು ಪ್ರಚಾರಕ್ಕಾಗಿ, ಸೆಪ್ಟೆಂಬರ್ 2025 ರಲ್ಲಿ ಕಾರ್ಯಕ್ರಮ ಮಾಡಿತ್ತು. ಈಗಲೂ ಪ್ರಯತ್ನ ಮಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

17 hours ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

17 hours ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

17 hours ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

17 hours ago

ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ

ಬ್ರಿಟನ್‌ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…

17 hours ago

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

1 day ago