Advertisement
ಸುದ್ದಿಗಳು

ಅಡಿಕೆಯ ಪರ್ಯಾಯ ಬಳಕೆ | ಅಡಿಕೆ ಕೇವಲ ಜಗಿಯಲು ಮಾತ್ರವಲ್ಲ.. | ಆಹಾರದಲ್ಲೂ ಅಡಿಕೆ ಬಳಕೆಗೆ ಆದ್ಯತೆ |

Share

ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಒಂದು ಕಡೆ ಅಡಿಕೆ ಹಾನಿಕಾರಕ ಎಂಬ ಗುಮ್ಮ ಆಗಾಗ ಕಾಡುತ್ತದೆ. ಇನ್ನೊಂದು ಕಡೆ ಅಡಿಕೆ ಮಾರುಕಟ್ಟೆಯ ಮೇಲೂ ವ್ಯತ್ಯಾಸ ಕಂಡುಬರುತ್ತದೆ. ಈ ಎಲ್ಲದರ ನಡುವೆ ಅಡಿಕೆ ಬೆಳೆ ವಿಸ್ತರಣೆಯೂ ಆಗುತ್ತಿದೆ. ವಿಸ್ತರಣೆಯ ವೇಗದಲ್ಲಿ ಅಡಿಕೆ ಬಳಕೆಯಾಗುತ್ತಿಲ್ಲ. ಅಡಿಕೆಯನ್ನು ಬೇರೆ ಬೇರೆ ಕಡೆ ಹೆಚ್ಚಾಗಿ ಬಳಕೆ ಮಾಡುವಂತಾಗಬೇಕು. ಇದೀಗ ಆಹಾರದಲ್ಲೂ ಅಡಿಕೆ ಬಳಕೆ ಆರಂಭವಾಗಿದೆ. ಉತ್ತರ ಕನ್ನಡದಲ್ಲಿ ಅಡಿಕೆ ಸಿಂಗಾರದ ಪಲ್ಯ ಈಗ ಪೇಮಸ್ಸಾಗುತ್ತಿದೆ.

ಅಡಿಕೆ ಉಪ್ಪಿನಕಾಯಿ, ಅಡಿಕೆ ಹೋಳಿಗೆ, ಅಡಿಕೆ ತಾಂಬೂಲು ಹೀಗೇ ಹಲವು ವಸ್ತುಗಳು ಬಳಕೆಗೆ ಬಂದಿದೆ. ಇದೀಗ ಅಡಿಕೆ ಸಿಂಗಾರದ ಪಲ್ಯವೂ ಸೇರಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಮಂದಿ ಈ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಈಗ ಮತ್ತೆ ಅಡಿಕೆ ಸಿಂಗಾರವೂ ಆಹಾರದ ಸಾಲಿನಲ್ಲಿ ಸೇರುತ್ತಿದೆ. ಅಡಿಕೆ ಬೆಳೆಯುವ ನಾಡಾದ ಶಿರಸಿ, ಸಿದ್ಧಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಿಂಗಾರದ ಪಲ್ಯ ಪ್ರಯೋಗವಾಗಿದೆ.

ಅಡಿಕೆ ಸಿಂಗಾರದ ಪಲ್ಯವನು ಅಲ್ಲಿ ಹೀಗೆ ಮಾಡಲಾಗುತ್ತದೆ ಎಂದು ಮಾಧ್ಯಮದ ಮೂಲಕ ವಿವರ ಲಭ್ಯವಾಗಿದೆ.  ಎಳೆ ಸಿಂಗಾರವನ್ನು ಆರಿಸಿಕೊಂಡು ಬರಬೇಕು. ತೀರಾ ಬಲಿತ ಸಿಂಗಾರವಾದರೆ ತಿನ್ನೋದಕ್ಕೆ ಆಗೋದಿಲ್ಲ. ಇನ್ನು ತೀರಾ ಎಳೆಯದ್ದು ಆದ್ರೂ ಉರಿಗೆ ಕರಗಿಬಿಡುತ್ತದೆ. ಹೀಗಾಗಿ ಬಿಳಿಯಾಗಿರುವ ಸಣ್ಣ ಸಿಂಗಾರದ ಹೂವನ್ನು ಕೊಯ್ದುಕೊಂಡು ಬಂದು ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಸಿಂಗಾರದ ತುಂಡುಗಳನ್ನೆಲ್ಲಾ ಹದವಾಗಿ ನೀರಿನಲ್ಲಿ ಬೇಯಿಸಬೇಕು. ಅದಾದ ಮೇಲೆ ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ, ಕೊಬ್ಬರಿ ಎಣ್ಣೆ, ಬೇವಿನಸೊಪ್ಪು, ಕೊತ್ತಂಬರಿಯ ಒಗ್ಗರಣೆಯನ್ನು ಮಾಡಿಕೊಳ್ಳಬೇಕು. ನಂತರ ಬೆಂದ ಸಿಂಗಾರದ ನೀರನ್ನು ಬಸಿದು, ಬೆಂದ ಸಿಂಗಾರವನ್ನು ಒಗ್ಗರಣೆಗೆ ಸೇರಿಸಿ, ಚೂರೇ ಚೂರು ಎಣ್ಣೆಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಸಾಂಬಾರ್ ಮಸಾಲೆ ಬೇಕಿದ್ದರೆ ಕಾಯಿತುರಿ ಸೇರಿಸಿಕೊಂಡು ಮಾಡಬಹುದು. ಸ್ವಲ್ಪ ಹೊತ್ತು ಚೆನ್ನಾಗಿ ಸೌಟಲ್ಲಿ ತಿರವುತ್ತಾ ಬೇಯಿಸಿಬಿಟ್ಟರೆ ಸಿಂಗಾರದ ಘಮಘಮವೆನಿಸುವ ಪಲ್ಯ ಸವಿಯಲು ಸಿದ್ಧವಾಗುತ್ತೆ.

ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಆದ್ಯತೆ ಇಂದು ಅಗತ್ಯವಾಗಿದೆ. ಈ ಮೊದಲು ಅಡಿಕೆಯ ವಿವಿಧ ಬಳಕೆ ಇತ್ತು, ಅಡಿಕೆಯ ಬಣ್ಣವೂ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ದೇಸೀ ಉಡುಪುಗಳಿಗೂ ಅಡಿಕೆಯ ಬಣ್ಣ ಉತ್ತಮವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

5 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

6 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

16 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

2 days ago