MIRROR FOCUS

ಅಡಿಕೆ ಹಳದಿ ಎಲೆರೋಗ | ಜನಪ್ರತಿನಿಧಿಗಳು ಮಾಡಬೇಕಾದ್ದೇನು..? | ಸರ್ಕಾರ ಮಾಡಬೇಕಾದ್ದೇನು..? | ಚುನಾವಣಾ ಸಮಯದಲ್ಲಿ ಏಕೆ ಚರ್ಚೆಯಾಗುತ್ತಿಲ್ಲ..?‌ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖವಾಗಿ ಕೃಷಿ ಹಿನ್ನೆಲೆ ಹೊಂದಿದ ಜಿಲ್ಲೆ. ಅದರಲ್ಲೂ ಅಡಿಕೆ ಬೆಳೆಯೇ ಪ್ರಮುಖವಾಗಿದೆ. ಆದರೆ, ಸುಳ್ಯದಿಂದ ತೊಡಗಿ ಈಗ ಬಹುಪಾಲು ಕಡೆ ಹಳದಿ ಎಲೆರೋಗ ಕಾಣಿಸಿದೆ. ಸುಳ್ಯದ ಸಂಪಾಜೆ, ಅರಂತೋಡು, ಮರ್ಕಂಜ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಭವಿಷ್ಯದಲ್ಲಿ ದ ಕ ಜಿಲ್ಲೆಯ ಎಲ್ಲಾ ಕೃಷಿಕರಿಗೂ ಇದೊಂದು ಸವಾಲಾಗಿದೆ. ಹಾಗಿದ್ದರೂ ಚುನಾವಣಾ ವಿಷಯ ಇದಾಗುತ್ತಿಲ್ಲ.‌ ಹಾಗೆ ನೋಡಿದರೆ ರಾಜ್ಯದಲ್ಲಿ ಇಂದು ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದಕ್ಕಾಗಿ ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ ಮತ್ತು ಚುನಾವಣೆ ಈ ಬಗ್ಗೆ ಕೃಷಿಕ ರಮೇಶ ದೇಲಂಪಾಡಿ ಅವರ ಜೊತೆ ದ ರೂರಲ್‌ ಮಿರರ್.ಕಾಂ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.. …….ಮುಂದೆ ಓದಿ…..

Advertisement
Advertisement
ಇಂದು ಎಲೆಚುಕ್ಕಿ ರೋಗದ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹೆಚ್ಚಿನದೇನೂ ಮಾಡಲು ಇಲ್ಲ. ವಿಜ್ಞಾನಿಗಳು ಈಗಾಗಲೇ ಅಧ್ಯಯನ ನಡೆಸಿ ಪರಿಹಾರವನ್ನೂ ಹೇಳಿದ್ದಾರೆ. ಅದನ್ನು ಜಾರಿಗೊಳಿಸಬೇಕಾದ್ದು ಕಾರ್ಯಾಂಗ. ಈಗ ವಿಜ್ಞಾನಿಗಳ ಪಾತ್ರವೂ ಇಲ್ಲ. ಸಾಮೂಹಿಕ ಸಿಂಪಡಣಾ ವ್ಯವಸ್ಥೆಯನ್ನು ಕಾರ್ಯಾಂಗ ಮಾಡಬೇಕು. ಅದು ಆಗದೇ ಇರುವುದು ಕಾರಣ, ಇದರ ಅನುಷ್ಟಾನ ಹೇಗೆ ಎಂಬುದು ಮಾತ್ರಾ ಇರುವುದು.
ಆದರೆ, ಹಳದಿ ಎಲೆರೋಗ ವ್ಯವಸ್ಥೆಯ ವಿಫಲತೆ. ಇಂತಹ ಸಮಸ್ಯೆಗಳಲ್ಲಿ ದೀರ್ಘವಾದ ಅಧ್ಯಯನ, ಸಂಶೋಧನೆ ಅಗತ್ಯ ಇದೆ. ಇಲ್ಲಿ ಈ ಬಗ್ಗೆ ನಿರ್ಧಾರದ ಹಂತದಲ್ಲಿ ವೈಜ್ಞಾನಿಕ ತಿಳುವಳಿಕೆ ಕೂಡಾ ಬೇಕು. ಈಗ ಅಡಿಕೆ ಹಳದಿ ಎಲೆರೋಗದ ವಿಷಯದಲ್ಲೂ ಎಲ್ಲಾ ಪ್ರಯತ್ನವೂ ವೈಫಲ್ಯ ಕಾಣಲು ಕಾರಣವೂ ಇದೇ. ನಿರ್ಧಾರ ಹಂತದಲ್ಲಿ ಸೋಲುತ್ತದೆ.
ರಮೇಶ್‌ ದೇಲಂಪಾಡಿ
ಸರ್ಕಾರವು ತನ್ನದೇ ಸಂಸ್ಥೆಗಳನ್ನು ನಂಬಬೇಕು. ನಮ್ಮ ಪ್ರತಿನಿಧಿಗಳಿಗೆ ಇಲ್ಲೇ ನಂಬಿಕೆ ಇಲ್ಲ, ಕೇಳಿದರೆ ವಿಜ್ಞಾನಿಗಳು, ವಿದೇಶಗಳ ಸಂಸ್ಥೆ ಇತ್ಯಾದಿ ಗಳ ಬಗ್ಗೆ ಜನಪ್ರತಿನಿಧಿಗಳೇ ಮಾತನಾಡುತ್ತಾರೆ. ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವ ಕೆಲಸ ಆಗುತ್ತದೆಯಷ್ಟೆ. ಕಳೆದ ಸಲವೂ ಹಾಗೇಯೇ ಆಗಿದೆ. ವಿದೇಶ ಎಂದೆಲ್ಲಾ ಹೇಳಿದ ಬಳಿಕ ಒಂದು ಹೆಜ್ಜೆಯೂ ಮುಂದೆ ಇಡಲಿಲ್ಲ. ಹೀಗಾಗಿ ವಿಫಲವಾಗಲು ಕಾರಣವಾಗುತ್ತದೆ. ಮುಂದೆ ಬರುವ ಪ್ರತಿನಿಧಿಗಳು ಇದನ್ನೆಲ್ಲಾ ಸರಿ ಮಾಡಬೇಕಿದೆ.
ಹಳದಿ ಎಲೆರೋಗ ಒಂದಷ್ಟು ಕಡೆ ವ್ಯಾಪಿಸಿದೆ. ವಿಜ್ಞಾನಿಗಳಲ್ಲೂ ಅಭಿಪ್ರಾಯ ವ್ಯತ್ಯಾಸ ಇದೆ, ಕೃಷಿಕರಲ್ಲೂ ಇದೆ. ಆದರೆ ಜನಪ್ರತಿನಿಧಿಗಳಿಗೆ ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಇಲ್ಲ. ಇದನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು.
ಹಳದಿ ಎಲೆರೋಗಕ್ಕೆ ಶತಮಾನದ ಹಿನ್ನೆಲೆ ಇದೆ. ೧೦೦ ವರ್ಷದಲ್ಲಿ ಆಗದ್ದು ಈಗ ಆಗುತ್ತದಾ ಎನ್ನುವುದು ಕೃಷಿಕರ ಪ್ರಶ್ನೆ.  ಇದು  ಮೂಲಭೂತ ಸಮಸ್ಯೆಯ ಪ್ರಶ್ನೆ. ಹೀಗಾಗಿ ಈಗ ತಮಗೆ ಏನು ಲಾಭ ಮಾಡಬಹುದು ಎನ್ನುವುದು ಕೃಷಿಕರ ದೃಷ್ಟಿ. ಅದು ಕೂಡಾ ಸರಿಯಾದ್ದೇ.
ಅದಕ್ಕಾಗಿ ಹಳದಿ ಎಲೆರೋಗವೇ ಪರಿಹಾರವಾದರೆ ಸಂಪೂರ್ಣ ಪರಿಹಾರ ಮತ್ತು ಶಾಶ್ವತ ಪರಿಹಾರ  ಎನ್ನುವುದು ಕೃಷಿಕರಿಗೆ ಅರ್ಥವಾಗಬೇಕು. ಇದಕ್ಕಾಗಿ ಅಡಿಕೆ ಬೆಳೆಗಾರ ಜಾಗೃತವಾಗಬೇಕು. ಇದುವರೆಗಿನ ಸಮಸ್ಯೆಯೂ ಆದದ್ದು ಅದೇ, ಅಡಿಕೆ ಬೆಳೆಗಾರ ಓಟ್‌ ಬ್ಯಾಂಕ್‌ ಆಗಿಲ್ಲ. ಓಟ್‌ ಬ್ಯಾಂಕ್‌ ಆಗಬೇಕು.
ಈಗ ಸಂಶೋಧನೆ ಮೇಲೆ ಒತ್ತಡ ಬರಬೇಕು. ಇಲ್ಲದೇ ಇದ್ದರೆ ಸರ್ಕಾರಗಳು ಆ ತಕ್ಷಣದ ಪರಿಹಾರಕ್ಕೆ ಮಾತ್ರಾ ಯೋಚಿಸುತ್ತದೆ. ಕೃಷಿಕೆಗೆ ಸಾಲಮನ್ನಾ ಇರಲಿ, ಅದು ತಕ್ಷಣಕ್ಕೆ ಸಿಗಬೇಕಾದ ನೆರವು. ಅದು ಸಹಜವಾಗಿಯೇ ಬೇಕಾಗಿದೆ. ಸಂಶೋಧನೆ ದೀರ್ಘ ಕಾಲದ್ದು. ಹೀಗಾಗಿ ಅದು ತಕ್ಷಣವೇ ಆಗದು. ಅಡಿಕೆ ದೀರ್ಘಾವಧಿ ಕೃಷಿ. ಹೀಗಾಗಿ ತಕ್ಷಣವೇ ಇಲ್ಲಿ ಪರಿಹಾರವೂ ಇಲ್ಲಿ ಅಸಾಧ್ಯ.
ಕೃಷಿಕರಿಗೆ ತಕ್ಷಣದ ಅವಶ್ಯತೆ ಸಾಲಮನ್ನಾ ಬೇಕಿದೆ. ಅದು ತಪ್ಪಲ್ಲ, ಅದೂ ಬಹುಮುಖ್ಯ, ಅದರ ಜೊತೆಗೆ ಸಂಶೋಧನೆಯ ಬೇಡಿಕೆ ನಿಲ್ಲಿಸಬಾರದು. ಸಂಶೋಧನೆ ಅಂದರೆ ಯಾವ ರೀತಿಯ ಸಂಶೋಧನೆ ಎಂಬುದೂ ಮುಖ್ಯ. ಸಂಶೋಧನೆ ಎಂಬುದು ದೀರ್ಘಾವಧಿ ಯೋಜನೆ ಬೇಕು, ಅಂತಹ ವಿಜ್ಞಾನಿಗಳನ್ನು ನಿಯೋಜನೆ ಮಾಡಬೇಕು. ಇದಕ್ಕೆ ಪೂರಕವಾದ ಕೆಲಸ ಸರ್ಕಾರ ಮಾಡಬೇಕು. ಗೆದ್ದು ಬರುವ ಜನಪ್ರತಿನಿಧಿ ಮಾಡಬೇಕು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 22.06.2025| ಜೂ.28 ರಿಂದ ಮಳೆ‌ ಕಡಿಮೆಯಾಗಲಿದೆಯಾ ?

23.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

6 hours ago

ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!

ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ…

7 hours ago

ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಟ 1 ಮೀಟರ್…

8 hours ago

ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಎಐ ಕೃಷಿ ನೀತಿ | ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ಮೀಸಲು

ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್‌ಗಳು ಮತ್ತು…

9 hours ago

ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ

ಎತ್ತಿನ ಹೊಳೆ  ಯೋಜನೆಯ  ಮೂಲಕ  ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…

10 hours ago

ಮಕರ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಯಶಸ್ಸು, ಸಂಪತ್ತು

ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago